ಹಾವೇರಿ –
ಲಂಚ ಪಡಿಯುತ್ತಿದ್ದಾಗ ಗ್ರಾಮ ಲೆಕ್ಕಾಧಿಕಾರಿಯೊ ಬ್ಬರು ಎಸಿಬಿ ಬಲೆಗೆ ಬಿದ್ದ ಘಟನೆ ಹಾವೇರಿ ಯಲ್ಲಿ ನಡೆದಿದೆ.ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಅರೇಲಕಮಾಪುರ ಗ್ರಾಮದ ವಿ ಎ ಬಲೆಗೆ ಬಿದ್ದಿದ್ದಾನೆ.
ಬಸವರಾಜ ಕುಂಚೂರು ಎಸಿಬಿ ಬಲೆಗೆ ಬಿದ್ದ ಗ್ರಾಮ ಲೆಕ್ಕಾಧಿಕಾರಿಯಾಗಿದ್ದಾರೆ.ವೃದ್ದಾಪ್ಯ ವೇತನ ವನ್ನು ಮಂಜೂರು ಮಾಡಲು ಹತ್ತು ಸಾವಿರ ಲಂಚ ಬೇಡಿಕೆ ಇಟ್ಟಿದ್ದರು.ಇಂದು ಮುಂಗಡವಾಗಿ ಮೂರೂವರೆ ಸಾವಿರ ಹಣ ಸ್ವೀಕರಿಸುವಾಗ ಎಸಿಬಿ ಅಧಿಕಾರಿ ಗಳು ಟ್ರ್ಯಾಪ್ ಮಾಡಿದ್ದಾರೆ.ಈ ಸಂಬಂಧ ಹಾವೇರಿ ಎಸಿಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾ ಗಿದ್ದು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ