ಮಹಾಮಾರಿ ಕೋವಿಡ್ ಗೆ ರಾಜ್ಯದಲ್ಲಿ ಮತ್ತೊರ್ವ ಪೊಲೀಸ್ ಪೇದೆ ಬಲಿ….

Suddi Sante Desk

ಬೀದರ –

ರಾಜ್ಯದಲ್ಲಿ ಮಹಾಮಾರಿ ಕೋವಿಡ್ ಸೋಂಕಿಗೆ ಮತ್ತೊರ್ವ ಪೊಲೀಸ್ ಮುಖ್ಯ ಪೇದೆ ಯೊಬ್ಬರು ಮೃತರಾದ ಘಟನೆ ಬೀದರ್ ನಲ್ಲಿ ನಡೆದಿದೆ ರಮೇಶ ಲಕ್ಷ್ಮಣ (45) ಮೃತ ಪಟ್ಟವರಾಗಿದ್ದಾರೆ.ಧನ್ನೂರಾ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ 112 ತುರ್ತು ಸೇವಾ ವಾಹನ (ಇ.ಆರ್.ಎಸ್.ಎಸ್) ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದರು.ಕೋವಿಡ್ ಪಾಸಿಟಿವ್ ಬಂದಿದ್ದ ರಿಂದ ಚಿಕಿತ್ಸೆಗಾಗಿ ಬ್ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದು, ಈ ವೇಳೆ ಹೃದಯಾಘಾತ ಸಂಭವಿಸಿದೆ. ಬಸವ ಕಲ್ಯಾಣ ತಾಲೂಕಿನ ಧನ್ನೂರ್ ಗ್ರಾಮದ ಮೃತ ರಮೇಶ ಅವರ ಪತ್ನಿ ಸಹ ಪೇದೆಯಾಗಿದ್ದು, ಪತ್ನಿ, ಮೂವರು ಮಕ್ಕಳು ಇದ್ದಾರೆ.

ಇನ್ನು ಕೋವಿಡ್ ಮೊದಲ ಅಲೆಯ ವೇಳೆ ಖಟಕ ಚಿಂಚೋಳಿ ಪೊಲೀಸ್ ಠಾಣೆಯ ಪೇದೆ ಸಾವನ್ನಪ್ಪಿ ದ್ದರು.ಈಗ ಬೀದರ ಜಿಲ್ಲೆಯಲ್ಲಿ ಮತ್ತೊರ್ವ ಪೊಲೀಸ್ ಪೇದೆ ನಿಧನರಾಗಿದ್ದು ಆತಂಕವನ್ನುಂಟು ಮಾಡಿದೆ.

.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.