ಶಿಕ್ಷಣ ಸಚಿವರ ವರದಿ ಆಧರಿಸಿ ಮುಂದಿನ ಕ್ರಮ CM – ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ ರಾಜ್ಯದಲ್ಲಿ ಪಠ್ಯಕ್ರಮ ಪರಿಷ್ಕರಣೆ ವಿಚಾರ…..

Suddi Sante Desk

ಬೆಂಗಳೂರು –

ಪಠ್ಯಪುಸ್ತಕ ಪರಿಷ್ಕರಣೆ ವಿವಾದಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ಬಿ.ಸಿ ನಾಗೇಶ್‌ರವರು ವರದಿ ನೀಡಲಿದ್ದು ಈ ಒಂದು ವರದಿಯನ್ನಾಧರಿಸಿ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.ಉಡುಪಿಯಲ್ಲಿ ಮಾತನಾಡಿದ ಅವರು ಪಠ್ಯಗಳಲ್ಲಿ ಅಳವಡಿಸಿರುವ ಕೆಲ ಪಾಠಗಳ ಬಗ್ಗೆ ಪರ-ವಿರೋಧ ಅಭಿಪ್ರಾಯಗಳು ಬರುತ್ತಿವೆ.ಹಾಗಾಗಿ ಶಿಕ್ಷಣ ಸಚಿವರಿಗೆ ವರದಿ ನೀಡುವಂತೆ ಸೂಚಿಸಿದ್ದೇನೆ.ಎಲ್ಲ ಆಯಾಮಗಳಿಂದಲೂ ಪರಿಶೀಲಿಸಿ ಶಿಕ್ಷಣ ಸಚಿವರು ವರದಿ ನೀಡುವರು ಎಂದರು.


ಕೆಲ ಸ್ವಾಮೀಜಿಗಳು ಶಿಕ್ಷಣ ತಜ್ಞರೂ ತಮಗೆ ಪತ್ರ ಬರೆದಿ ದ್ದಾರೆ.ಶಿಕ್ಷಣ ಸಚಿವರ ವರದಿ ನಂತರ ಈ ಎಲ್ಲ ಗೊಂದ ಲಗಳಿಗೂ ತೆರೆ ಎಳೆಯುವ ಕೆಲಸವನ್ನು ಸರ್ಕಾರ ಮಾಡ ಲಿದೆ.ಕೆಲ ಸಾಹಿತಿಗಳು ತಮ್ಮ ಪಠ್ಯಗಳನ್ನು ಶಾಲಾ ಪಠ್ಯ ದಿಂದ ವಾಪಸ್ ಪಡೆಯುವಂತೆ ಪತ್ರ ಬರೆದಿರುವ ಬಗ್ಗೆ ಯೂ ಪ್ರತಿಕ್ರಿಯಿಸಿದ ಅವರು ಶಿಕ್ಷಣ ಸಚಿವರ ವರದಿ ನಂತರ ಈ ಎಲ್ಲದ್ದಕ್ಕೂ ಒಂದು ತೆರೆ ಬೀಳುತ್ತದೆ.ನಾಳೆಯೇ ಶಿಕ್ಷಣ ಸಚಿವರು ವರದಿ ನೀಡುತ್ತಾರೆ ಎಂದರು.ಹಿಜಾಬ್ ಮತ್ತು ಲವ್‌ಜಿಹಾದ್‌ಗಳಿಗೆ ತೆರೆ ಎಳೆಯಲು ಕಾನೂನು ಗಳನ್ನು ಜಾರಿ ಮಾಡಲಾಗಿದೆ.ಎಲ್ಲರೂ ಕಾನೂನನ್ನು ಪಾಲಿಸಲೇಬೇಕು.ಲವ್‌ಜಿಹಾದ್ ಹೊಸದೇನೂ ಅಲ್ಲ ಮೊದಲಿನಿಂದಲೂ ಇದೆ ಅದನ್ನು ತಡೆಯಲು ಕಾನೂನನ್ನು ರೂಪಿಸಿದ್ದೇವೆ. ಅದನ್ನು ಪಾಲಿಸಲೇಬೇಕು ಎಂದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.