ಅತಿ ಹೆಚ್ಚು ಕರೋನ ಸೊಂಕು ಕಾಣಿಸಿಕೊಂಡಲ್ಲಿ‌ ಶಾಲೆಗಳು ಬಂದ್ – ಶೀಘ್ರದಲ್ಲೇ ಈ ಕುರಿತು ಸ್ಪಷ್ಟ ನಿರ್ಧಾರ ಎಂದರು ಬಿ ಸಿ ನಾಗೇಶ್…..

Suddi Sante Desk

ಬೆಂಗಳೂರು –

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಮಹಾಮಾರಿ ಕರೋನ ಹೆಚ್ಚಾಗುತ್ತಿದ್ದು ಇನ್ನೂ ಇದರ ನಡುವೆ ಈಗಷ್ಟೇ ಆರಂಭ ಗೊಂಡಿರುವ ಶಾಲೆಗಳ ಪರಿಸ್ಥಿತಿ ಏನಾಗಲಿದೆ ಎಂಬ ಆತಂಕ ಎದುರಾಗಿದ್ದು ಇದರ ನಡುವೆ ಕರೋನ ಪಾಸಿಟಿವ್ ಕೇಸ್ ಗಳು ಹೆಚ್ಚಾಗಿರುವಲ್ಲಿ ಶಾಲೆಗಳನ್ನು ಬಂದ್ ಮಾಡ ಲಾಗುವುದು ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದ್ದಾರೆ.ಇ ಒಂದು ವಿಚಾರ ಕುರಿತು ಬೆಂಗಳೂರಿ ನಲ್ಲಿ ಮಾಹಿತಿ ನೀಡಿರುವ ಅವರು ಕಳೆದ ಎರಡು ತಿಂಗಳಿನಿಂದ ಪೂರ್ಣ ಪ್ರಮಾಣದಲ್ಲಿ ಶಾಲೆಗಳು ಆರಂಭ ಆಗಿದ್ದು ಇದೀಗ ಶಾಲೆಗಳನ್ನು ಮತ್ತೆ ಬಂದ್ ಮಾಡುವ ಪರಿಸ್ಥಿತಿ ಬಂದಿದ್ದು ಸಧ್ಯ ಕರೋನ ಹೆಚ್ಚಾಗಿರುವಲ್ಲಿ ಬಂದ್ ಮಾಡ ಲಾಗುತ್ತದೆ ಎಂದರು

ಇನ್ನೂ ಇತ್ತ ರಾಜ್ಯದಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಮತ್ತೆ ಶಾಲೆಗಳು ಬಂದ್ ಆಗತ್ತಾ ಎಂಬ ಆತಂಕ ಪೋಷಕರು & ಮಕ್ಕಳಲ್ಲಿ ಕಾಡುತ್ತಿದೆಈ ಸಂಬಂಧ ಬೆಂಗಳೂರಿನಲ್ಲಿ ಸಚಿವ ಬಿಸಿ ನಾಗೇಶ್ ಮಾಹಿತಿ ನೀಡಿದ್ದು, ಹೀಗಾಗಲೇ ರಾಜ್ಯದ ಎಲ್ಲಾ ಶಾಲೆಗಳಿಗೂ ಕೊರೋನಾ ಪರಿಸ್ಥಿತಿ ಅರಿಯಲು ಸೂಚನೆ ನೀಡಿದ್ದು ಸದ್ಯಕ್ಕೆ ರಾಜ್ಯದಲ್ಲಿ ಎಲ್ಲಾ ಕಡೆ ಬಂದ್ ಮಾಡಲ್ಲ.ಅತೀ ಹೆಚ್ಚು ಸೋಂಕು ಪತ್ತೆ ಯಾದ ಸ್ಥಳಗಳಲ್ಲಿ ಮಾತ್ರ ಶಾಲೆಗಳು ಬಂದ್ ಮಾಡಲಾ ಗುತ್ತದೆ ಎಂದರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.