ಸಿಡಿಲು ಬಡಿದು ಕುಂದಗೋಳದಲ್ಲಿ ಬೈಕ್ ಸವಾರ ಸಾವು – ನಿವೇನಾದರೂ ಬೈಕ್ ಮೇಲೆ ಹೊಗುವಾಗ ಸಿಡಿಲು ಬರುತ್ತಿದ್ದರೆ ಮೊದಲು ಈ ಕೆಲಸ ಮಾಡಿ

Suddi Sante Desk
ಸಿಡಿಲು ಬಡಿದು ಕುಂದಗೋಳದಲ್ಲಿ ಬೈಕ್ ಸವಾರ ಸಾವು – ನಿವೇನಾದರೂ ಬೈಕ್ ಮೇಲೆ ಹೊಗುವಾಗ ಸಿಡಿಲು ಬರುತ್ತಿದ್ದರೆ ಮೊದಲು ಈ ಕೆಲಸ ಮಾಡಿ

ಆಂಕರ್

 

ಸಿಡಿಲುಬಡಿದು ಬೈಕ್ ಸವಾರನೊಬ್ಬ ಸ್ಧಳದಲ್ಲೇ ಸಾವಿಗೀಡಾದ ಘಟನೆ ಕುಂದಗೋಳದಲ್ಲಿ ನಡೆದಿದೆ.ಬೈಕ್ ನಲ್ಲಿ ಸವಾರಿ ಮಾಡುತ್ತಿದ್ದಾಗ ಅಪ್ಪಳಿಸಿದೆ ಬರಸಿಡಿಲು.ಕುಂದಗೋಳ ತಾಲೂಕಿನ ಸಂಶಿ ಮತ್ತು ಪಶುಪತಿಹಾಳ ಮಾರ್ಗ ಮಧ್ಯೆ ಈ ಒಂದು ಅವಘಡ ನಡೆದಿದೆ.

ಪ್ರವೀಣ್ ಬಡಿಗೇರ(32) ಮೃತ ಯುವಕನಾಗಿ ದ್ದಾನೆ.ಮೃತ ಪ್ರವೀಣ್ ಪಶುಪತಿಹಾಳದ ನಿವಾಸಿಯಾಗಿದ್ದು ಹುಬ್ಬಳ್ಳಿ ಖಾಸಗಿ ಟ್ರಾನ್ಸ್‌ ಪೋರ್ಟ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರವೀಣ್.ಕೆಲಸವನ್ನು ಮುಗಿಸಿಕೊಂಡು ಬೈಕ್ ಮೇಲೆ ವಾಪಸ್ ಮನೆಗೆ ತೆರಳುವಾಗ ಈ ಒಂದು ಧಾರುಣ ಘಟನೆ ನಡೆದಿದೆ.ಸಿಡಿಲಿನ ಹೊಡೆತಕ್ಕೆ ಸ್ಥಳದಲ್ಲೇ ಪ್ರವೀಣ್ ರಸ್ತೆ ಪಕ್ಕದಲ್ಲಿಯೇ ಬಿದ್ದು ಮೃತಪಟ್ಟಿದ್ದಾನೆ.ಇನ್ನೂ ಈ ಒಂದು ಸುದ್ದಿಯನ್ನು ತಿಳಿದ ಕುಂದಗೋಳ ಪೊಲೀಸರು ಸ್ಥಳಕ್ಕೇ ಭೇಟಿ ನೀಡಿ ಪರಿಶೀಲನೆ ಮಾಡಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

 

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.