ಸಾವಿನಲ್ಲೂ ರಾಜ್ಯದ ಶಿಕ್ಷಕರ ಗೌರವ ಹೆಚ್ಚಿಸಿದ ಆಶಾ ಟೀಚರ್ – ಹಲವರ ಬದುಕಿಗೆ ಬೆಳಕಾಗಿ ರಾಜ್ಯಕ್ಕೆ ಮಾದರಿಯಾದ ಶಿಕ್ಷಕಿ

Suddi Sante Desk
ಸಾವಿನಲ್ಲೂ ರಾಜ್ಯದ ಶಿಕ್ಷಕರ ಗೌರವ ಹೆಚ್ಚಿಸಿದ ಆಶಾ ಟೀಚರ್ – ಹಲವರ ಬದುಕಿಗೆ ಬೆಳಕಾಗಿ ರಾಜ್ಯಕ್ಕೆ ಮಾದರಿಯಾದ ಶಿಕ್ಷಕಿ

ತುಮಕೂರು

ರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ ಶಿಕ್ಷಕಿಯೊಬ್ಬರು ತಮ್ಮ ಸಾವಿನ ನಂತರವೂ ಹಲವರ ಬದುಕಿಗೆ ಬೆಳಕಾಗಿದ್ದಾರೆ. ಇಲ್ಲಿನ ಮಡಿಕೇರಿ ನಗರದ ಸುದರ್ಶನ ಬಡಾವಣೆಯ ನಿವಾಸಿ ಆಶಾ ನಿಧನದ ನಂತರ 8 ಜನರ ಜೀವ ಉಳಿಸಿದ್ದಾರೆ.

 

ಕಣ್ಣು, ಕಿಡ್ನಿ, ಹೃದಯ, ಲಿವರ್ ದಾನದ ಮೂಲಕ ಸಾರ್ಥಕತೆ ಮೆರೆದಿದ್ದಾರೆ.18 ವರ್ಷದಿಂದ ಬೇಬಿ ಸಿಟಿಂಗ್ ನಡೆಸುತ್ತಿದ್ದ ಪಂದ್ಯಂಡ ಆಶಾ (53) ಕಳೆದ ಶನಿವಾರ ಬೆಂಗಳೂರಿನಲ್ಲಿರುವ ಪುತ್ರಿ ಮನೆಗೆ ಹೋಗಿದ್ದರು. ಈ ವೇಳೆ ಅನಾರೋಗ್ಯಕ್ಕೆ ತುತ್ತಾದ ಆಶಾ ಅವರ ಮೆದುಳು ಪಾರ್ಶ್ವವಾಯು ವಿಗೆ ಒಳಗಾಗಿತ್ತು.

 

ತಕ್ಷಣವೇ ನಾರಾಯಣ ಹೃದಯಾಲಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರ ಮೆದುಳು ನಿಷ್ಕ್ರಿಯಗೊಂಡಿರುವುದಾಗಿ ವೈದ್ಯರು ಹೇಳಿದರು ವೈದ್ಯರ ಸಲಹೆ ಮೇರೆಗೆ ಅಂಗಾಂಗ ದಾನಕ್ಕೆ ಆಶಾ ಅವರ ಪತಿ, ಮಕ್ಕಳ ಒಪ್ಪಿಗೆ ಪಡೆಯಲಾಯಿತು.

 

ಬೆಂಗಳೂರು ನಾರಾಯಣ ಹೃದಯಾಲಯದಲ್ಲಿ ಅಂಗಾಂಗವನ್ನು ಬೇರ್ಪಡಿಸಿ ೮ ಜನರಿಗೆ ಕಸಿ ಮಾಡಲಾಗಿದೆ. ಈ ಮೂಲಕ ಮನೆಯ ಸದಸ್ಯ ಳನ್ನು ಕಳೆದುಕೊಂಡ ನೋವಿನಲ್ಲೂ ಆಶಾ ಕುಟುಂಬದವರು ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.