ಅನಂತ ಸ್ವರ ನಮನ’ ಸಂಗೀತೋತ್ಸವಕ್ಕೆ ತೆರೆ – ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್, ಹುಬ್ಬಳ್ಳಿಯ ಕ್ಷಮತಾ ಸಂಸ್ಥೆಗಳಿಂದ ಕಾರ್ಯಕ್ರಮ ಆಯೋಜನೆ…..ಮೂರು ದಿನಗಳ ‘ಅನಂತ ಸ್ವರ ನಮನ’ ಸಂಗೀತೋತ್ಸವ…..

Suddi Sante Desk
ಅನಂತ ಸ್ವರ ನಮನ’ ಸಂಗೀತೋತ್ಸವಕ್ಕೆ ತೆರೆ –  ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್, ಹುಬ್ಬಳ್ಳಿಯ ಕ್ಷಮತಾ ಸಂಸ್ಥೆಗಳಿಂದ ಕಾರ್ಯಕ್ರಮ ಆಯೋಜನೆ…..ಮೂರು ದಿನಗಳ ‘ಅನಂತ ಸ್ವರ ನಮನ’ ಸಂಗೀತೋತ್ಸವ…..

ಧಾರವಾಡ

ಅನಂತ ಹರಿಹರ ಅವರು ಯುವ ಕಲಾವಿದರನ್ನು ಪ್ರೋತ್ಸಾಹಿಸುತ್ತಿದ್ದರು ಹೀಗಾಗಿ ಧಾರವಾಡ ಸಂಗೀತ ಕ್ಷೇತ್ರದ ಬೆಳೆವಣಿಗೆಗೆ ಅನಂತ ಹರಿಹರ ಅವರ ಕೊಡುಗೆ ಅಪಾರ ಎಂದು ವಿಧಾನಸಭೆಯ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದರು.

ಧಾರವಾಡದ ಆಲೂರು ವೆಂಕಟ. ರಾವ್ ಸಭಾಭವನದಲ್ಲಿ ಧಾರವಾಡದ ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ಹಾಗೂ ಹುಬ್ಬಳ್ಳಿಯ ಕ್ಷಮತಾ ಸಂಸ್ಥೆಗಳ ಜಂಟಿಯಾಗಿ ಆಯೋಜಿಸಿದ್ದ ಮೂರು ದಿನಗಳ ‘ಅನಂತ ಸ್ವರ ನಮನ’ ಸಂಗೀತೋತ್ಸವದ ಸಮಾರೋಪ ಸಮಾರಂಭ ದಲ್ಲಿ ಅವರು ಮಾತನಾಡಿದರು.

ಅನಂತ ಹರಿಹರ ಅವರನ್ನು ಕಳೆದುಕೊಂಡಿದ್ದ ಸಂಗೀತದ ರತ್ನ ಕಳಿಚಿದಂತಾಗಿದೆ ಅವರು ಅನಾಮಿಕ ಸಂಗೀತ ಸೇವಕರಾಗಿದ್ದರು. ಪ್ರತಿ ಸಂಗೀತ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ಆಯೋಜಿಸುವಲ್ಲಿ ಪ್ರಸಿದ್ಧರಾಗಿದ್ದರು. ಈ ಮೂಲಕ ಆರು ದಶಕಗಳ ಕಾಲ ಸಂಗೀತ-ನೃತ್ಯ-ಸಾಂಸ್ಕೃತಿಕ ಲೋಕದಲ್ಲಿ ಕಲಾವಿದರು ಹಾಗೂ ಶ್ರೋತೃವರ್ಗದ ಕೊಂಡಿಯಾಗಿದ್ದರು ಎಂದರು.

ಪಂಡಿತ. ಬಿ.ಎಸ್. ಮಠ ಮಾತನಾಡಿ, ಅನಂತ ಹರಿಹರ ಅವರು ಎಲ್ಲ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿದ್ದರು. ಅವರ ಸಹಕಾರವನ್ನು ಮರೆಯು ವಂತಿಲ್ಲ. ಆದ್ದರಿಂದ ಕಲಾವಿದರ ಸ್ಮರಣೆಯಲ್ಲಿ ಅನಂತ ಹರಿಹರ ಅವರು ಸದಾ ಇರುತ್ತಾರೆ ಎಂದರು.

ಶ್ರೀಪಾದ ಹೆಗಡೆ, ಮಾಜಿ ಮೇಯರ್ ಈರೇಶ ಅಂಚಟಗೇರಿ ಮಾತನಾಡಿದರು. ಎಚ್.ವಿ. ಕಾಖಂಡಕಿ, ಡಾ. ರಮಾಕಾಂತ ಜೋಶಿ ಇತರರು ಉಪಸ್ಥಿತರಿದ್ದರು.ಸಂಗೀತ ಕಾರ್ಯಕ್ರಮ ಸಂಪನ್ನಅನಂತ ಹರಿಹರ ಅವರ ಸಂಸ್ಮರಣೆಯ “ಅನಂತ ಸ್ವರ ನಮನ” ಸಂಗೀತೋತ್ಸವ ಭಾನುವಾರ ಸಂಪನ್ನಗೊಂಡಿತು. ಮೂರನೇ ದಿನದ ಕಾರ್ಯಕ್ರಮ ನಿಖಿಲ್ ಜೋಶಿ ಅವರ ಸಿತಾರ ವಾದನದೊಂದಿಗೆ ಆರಂಭ ದೊರೆಯಿತು.

ಅವರು ತಮ್ಮ ಸಿತಾರ ತಂತುಗಳಿಂದ ಗಾವತಿ ರಾಗವನ್ನು ಪ್ರಸ್ತುತಪಡಿಸಿದರು. ಇವರಿಗೆ ಅಕ್ಷಯ ಭಟ್ಟ ತಬಲಾ ಸಾಥ್ ನೀಡಿದರು. ನಂತರ ಯುವ ಕಲಾವಿದೆ ಶಿವಾನಿ ಮಿರಜಕರ ಜೈನ ಅವರು ಭೂಪಾಲಿ ರಾಗವನ್ನು ಸಾದರಪಡಿಸಿದರು. ವಿಲಂಬಿತ್ ಏಕತಾಲ್ ನಲ್ಲಿ “ಜಬ ಮೇ ಜಾನಿ…”, ಧೃತ್ ತೀನತಾಲದಲ್ಲಿ “ಮೊರಾ ಜಾಂಝ ಮಂದಿಲಗಾ…” ಸಾದರಪಡಿಸಿದರು.

ಅವರಿಗೆ ಶ್ರೀಧರ ಮಾಂಡ್ರೆ ತಬಲಾ ಹಾಗೂ ಸತೀಶ ಭಟ್ಟ ಹೆಗ್ಗಾರ ಹಾರ್ಮೋನಿಯಂ ಸಾಥ್ ನೀಡಿದರು. ಕೊನೆಯಲ್ಲಿ ಧಾರವಾಡ ಘರಾಣೆಯ ಯುವ ಪ್ರತಿಭೆ ಮೊಹಸಿನ್ ಖಾನರ ಸಿತಾರ ವಾದನದಲ್ಲಿ ಪೂರಿಯಾ ಕಲ್ಯಾಣ ರಾಗವನ್ನು ಪ್ರಸ್ತುತಪಡಿಸಿ ನೆರೆದವರನ್ನು ಮಂತ್ರಮುಗ್ಧಗೊ ಳಿಸಿದರು.

ಇವರಿಗೆ ಯುವ ತಬಲಾ ಪ್ರತಿಭೆ ಹೇಮಂತ ಜೋಶಿ ಸಮರ್ಥ ತಬಲಾ ಸಾಥ್ ನೀಡಿದರು. ಧಾರವಾಡದ ಪ್ರಬುದ್ದ ಗಾಯಕ ಕುಮಾರ ಮರಡೂರ ಅವರ ಗಾಯನದೊಂದಿಗೆ ಈ ಕಾರ್ಯಕ್ರಮಕ್ಕೆ ತೆರೆ ಬಿತ್ತು.

ಸುದ್ದಿ ಸಂತೆ ನ್ಯೂಸ್ ಧಾರವಾಡ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.