ಬೆಂಗಳೂರು –
ಆತ್ಮಿಯ ಮುಖ್ಯೋಪಾಧ್ಯಾಯರೆ,ಸಹ ಶಿಕ್ಷಕರೇ ನಾಳೆ ದಿನಾಂಕ 17-09-2021ರಂದು ನಡೆಯುವ ಬೃಹತ್ ಕೋವಿಡ್ ಲಸಿಕಾ ಅಭಿಯಾನ ಕಾರ್ಯ ಕ್ರಮದಲ್ಲಿ ಮುಖ್ಯೋಪಾಧ್ಯಾಯರು ಹಾಗೂ ಸಹ ಶಿಕ್ಷಕರು ಕಡ್ಡಾಯವಾಗಿ ಭಾಗವಹಿಸಿ ನಿಮ್ಮ ಗ್ರಾಮಕ್ಕೆ ನೀಡಿರುವ ಗುರಿಯನ್ನು ಪೂರ್ಣಗೊಳಿಸ ತಕ್ಕದ್ದು.ನಾಳೆ ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಲಸಿಕಾ ಅಭಿಯಾನ ನಡೆಯುತ್ತಿದ್ದು, ಅಭಿಯಾನ ಮುಕ್ತಾಯವಾಗುವವರೆಗೂ ಎಲ್ಲರೂ ಕರ್ತವ್ಯ ನಿರತರಾಗಿರುವುದು.ನಾಳಿನ ಲಸಿಕಾ ಅಭಿಯಾನದಲ್ಲಿ ಜಿಲ್ಲಾಧಿಕಾರಿಗಳು,ಜಿಲ್ಲಾ. ಪಂಚಾ ಯತ,ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಉಪನಿರ್ದೇಶಕರು,ತಹಶಿಲ್ದಾರರು, BEO, BRC, ಹಾಗೂ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಸಹ ಸದರಿ ಅಭಿಯಾನದಲ್ಲಿ ಭಾಗವಹಿಸುತ್ತಿದ್ದು ಯಾವುದೇ ಕಾರಣಕ್ಕೂ ಯಾರೂ ಗೈರಾಗುವಂತಿಲ್ಲ ಒಂದು ವೇಳೆ ಯಾರಾದರೂ ಗೈರಾದಲ್ಲಿ ಮುಂದಿನ ಆಗುಹೋಗುಗಳಿಗೆ ತಾವೇ ನೇರ ಹೊಣೆಗಾರ ರುತ್ತೀರಿ
ಒಂದು ವೇಳೆ ನಿಮ್ಮ ಗ್ರಾಮದಲ್ಲಿ ಲಸಿಕಾ ಅಭಿ ಯಾನ ಇಲ್ಲದಿದ್ದಲ್ಲಿ ಪಕ್ಕದ ಗ್ರಾಮಗಳಿಗೆ ತೆರಳಿ ಆ ಗ್ರಾಮದ ಶಾಲಾ ಸಿಬ್ಬಂದಿಯೊಂದಿಗೆ ಕೈ ಜೋಡಿಸಿ ಅಭಿಯಾನವನ್ನು ಯಶಸ್ವಿಗೊಳಿಸತಕ್ಕದ್ದು.ಒಬ್ಬ ಶಿಕ್ಷಕರು ಕಡ್ಡಾಯವಾಗಿ 20 ಜನರಿಗೆ ಲಸಿಕೆ ಹಾಕಿಸಿ ಶಿಕ್ಷಕವಾರು ವರದಿಯನ್ನು ಲಿಖಿತ ರೂಪದಲ್ಲಿ ನೀಡುವುದು.ಶಾಲೆಯಲ್ಲಿ ಒಬ್ಬ ಶಿಕ್ಷಕರನ್ನು ಹೊರತು ಪಡಿಸಿ ಉಳಿದ ಎಲ್ಲಾ ಶಿಕ್ಷಕರು ಲಸಿಕಾ ಅಭಿಯಾನ ದಲ್ಲಿ ಭಾಗವಹಿಸಲು ಸೂಚಿಸಿದೆ.
ಮುಖ್ಯೋಪಾಧ್ಯಾಯರು ಇಂದು ಶಿಕ್ಷಕರ ಸಭೆ ಕರೆದು ಲಿಖಿತ ರೂಪದಲ್ಲಿ ಜ್ಞಾಪನ ನೀಡಿ ಎಲ್ಲಾ ಶಿಕ್ಷಕರು ಕಡ್ಡಾಯವಾಗಿ ಭಾಗವಹಿಸುವಂತೆ ಕ್ರಮವಹಿಸುವುದು. ದೀರ್ಘಕಾಲದ ರಜೆ ಹೋದ ಶಿಕ್ಷಕರನ್ನು ಹೊರತುಪಡಿಸಿ ಉಳಿದ ಯಾವುದೇ ಶಿಕ್ಷಕರಿಗೆ ನಾಳೆ ರಜೆ ನೀಡುವಂತಿಲ್ಲ.