This is the title of the web page
This is the title of the web page

Live Stream

[ytplayer id=’1198′]

August 2025
T F S S M T W
 123456
78910111213
14151617181920
21222324252627
28293031  

| Latest Version 8.0.1 |

State News

ಸರ್ಕಾರಿ ಶಾಲೆಗೆ ಕನ್ನ – ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳ ಕಳ್ಳತನ – ನಿನ್ನೆ ಸಂಸದರ ಊರಲ್ಲಿ ಇಂದು ಶಾಸಕರ ಊರಿನಲ್ಲಿ ಶಾಲೆ ಕಳ್ಳತನ…..

WhatsApp Group Join Now
Telegram Group Join Now

ರಾಯಚೂರು –

ನಿನ್ನೆ M.P. ಊರಲ್ಲಿ ದೇವಸ್ಥಾನ ಕಳ್ಳತನ ನಡೆದರೆ ಇಂದು ಶಾಸಕರ ಊರಿನ ಶಾಲೆಯಲ್ಲಿ ಕಳ್ಳತನ ನಡೆದಿದೆ. ಹೌದು ಇಂಥಹದೊಂದು ಘಟನೆ ರಾಯ ಚೂರಿನಲ್ಲಿ ನಡೆದಿದೆ.ರಾಯಚೂರು ಜಿಲ್ಲೆಯಲ್ಲಿ ಸರಣಿ ಕಳ್ಳತನಗಳು ನಡೆಯುತ್ತಿದ್ದು ನಿನ್ನೆ ಸಂಸದ ರಾಜಾ ಅಂಬರೀಶ್ ನಾಯಕ ಅವರ ಊರಿನಲ್ಲಿ ಭವಾನಿ ದೇವಸ್ಥಾನ ಕಳವಾಗಿತ್ತು. ಇಂದು ಶಾಸಕ ಬಸನಗೌಡ ತುರುವಿಹಾಳ ಊರಿನಲ್ಲಿ ಕಳ್ಳರ ಕೈಚಳಕ ತೋರಿಸಿದ್ದಾರೆ.

ಜಿಲ್ಲೆಯ ಸಿಂಧನೂರು ತಾಲೂಕಿನ ತುರ್ವಿಹಾಳ ಗ್ರಾಮ ಶಾಸಕ ಬಸನಗೌಡ ಊರು ಇದಾಗಿದೆ. ಶಾಲೆಯ ಪ್ರಯೋಗಾಲಯದ ಬೀಗ ಮುರಿದು 10 ಕಂಪ್ಯೂಟರ್ ಕಳವು ಮಾಡಲಾಗಿದೆ.ಕಳ್ಳರು ಸರ್ಕಾರಿ ಪ್ರೌಢಶಾಲೆಯ ಪ್ರಯೋಗಾಲಯದ ಬೀಗ ಮುರಿದು 3.5 ಲಕ್ಷ ರೂಪಾಯಿ ಮೌಲ್ಯದ 10 ಕಂಪ್ಯೂಟರ್‌ಗಳನ್ನು ಕಳವು ಮಾಡಿದ್ದಾರೆ.ಸಂಜೆ ಕೊಠಡಿಗೆ ಎರಡು ಬೀಗ ಹಾಕಿದ್ದೆವು. ಶನಿವಾರ ಬೆಳಿಗ್ಗೆ 8.30 ಕ್ಕೆ ಶಾಲೆಗೆ ಬಂದಾಗ ಘಟನೆ ನಡೆದಿರುವುದು ತಿಳಿಯಿತು.ನಂತರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಲಾಯಿತು ಎಂದು ಮುಖ್ಯ ಶಿಕ್ಷಕ ಸೋಮಲಿಂಗಪ್ಪ ಸುದ್ದಿ ಸಂತೆಗೆ ತಿಳಿಸಿದ್ದಾರೆ.

ಇನ್ನೂ ಸುದ್ದಿ ತಿಳಿದ ಸಿಂಧನೂರು ಸಿಪಿಐ ಉಮೇಶ ಕಾಂಬಳೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತುರ್ವಿಹಾಳ ಠಾಣೆಯಲ್ಲಿ ಈ ಕುರಿತಂತೆ ಪ್ರಕರಣ ದಾಖಲಾಗಿದ್ದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಲಾಗುತ್ತಿದೆ


Google News

 

 

WhatsApp Group Join Now
Telegram Group Join Now
Suddi Sante Desk