ಕಲಘಟಗಿ ಕ್ಷೇತ್ರದಲ್ಲಿ ಮುಂದುವರೆದ ಛಬ್ಬಿ ದಂಪತಿಗಳ ಅಬ್ಬರ ಜೈ ಜೈ ಎನ್ನುತ್ತಿದ್ದಾರೆ ಅರವಟಗಿ,ಜೈಭಾರತ ಕಾಲೋನಿ ಯವರು – ಹೋದಲ್ಲೆಲ್ಲ ಈ ಬಾರಿ ನಿನೇ ರಾಜಕುಮಾರ ಎನ್ನುತ್ತಿದ್ದಾರೆ ಜನರು

Suddi Sante Desk
ಕಲಘಟಗಿ ಕ್ಷೇತ್ರದಲ್ಲಿ ಮುಂದುವರೆದ ಛಬ್ಬಿ ದಂಪತಿಗಳ ಅಬ್ಬರ ಜೈ ಜೈ ಎನ್ನುತ್ತಿದ್ದಾರೆ ಅರವಟಗಿ,ಜೈಭಾರತ ಕಾಲೋನಿ ಯವರು – ಹೋದಲ್ಲೆಲ್ಲ ಈ ಬಾರಿ ನಿನೇ ರಾಜಕುಮಾರ ಎನ್ನುತ್ತಿದ್ದಾರೆ ಜನರು

ಕಲಘಟಗಿ

ಇನ್ನೇನು ಚುನಾವಣೆಗೆ ಕೆಲ ದಿನಗಳು ಅಷ್ಟೇ ಬಾಕಿ ಇರುವಾಗಲೇ ಇತ್ತ ಧಾರವಾಡ ಜಿಲ್ಲೆಯಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ನಾಗರಾಜ ಛಬ್ಬಿ ಕಲಘಟಗಿ ಕ್ಷೇತ್ರದಲ್ಲಿ ಬಿಡುವಿಲ್ಲದೇ ಸುತ್ತಾ ಡುತ್ತಿದ್ದಾರೆ. ಒಂದು ಕಡೆಗೆ ತಮ್ಮ ಬೆಂಬಲಿಗರೊಂ ದಿಗೆ ಬಿಡುವಿಲ್ಲದೇ ನಾಗರಾಜ ಛಬ್ಬಿ ಅವರು ಸುತ್ತಾಡುತ್ತಿದ್ದಾರೆ ಮತ್ತೊಂದು ಕಡೆಗೆ ಅವರ ಪತ್ನಿ ಶ್ರೀಮತಿ ಜ್ಯೋತಿ ನಾಗರಾಜ ಛಬ್ಬಿ ಅವರು ಕೂಡಾ ಮಹಿಳಾ ಮಣಿಯೊಂದಿಗೆ ಬಿಡುವಿಲ್ಲದೇ ತಿರುಗಾಡುತ್ತಿದ್ದಾರೆ.

ದಿನಕ್ಕೆ ಒಂದು ಎರಡು ಊರುಗಳಲ್ಲಿ ಬಿಡುವಿ ಲ್ಲದೇ ತಿರುಗಾಡುತ್ತಾ ಅಲ್ಲಲ್ಲಿ ಸಭೆ ಸಮಾರಂಭಗ ಳನ್ನು ಮಾಡುತ್ತಾ ಸಮಸ್ಯೆಗಳನ್ನು ಆಲಿಸುತ್ತಾ ಕುಕ್ಕರ್ ಗಳನ್ನು ವಿತರಣೆ ಮಾಡುತ್ತಿದ್ದಾರೆ.ಇನ್ನೂ ನಾಗರಾಜ ಛಬ್ಬಿ ಅವರ ಪತ್ನಿ ಶ್ರೀಮತಿ ಜ್ಯೋತಿ ನಾಗರಾಜ ಛಬ್ಬಿ ಜೈ ಭಾರತ ಕಾಲೋನಿ ಮತ್ತು ಅರವಟಗಿ ಗ್ರಾಮಗಳಲ್ಲಿ ಸಭೆ ಮಾಡಿ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿ ಕುಕ್ಕರ್ ಗಳನ್ನು ವಿತರಣೆ ಮಾಡಿದರು.

ಚುನಾವಣೆಯ ಮುನ್ನವೇ ಕ್ಷೇತ್ರದಲ್ಲಿ ಬೀಡು ಬಿಟ್ಟಿರುವ ಛಬ್ಬಿ ಟೀಮ್ ನವರು ಬಿಡುವಿಲ್ಲದೇ ತಿರುಗಾಡುತ್ತಿದ್ದಾರೆ.ಅಲ್ಲಲ್ಲಿ ಸಭೆ ಮಾಡುತ್ತಾ ಗ್ರಾಮಸ್ಥರೆಂದಿಗೆ ಕೆಲ ಸಮಯ ಕಳೆದು ಸಮ ಸ್ಯೆಗಳನ್ನು ಆಲಿಸಿ ಬರುವ ದಿನಗಳಲ್ಲಿ ಈಡೇರಿ ಸುವ ಭರವಸೆಯನ್ನು ನೀಡುತ್ತಿದ್ದಾರೆ ಹೀಗಾಗಿ ಕ್ಷೇತ್ರದಲ್ಲಿ ಎಲ್ಲಿ ಹೋದರೂ ಕೂಡಾ ಉತ್ತಮ ವಾದ ಸ್ಪಂದನೆ ಸಿಗುತ್ತಿದೆ.

ಇತ್ತ ಅರವಟಗಿ ಗ್ರಾಮದಲ್ಲೂ ಕೂಡಾ ಸಭೆ ಮಾಡಿದ  ಶ್ರೀಮತಿ ಜ್ಯೋತಿ ಛಬ್ಬಿ ಅವರು ಗ್ರಾಮಸ್ಥರಿಗೆ ಕುಕ್ಕರ್ ಗಳನ್ನು ವಿತರಣೆ ಮಾಡಿದರು.ಇವರೊಂದಿಗೆ ಕಿರಣ ಪಾಟೀಲ, ಮಧನ್ ಕುಲಕರ್ಣಿ, ಅಜ್ಜಪ್ಪ ದೇವರಾಯ ಈರವ್ವ ತಿರಕನ್ನವರ ಬಸು,ಬಾಳಮ್ಮ ಯಸೂಫ್, ಶಿವು,ನಿಜಾಮ್,ಶಂಕರ ಕೆಲಗೇರಿ,ಮಂಜು ಹಳಿಯಾಳ,ಭಾರತಿ,ಅವರಾದಿ ನಾಗಪ್ಪ, ಮಂಜು,ನಾಗೇಶ ಸೇರಿದಂತೆ ಹಲವರು ಪಾಲ್ಗೊಂಡು ನಾಯಕರಿಗೆ ಸಾಥ್ ನೀಡಿದರು.

ಸುದ್ದಿ ಸಂತೆ ನ್ಯೂಸ್ ಕಲಘಟಗಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.