ACB ಬಲೆಗೆ ಬಿದ್ದ BEO ಶಿಕ್ಷಕರ ಸಂಬಳ ಮಾಡಲು ಹಣದ ಬೇಡಿಕೆ ಇಟ್ಟಿದ್ದ BEO…..

Suddi Sante Desk

ಕಲಬುರಗಿ –

ಹೌದು ಶಾಲೆಯೊಂದರ ಶಿಕ್ಷಕರ ಮತ್ತು ಇತರೆ ಸಿಬ್ಬಂದಿ ಗಳ ಸಂಬಳವನ್ನು ಮಾಡಲು ಹಣದ ರೂಪದಲ್ಲಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬಿಇಓ ರೊಬ್ಬರು ಎಸಿಬಿ ಬಲೆಗೆ ಬಿದ್ದ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ನಲ್ಲಿ ನಡೆದಿದೆ

ಜಿಲ್ಲೆಯಲ್ಲಿರುವ ಅಫಜಲಪುರ ದ ತಾಲ್ಲೂಕಿನ ದೇವರ ಗಾಣಗಾಪೂರದ ಹೆರೂರು ಅನುದಾನಿತ ಶಾಲೆಯ ಎರಡು ತಿಂಗಳದ 6 ಲಕ್ಷ ರೂಪಾಯಿ ವೇತನವನ್ನು ಬಿಡುಗಡೆ ಮಾಡಲು 15 ಸಾವಿರ ರೂಪಾಯಿ ಬೇಡಿಕೆ ಇಟ್ಟಿದ್ದ ಅಫಜಲಪುರ ಬಿಇಓ ಹೆಚ್ ಎಸ್ ದೇಶಮುಖ್ ಅವರೇ ಟ್ರ್ಯಾಪ್ ಆದವರಾಗಿದ್ದಾರೆ.ಈ ಕುರಿತು ಶಾಲೆಯ ಮುಖ್ಯೋಪಾಧ್ಯಾಯ ಅವರು ದೂರನ್ನು ನೀಡಿದ್ದರು ಈ ಒಂದು ಕುರಿತು ನಗರದ ಖಾಸಗಿ ಹೊಟೆಲ್ ನಲ್ಲಿ ಹಣ ವನ್ನು ತಗೆದುಕೊಳ್ಳುವಾಗ ಟ್ರ್ಯಾಪ್ ಆಗಿದ್ದಾರೆ.

ಅಫಜಲಪುರ ಬಿಇಓ ಹೆಚ್ ಎಸ್ ದೇಶಮುಖ ಎಸಿಬಿ ಬಲೆಗೆ ಬಿದ್ದವರಾಗಿದ್ದಾರೆ.ಸಧ್ಯ ಇವರನ್ನು ವಶಕ್ಕೆ ತೆಗೆದುಕೊಂಡಿರುವ ಎಸಿಬಿ ಅಧಿಕಾರಿ ಗಳು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.