ವಾಹನಗಳನ್ನು ಓವರ್ ಟೇಕ್ ಮಾಡುವ ಮುನ್ನ ಹುಷಾರಾಗಿರಿ – ಓವರ್ ಟೇಕ್ ಮಾಡುವಾಗ ಪ್ರಾಣ ಕಳೆದುಕೊಂಡ ಯುವಕ…..

Suddi Sante Desk
ವಾಹನಗಳನ್ನು ಓವರ್ ಟೇಕ್ ಮಾಡುವ ಮುನ್ನ ಹುಷಾರಾಗಿರಿ – ಓವರ್ ಟೇಕ್ ಮಾಡುವಾಗ ಪ್ರಾಣ ಕಳೆದುಕೊಂಡ ಯುವಕ…..

ಕಾರವಾರ –

ಓವರ್‌ಟೇಕ್ ಮಾಡಲು ಹೋಗಿ ಬಸ್ ಕೆಳಗೆ ಬಿದ್ದ ಬೈಕ್ ಸವಾರ ಹೌದು ಇಂತಹ ದೊಂದು ಘಟನೆ ಕಾರವಾರದಲ್ಲಿ ನಡೆದಿದೆ.ಬಸ್ ಹತ್ತಿರ ಬೈಕ್ ಚಲಾಯಿಸುತ್ತಿದ್ದ ಯುವಕ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ.ಕಾರವಾರ ರಾಷ್ಟ್ರೀಯ ಹೆದ್ದಾರಿ 66ರ ಬಿಣಗಾ ಘಟ್ಟದಲ್ಲಿ ಈ ಒಂದು ಘಟನೆ ನಡೆದಿದೆ.

ಉತ್ತರಕನ್ನಡ ಜಿಲ್ಲೆಯ ಕಾರವಾರ ನಗರದ ಜೀತೇಂದ್ರ ಗೌಡ ಮೃತ ಬೈಕ್ ಸವಾರ ನಾಗಿದ್ದಾನೆ. ಅಂಕೋಲಾ ತಾಲ್ಲೂಕಿನ ಶಿರಗುಂಜಿ ಗ್ರಾಮದ ನಿವಾಸಿ ಜೀತೇಂದ್ರ ಆಗಿದ್ದು ಅಂಕೋಲಾದಿಂದ ಕಾರವಾರಕ್ಕೆ ಬರುತ್ತಿದ್ದ ವೇಳೆ ಈ ಒಂದು ಅಪಘಾತ ಸಂಭವಿಸಿದೆ.

ರಸ್ತೆ ತಿರುವಿನಲ್ಲಿ ಬಸ್ ಓವರ್‌ಟೇಕ್ ಮಾಡುವ ವೇಳೆ ಎದುರಾದ ಕಂಟೇನರ್.ಲಾರಿಗೆ ಡಿಕ್ಕಿಯಾ ಗುವುದನ್ನ ತಪ್ಪಿಸಲು ಹೋಗಿ ಬಸ್ ಕೆಳಗೆ ಬಿದ್ದಿ ದ್ದಾನೆ ಬೈಕ್ ಸವಾರನು.ಸ್ಥಳಕ್ಕೆ ಪೊಲೀಸ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಕಾರವಾರ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಸುದ್ದಿ ಸಂತೆ ನ್ಯೂಸ್ ಕಾರವಾರ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.