ಶ್ರೀಗಂಧ ಮರಗಳ್ಳರ ಬಂಧನ – ಖದೀಮರ ಹೆಡೆಮುರಿ ಕಟ್ಟಿದ ಅರಣ್ಯ ಇಲಾಖೆ ಅಧಿಕಾರಿಗಳು…..

Suddi Sante Desk
ಶ್ರೀಗಂಧ ಮರಗಳ್ಳರ ಬಂಧನ – ಖದೀಮರ ಹೆಡೆಮುರಿ ಕಟ್ಟಿದ ಅರಣ್ಯ ಇಲಾಖೆ ಅಧಿಕಾರಿಗಳು…..

ಯಾದಗಿರಿ

ಶ್ರೀಗಂಧ ಮರಗಳನ್ನ ಕಡಿದು ಸಾಗಿಸ್ತಿದ್ದ ಖದೀಮರ ಹೆಡೆಮುರಿ ಕಟ್ಟಿದ ಅರಣ್ಯ ಇಲಾಖೆ ಅಧಿಕಾರಿಗಳು ಹೌದು ಯಾದಗಿರಿ ತಾಲೂಕಿನ ಬಾಚವಾರ ಅರಣ್ಯ ಪ್ರದೇಶದಲ್ಲಿ ಈ ಒಂದು ಘಟನೆ ನಡೆದಿದೆ.ರಾತ್ರಿ ವೇಳೆ ಅರಣ್ಯ ಪ್ರದೇಶಕ್ಕೆ ಹೊಕ್ಕು ಮರಗಳನ್ನ ಕಡಿದು ಸಾಗಿಸ್ತಿದ್ದ ಕಲ್ಬುರ್ಗಿ ಮೂಲದ ನಾಲ್ವರು.

ದಾಳಿ ಮಾಡಿ ರೆಡ್ ಹ್ಯಾಂಡ್ ಆಗಿ ಓರ್ವನನ್ನು ಹೆಡೆಮುರಿ ಕಟ್ಟಿದ ಅರಣ್ಯಾಧಿಕಾರಿಗಳು.ಕಲ್ಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಅಲ್ಲೂರು ಗ್ರಾಮದ ದೇವಪ್ಪ ಬಂಧಿತ ಆರೋಪಿಗಳಾಗಿ ದ್ದಾರೆ‌.ಶ್ರೀಗಂಧ ಕಳ್ಳತನದಲ್ಲಿ ಮಹದೇವ್ ಜೀರ್ ಸೇರಿ ಮೂರು ಜನ ಎಸ್ಕೇಪ್ ಆಗಿದ್ದಾರೆ‌.

2 ಲಕ್ಷ ಮೌಲ್ಯದ 17 ಕೆಜಿ ಶ್ರೀಗಂದದ ಕಟ್ಟಿಗೆ ಹಾಗೂ ಒಂದು ಬೈಕ್ ಸೀಜ್ ಮಾಡಲಾಗಿದೆ ಇನ್ನೂ ತಂಡದ ಟೀಂ ಲೀಡರ್ ಮಹದೇವ್ ಜೀರ್ 2017ರಲ್ಲಿಯೂ ಶ್ರೀಗಂಧ ಕಳ್ಳತನದಲ್ಲಿ ಜೈಲು ಅನುಭವಿಸಿದ್ದ.ಮತ್ತೇ ಟೀಂ ಕಟ್ಕೊಂಡು ತನ್ನ ಹಳೇ ಚಾಳಿ ಮುಂದುವರೆಸಿರೋ ಮಹದೇವ್ ಜೀರ್..

ಮಹದೇವ್ ಜೀರ್ ಸೇರಿದಂತೆ ಮೂವರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ ಅರಣ್ಯಾಧಿಕಾರಿಗಳು.ಸದ್ಯ ಪ್ರಕರಣ ದಾಖಲಿ ಸಿಕೋಂಡಿರುವ ಅಧಿಕಾರಿಗಳು ಆರೋಪಿಯನ್ನು ನ್ಯಾಯಂಗ ಬಂಧನಕ್ಕೆ ಒಪ್ಪಿಸಿದ್ದಾರೆ

ಸುದ್ದಿ ಸಂತೆ ನ್ಯೂಸ್ ಯಾದಗಿರಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.