ಸಿಬಿಐ ಅಧಿಕಾರಿಗಳು ಇಂದು ಯಾರು ಯಾರನ್ನು ವಿಚಾರಣೆ ಮಾಡಿದ್ರು ಗೋತ್ತಾ

Suddi Sante Desk

ಧಾರವಾಡ: ಯೊಗೀಶಗೌಡ ಕೊಲೆ ಪ್ರಕರಣದಲ್ಲಿ ಅತ್ತ ಹಿಂಡಲಗಾ ಜೈಲಿಗೆ ಮಾಜಿ ಸಚಿವ ವಿನಯ ಕುಲಕರ್ಣಿ ಜೈಲು ಸೇರುತ್ತಿದ್ದಂತೆ ಇತ್ತ ಸಿಬಿಐ ಅಧಿಕಾರಿಗಳು ಧಾರವಾಡದಲ್ಲಿ ತನಿಖೆಯನ್ನು ಚುರುಕುಗೊಳಿಸಿದ್ದಾರೆ‌. ನಿನ್ನೆಯಿಂದ ಬಸವರಾಜ ಮುತ್ತಗಿ ಯನ್ನು ಮತ್ತೆ ಪ್ರಕರಣದಲ್ಲಿ ವಿಚಾರಣೆ ಮಾಡುತ್ತಿರುವ ಸಿಬಿಐ ಅಧಿಕಾರಿಗಳು ಇಂದು ಮತ್ತೆ ವಿಚಾರಣೆಯನ್ನು ಮುಂದುವರೆಸಿದರು.

ಯೊಗೀಶಗೌಡ ಹತ್ಯೆ ಪ್ರಕರಣದಲ್ಲಿ ಇಂದು ಸಿಬಿಐ ಅಧಿಕಾರಿಗಳ ಎದುರಿಗೆ ಹತ್ಯೆಯ ಆರು ಆರೋಪಿಗಳ ಹಾಜರಾದರು. ವಿಚಾರಣೆಗೆ ಮೊದಲು ಹಾಜರಾದ ಬಸವರಾಜ ಮುತ್ತಗಿ ಬೆನ್ನಲ್ಲೇ ಇನ್ನೂಳಿದವರಿಗೂ ಬುಲಾವ್ ನೀಡಲಾಯಿತು.ಮೊದಲುವಿಚಾರಣೆಗೆ ಹಾಜರಾದ
ಬಸವರಾಜ ಮುತ್ತಗಿ ವಿಚಾರಣೆಯಿಂದ
ಅನೇಕ ಅಂಶಗಳು ಬಯಲಿಗೆ ಬಂದಿದ್ದು
ಸಂದೀಪ್ ಸವದತ್ತಿ, ಕೀರ್ತಿ ಕುಮಾರ್, ವಿನಾಯಕ ಕಟಗಿ, ವಿಕ್ರಮ್ ಬಳ್ಳಾರಿ, ಮಹಾಬಳೇಶ್ವರ ಹೊಂಗಲ್, ಸಂತೋಷ ಸವದತ್ತಿ ಸೇರಿದಂತೆ ಹಲವರನ್ನು ಸಿಬಿಐ ಅಧಿಕಾರಿಗಳು ವಿಚಾರಣೆ ಮಾಡಿದರು .

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.