9ನೇ ತರಗತಿ ವಿದ್ಯಾರ್ಥಿನಿ ಗೆ ಚಾಕು ಇರಿತ ಶಾಲೆಯಿಂದ ಹೊರಟಿದ್ದ ಭೂಮಿಕಾ ತಡೆದು ಚಾಕು ಇರಿದು ಕೊಲೆ…..

Suddi Sante Desk

ರಾಯಚೂರು –

9 ನೇ ತರಗತಿ ವಿದ್ಯಾರ್ಥಿನಿಯೊಬ್ಬಳಿಗೆ ಚಾಕು ಇರಿದು ಕೊಲೆ‌ ಮಾಡಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ ಶಾಲೆಯಿಂದ ‌ಬರುತ್ತಿರುವ ವಿದ್ಯಾರ್ಥಿನಿಗೆ ತಡೆದು ಕೊಲೆ ಮಾಡಲಾಗಿದೆ.ರಾಯಚೂರು ಜಿಲ್ಲೆ ‌ಮಸ್ಕಿ ಪಟ್ಟಣದ ಸಾನಬಾಳ ರಸ್ತೆಯಲ್ಲಿ ಈ ಒಂದು ಘಟನೆ ನಡೆದಿದೆ

ಕೊಲೆಯಾದ ವಿದ್ಯಾರ್ಥಿನಿಯನ್ನ ಭೂಮಿಕಾ (15) ಎಂದು ಗುರುತಿಸಲಾಗಿದ್ದು ಪಟ್ಟಣದ ಕವಿತಾಳ ರಸ್ತೆಯ ಖಾಸಗಿ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದಳು ವಿದ್ಯಾರ್ಥಿನಿ ಶಾಲೆ‌ ಮುಗಿಸಿಕೊಂಡು‌ ಮನೆಗೆ ‌ಬರುತ್ತಿರುವ ವೇಳೆ ಕೊಲೆಯನ್ನು ಮಾಡಲಾಗಿದೆ ಕೊಲೆಗೆ ನಿಖಿರ ಕಾರಣ ತಿಳಿದು ಬಂದಿಲ್ಲ

ಇನ್ನೂ ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಮಸ್ಕಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.