ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಶಿಕ್ಷಕರಿಗೆ ವಿಶೇಷ ರಜೆ ರಜೆ ಘೋಷಣೆ – ಹಿಂದಿ ಶಿಕ್ಷಕರಿಗೆ ಈ ಒಂದು ವಿಶೇಷ ರಜೆ ನೀಡಿ ಆದೇಶ ಮಾಡಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ…..

Suddi Sante Desk

ಬೆಂಗಳೂರು –

ಸೆಪ್ಟಂಬರ್ 26 ರಂದು ದಾವಣಗೆರೆಯಲ್ಲಿ ರಾಜ್ಯ ಮಟ್ಟದ ಹಿಂದಿ ಶಿಕ್ಷಕರ ಸಮ್ಮೇಳನ ನಡೆಯಲಿದೆ.ರಾಜ್ಯ ಪ್ರೌಢ ಶಾಲಾ ಹಿಂದಿ ಶಿಕ್ಷಕರ ಸಂಘ ಮತ್ತು ದಾವಣಗೆರೆ ಜಿಲ್ಲಾ ಘಟಕ ಇವರ ಆಶ್ರಯದಲ್ಲಿ ಈ ಒಂದು ಸಮ್ಮೇಳನವು ಬೆಣ್ಣೆ ನಗರಿ ದಾವಣಗೆರೆಯಲ್ಲಿ ನಡೆಯಲಿದ್ದು ಈ ಒಂದು ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಹಿಂದಿ ಶಿಕ್ಷಕರಿಗೆ ವಿಶೇಷ ರಜೆಯನ್ನು ಘೋಷಣೆ ಮಾಡಲಾಗಿದೆ.

ಹೌದು ಈ ಒಂದು ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಹಿಂದಿ ಶಿಕ್ಷಕರಿಗೆ ವಿಶೇಷ ಸಾಂದರ್ಭಿಕ ರಜೆಯನ್ನು ನೀಡುವಂತೆ ರಾಜ್ಯ ಘಟಕ ಇಲಾಖೆಗೆ ಪತ್ರವನ್ನು ಬರೆದಿತ್ತು ಈ ಒಂದು ಪತ್ರಕ್ಕೆ ಸ್ಪಂದಿಸಿ ರಾಜ್ಯದ ಸರ್ಕಾರಿ ಅನುದಾನಿತ ಸೇರಿದಂತೆ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಹಿಂದಿ ಶಿಕ್ಷಕ ಬಂಧುಗ ಳಿಗೆ ವಿಶೇಷ ಸಾಂದರ್ಭಿಕ ಓಓಡಿ ರಜೆಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧಿನ ಕಾರ್ಯದರ್ಶಿ ಶ್ರೀನಿವಾಸಮೂರ್ತಿ ಅವರು ನೀಡಿದ್ದಾರೆ.ಒಂದು ದಿನ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಈ ಒಂದು ವಿಶೇಷ ರಜೆಯನ್ನು ನೀಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.