ASI ಬಸವರಾಜ ನಿಧನ ಕರ್ತವ್ಯದ ಮೇಲಿದ್ದ ಪೊಲೀಸ್ ಅಧಿಕಾರಿ ಹೃದಯಾಘಾತದಿಂದ ನಿಧನ…..

Suddi Sante Desk


ಕುಷ್ಟಗಿ –

ASI ರೊಬ್ಬರು ಕರ್ತವ್ಯದ ಮೇಲಿದ್ದಾಗ ನಿಧನರಾದ ಘಟನೆ ಕೊಪ್ಪಳದಲ್ಲಿ ನಡೆದಿದೆ.ಹೌದು ತಾಲೂಕು ತಾವರ ಗೇರಾ ಪೊಲೀಸ್ ಠಾಣೆಯ ಎ.ಎಸ್.ಐ ಬಸವರಾಜ ನಾಯಕವಾಡಿ ಕರ್ತವ್ಯದಲ್ಲಿದ್ದ ವೇಳೆ ಹೃದಯಘಾತದಿಂದ ನಿಧನರಾಗಿದ್ದಾರೆ.ಕಳೆದ ಬುಧವಾರ ರಾತ್ರಿ ತಾವರಗೇರಾ ಪೊಲೀಸ್ ಠಾಣೆಯ ಆವರಣದ ಕುರ್ಚಿಯಲ್ಲಿ ಕುಳಿತು ಮೊಬೈಲ್ ನಲ್ಲಿ ಮಾತನಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಮೊಬೈಲ್ ಜಾರಿ ಬಿದ್ದಿದೆ.ಇದನ್ನು ಗಮನಿಸಿದ ಠಾಣೆಯ ಪೊಲೀಸರು ಅಸ್ವಸ್ಥಗೊಂಡಿದ್ದ ಅವರನ್ನು ಕೂಡಲೇ ಸ್ಥಳೀಯ ಸಮುದಾಯ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

ಇತ್ತೀಚೆಗೆ ವಿಧಾನ ಪರಿಷತ್ ಚುನಾವಣೆಯಲ್ಲಿ ಕ್ಷಿಪ್ರಪಡೆ ಯಲ್ಲಿ ಕೆಲಸ ನಿರ್ವಹಿಸಿ,ತಾವರಗೇರ ಪಟ್ಟಣ ಪಂಚಾಯತಿ ಚುನಾವಣೆ ಬಂದೋಬಸ್ತ್ ಕೆಲಸದಲ್ಲಿದ್ದರು.ಇವರ ಪತ್ನಿ ಅಕ್ಕಮಹಾದೇವಿ ನಾಯಕವಾಡಿ ಕುಷ್ಟಗಿ ಪುರಸಭೆ ಸದಸ್ಯೆ ಯಾಗಿದ್ದಾರೆ.ಎಎಸ್ ಐ ಬಸವರಾಜ ನಾಯಕವಾಡಿ ಅಕಾಲಿಕ ನಿಧನಕ್ಕೆ ಎಸ್ಪಿ ಟಿ.ಶ್ರೀಧರ್,ಡಿವೈಎಸ್ಪಿ ರುದ್ರೇಶ ಉಜ್ಜನಕೊಪ್ಪ, ಸಿಪಿಐ ನಿಂಗಪ್ಪ ರುದ್ರಪ್ಪಗೋಳ, ತಾವರ ಗೇರಾ ಪೊಲೀಸ್ ಠಾಣೆಯ ಪಿಎಸೈ ವೈಶಾಲಿ ಝಳಕಿ, ಕುಷ್ಟಗಿ ಪಿಎಸ್‌ಐ ತಿಮ್ಮಣ್ಣ ನಾಯಕ, ಹನುಮಸಾಗರ ಪಿಎಸೈ ಅಶೋಕ ಬೇವೂರು ಕಂಬನಿ ಮಿಡಿದಿದ್ದಾರೆ. ಅವರ ಅಂತ್ಯಕ್ರಿಯೆ ಕುಷ್ಟಗಿ ವೀರಶೈವ ರುದ್ರಭೂಮಿಯಲ್ಲಿ ನೆರವೇರಿತು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.