ರಾಜ್ಯದ ಮೂಲೆ ಮೂಲೆಗಳಿಂದ ಸುದ್ದಿಗಳನ್ನು ಹೊತ್ತು ತರಲು ‘ಸುದ್ದಿಸಂತೆ’ ಇಂದಿನಿಂದ ನಿಮ್ಮ ಅಂಗಳಕ್ಕೆ

Suddi Sante Desk

ಹುಬ್ಬಳ್ಳಿ: ಪ್ರೀತಿಯ ಓದುಗರಿಗೆ ನಮಸ್ಕಾರ. “ಸುದ್ದಿಸಂತೆ” ಇದು ವರ್ತಮಾನದ ಕೈಗನ್ನಡಿ. ನುರಿತ, ವೃತ್ತಿಪರ ಪತ್ರಕರ್ತರೇ ಕಟ್ಟಿದ ಅತಿ ವೇಗವಾಗಿ ಓದುಗರನ್ನು ತಲುಪಲು ಉದ್ದೇಶಿಸಿ ಹೊರಬಂದಿರುವ ಸುದ್ದಿ ಜಾಲ. ಇತ್ತಿಚಿನ ದಿನಗಳಲ್ಲಿ ಸಾಕಷ್ಟು ಸುದ್ದಿ ತಾಣಗಳು ತಲೆ ಎತ್ತಿದರೂ ಅವೆಲ್ಲವೂಗಳನ್ನು ಮೀರಿಸಿ, ಇಲ್ಲಿ ನಿಮಗೆ ರಾಜ್ಯದ ನೈಜ, ನಿಖರ ಸುದ್ದಿಗಳು ಅತಿ ವೇಗವಾಗಿ ತಲುಪುತ್ತವೆ. ಸುದ್ದಿಗಳ ಜೊತೆ ಜೊತೆಗೆ ಹತ್ತು-ಹಲವು ಮಾಹಿತಿ ಸೇರಿದಂತೆ ಶಾಲಾ ಮಕ್ಕಳಿಂದ ಹಿಡಿದು ವಯೋವೃದ್ದರ ವರೆಗೂ ಓದಲೇ ಬೇಕೆನಿಸುವ ಇನ್ನೂ ಹತ್ತು ಹಲವು ವಿಶೇಷತೆಗಳೊಂದಿಗೆ “ದೀಪಾವಳಿ”ಯ ಈ ಶುಭ ಸಂದರ್ಭದಲ್ಲಿ “ಸುದ್ದಿಸಂತೆ” ನಿಮ್ಮ ವರೆಗೂ ತಲುಪಿದೆ.

ಇವತ್ತಿನಿಂದ ನಿಮ್ಮ “ಸುದ್ದಿಸಂತೆ” ಅಂಬೆಗಾಲಿಡುತ್ತ ನಿಮ್ಮ ಅಂಗಳಕ್ಕೆ ಬಂದು ನಿಂತಿದೆ. ದಯವಿಟ್ಟು ಕೈ ಹಿಡಿದು ಮುನ್ನಡೆಸಿ.. ನಮ್ಮನ್ನು ಹರಸಿ-ಹಾರೈಸಿ.

-ಧನ್ಯವಾದಗಳು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.