ಬಿಜೆಪಿ ಶಾಸಕ ಬಸನಗೌಡ ಪಾಟೀಲಯತ್ನಾಳ ಹೊಸ ಬಾಂಬ್ ಸಂಕ್ರಮಣಕ್ಕೇ ಸಚಿವ ಸಂಪುಟ ವಿಸ್ತರಣೆಯಾಗುತ್ತೋ ,ಬದಲಾವಣೆಯಾಗುತ್ತೋ ಮತ್ತೇನಾದರೂ ಆಗಬಹುದು

Suddi Sante Desk

ವಿಜಯಪುರ –

ಮಕರ ಸಂಕ್ರಮದನ ನಂತರ ಸಚಿವ ಸಂಪುಟ ವಿಸ್ತರಣೆಯಾಗುತ್ತೋ ಇಲ್ಲವೋ ಅಥವಾ ಅದರಲ್ಲಿ ಬದಲಾವಣೆಯಾಗುತ್ತೋ,ಇಲ್ಲವೇ ಮತ್ತೇನಾದರೂ ಆಗಬಹುದು ಹೀಗೆಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲಯತ್ನಾಳ ಹೇಳಿದರು.

ವಿಜಯಪುರದಲ್ಲಿ ಮಾತನಾಡಿದ ಅವರು ಈ ಮೂಲಕ ಯತ್ನಾಳ ಅವರು ಮತ್ತೆ ಹೊಸ ಬಾಂಬ್ ಹಾಕಿದ್ದಾರೆ. ಅಮಿತ್ ಶಾ ಜನೇವರಿ 16ಕ್ಕೆ ವಿಜಯಪುರಕ್ಕೂ ಬರುತ್ತಿದ್ದಾರೆ ಎಂದರು. ಇನ್ನೂ ಸಂಕ್ರಮಣಕ್ಕೆ ಸಚಿವ ಸಂಪುಟದಲ್ಲಿ ವಿಸ್ತರಣೆಯಾಗುತ್ತೋ, ಬದಲಾವಣೆಯಾಗುತ್ತೋ ಗೊತ್ತಿಲ್ಲ ಮತ್ತೇನಾದರೂ ಆಗಬಹುದು ಸಚಿವ ಸಂಪುಟ ವಿಸ್ತರಣೆಗಿಂತಲೂ ಮತ್ತೇನಾದರೂ ಆಗಬಹುದು ಎಂದರು.

ಹೀಗೆ ಆಗಗಲಿ ಒಟ್ಟಾರೆ ಉತ್ತರ ಕರ್ನಾಟಕ, ವಿಜಯಪುರ ಜಿಲ್ಲೆಗೆ ಒಳಿತಾಗಲಿದೆ ಎಂದರು. ಇವೇಲ್ಲ ಬದಲಾವಣೆಗಳು ಅಮಿತ್ ಶಾ ರಾಜ್ಯಕ್ಕೆ ಆಗಮಿಸುವ ಮುಂಚೆಯೇ ವಿದ್ಯಮಾನಗಳು ನಡೆಯಬಹುದು ಎಂದರು. ಹೀಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲಯತ್ನಾಳ ಮಾತನಾಡಿದ್ದು ರಾಜ್ಯದ ರಾಜಕೀಯದ ಬದಲಾವಣೆಗಳಿಗೆ ಚರ್ಚೆವೆ ವೇದಿಕೆಯಾದಂತಾಗಿದ್ದು ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.