ರಣರಂಗವಾದ ಸರ್ಕಾರಿ ಶಾಲೆ ಒರ್ವ ವಿದ್ಯಾರ್ಥಿ ಸಾವು ಗಂಭೀರವಾಗಿ ಗಾಯಗೊಂಡ ಶಿಕ್ಷಕರು – ಸರ್ಕಾರಿ ಶಾಲೆಯಲ್ಲಿ ಅತಿಥಿ ಶಿಕ್ಷಕನ ಹುಚ್ಚಾಟಕ್ಕೆ ಬಲಿಯಾದ ಒರ್ವ ವಿದ್ಯಾರ್ಥಿ ಭಯಗೊಂಡ ಗ್ರಾಮಸ್ಥರು

Suddi Sante Desk
ರಣರಂಗವಾದ ಸರ್ಕಾರಿ ಶಾಲೆ ಒರ್ವ ವಿದ್ಯಾರ್ಥಿ ಸಾವು ಗಂಭೀರವಾಗಿ ಗಾಯಗೊಂಡ ಶಿಕ್ಷಕರು – ಸರ್ಕಾರಿ ಶಾಲೆಯಲ್ಲಿ ಅತಿಥಿ ಶಿಕ್ಷಕನ ಹುಚ್ಚಾಟಕ್ಕೆ ಬಲಿಯಾದ ಒರ್ವ ವಿದ್ಯಾರ್ಥಿ ಭಯಗೊಂಡ ಗ್ರಾಮಸ್ಥರು

ಗದಗ

ಅತಿಥಿ ಶಿಕ್ಷಕರೊಬ್ಬರ ಹುಚ್ಚಾಟದಿಂದಾಗಿ ಒರ್ವ ವಿದ್ಯಾರ್ಥಿಯೊರ್ವ ಸಾವಿಗೀಡಾಗಿ ಶಿಕ್ಷಕಿಯೊ ಬ್ಬಳು ಮೃತಪಟ್ಟಿರುವ ಘಟನೆ ಗದಗ ನಲ್ಲಿ ನಡೆದಿದೆ.ಹೌದು ಜಿಲ್ಲೆಯ ನರಗುಂದ ತಾಲ್ಲೂಕಿನ ಹದ್ಗಿ ಗ್ರಾಮದಲ್ಲಿ ಈ ಒಂದು ಘಟನೆ ನಡಿದಿದ್ದು ಅತಿಥಿ ಶಿಕ್ಷಕನಿಂದ ಹಲ್ಲೆಗೊಳಗಾದ ವಿದ್ಯಾರ್ಥಿ ಸಾವಿಗೀಡಾದರೆ ಶಿಕ್ಷಕಿಯೊಬ್ಬರು ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರಗೆ ದಾಖಲು ಮಾಡ ಲಾಗಿದೆ.

10 ವರ್ಷದ ವಿದ್ಯಾರ್ಥಿ ಭರತ ಸಾವಿಗೀಡಾಗಿದರೆ ಗಂಭೀರ ಗಾಯಗೊಂಡ ಶಿಕ್ಷಕಿ ಗೀತಾ ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾ ಗಿದೆ. ಶಿಕ್ಷಕನ ಹುಚ್ಚಾಟಕ್ಕೆ ಗ್ರಾಮಸ್ಥರು ‌ಆಕ್ರೋಶ ವನ್ನು ವ್ಯಕ್ತಪಡಿಸಿದ್ದು ಕಂಡು ಬಂದಿತು.

ಅತಿಥಿ ಶಿಕ್ಷಕನ ಮುತ್ತಪ್ಪನಿಂದ ಹುಚ್ಚಾಟ ನಡೆದಿದೆ.ಸಹಶಿಕ್ಷಕರ ಮೇಲೆ ಅತಿಥಿ ಶಿಕ್ಷಕನಿಂದ ಮಾರಣಾಂತಿಕ ಹಲ್ಲೆಯನ್ನು ಕೂಡಾ ಮಾಡಲಾ ಗಿದೆ.ಸಲಿಕೆಯಿಂದ ಕಂಡ ಕಂಡವರ ಮೇಲೆ ಅಟ್ಯಾಕ್ ಮಾಡಿದ್ದಾನೆ ಅತಿಥಿ ಶಿಕ್ಷಕ.

ಗದಗ ಜಿಲ್ಲೆಯ ನರಗುಂದ ತಾಲೂಕಿನ ಹದ್ಲಿ ಗ್ರಾಮದಲ್ಲಿ ಘಟನೆ ನಡೆದಿದೆ.ಮುತ್ತಪ್ಪ ಹಡಗಲಿ ಎನ್ನುವ ಅತಿಥಿ ಶಿಕ್ಷನಿಂದ ಈ ಒಂದು ಕೃತ್ಯ ನಡೆದಿದೆ

 

 

ಅತಿಥಿ ಶಿಕ್ಷಕಿ ಗೀತಾ ಬಾರಕೇರಿ ಹಾಗೂ 04 ನೇ ವರ್ಷದ ಭರತ್ ಎನ್ನುವ ವಿದ್ಯಾರ್ಥಿ ಮೇಲೆ ಹಲ್ಲೆ ಇನ್ನೊರ್ವ ಶಿಕ್ಷಕನ ಮೇಲೆ ಹಲ್ಲೆ ಮಾಡಿದ್ದಾನೆ ಮುತ್ತಪ್ಪ.ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಹದ್ಲಿ ಗ್ರಾಮದಲ್ಲಿ ಘಟನೆ ಅತಿಥಿ ಶಿಕ್ಷಕನ ಹುಚ್ಚಾ ಟಕ್ಕೆ ಭಯಗೊಂಡ ವಿದ್ಯಾರ್ಥಿಗಳು ದಿಕ್ಕಾಪಾ ಲಾಗಿ ಶಾಲೆಯಿಂದ ಹೋಗಿದ್ದು ಕಂಡು ಬಂದಿತು

ಇನ್ನೂ ಈ ಒಂದು ಸುದ್ದಿ ಯನ್ನು ತಿಳಿದ  ನರಗುಂದ ಪೊಲೀಸರು ಶಾಲೆಗೆ ಆಗಮಿಸಿ ಪರಿಶೀಲನೆ ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.ಸಧ್ಯ ಈ ಒಂದು ಕೃತ್ಯವನ್ನು ಮಾಡಿರುವ ಅತಿಥಿ ಶಿಕ್ಷಕನ ಬಂಧನಕ್ಕೆ ನರಗುಂದ ಪೊಲೀಸರು ಜಾಲವನ್ನು ಬೀಸಿದ್ದಾರೆ.

ಸುದ್ದಿ ಸಂತೆ ನ್ಯೂಸ್ ನರಗುಂದ…..

 

 

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.