ಎತ್ತ ಸಾಗುತ್ತಿದೆ ಸಮೃದ್ಧ ಕರ್ನಾಟಕ  ಉತ್ತರಿಸಿ_ಸಿದ್ದರಾಮಯ್ಯನವರೇ – ಕೆಲವೊಂದಿಷ್ಟು ಪ್ರಶ್ನೆಗಳೊಂದಿಗೆ CM ಪ್ರಶ್ನೆ ಮಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಯವರು‌…..

Suddi Sante Desk
ಎತ್ತ ಸಾಗುತ್ತಿದೆ ಸಮೃದ್ಧ ಕರ್ನಾಟಕ  ಉತ್ತರಿಸಿ_ಸಿದ್ದರಾಮಯ್ಯನವರೇ – ಕೆಲವೊಂದಿಷ್ಟು ಪ್ರಶ್ನೆಗಳೊಂದಿಗೆ CM ಪ್ರಶ್ನೆ ಮಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಯವರು‌…..

ಹುಬ್ಬಳ್ಳಿ

ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿ ಯವರನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಯವರು ಕೆಲವೊಂ ದಿಷ್ಟು ಪ್ರಶ್ನೆ ಗಳೊಂದಿಗೆ ಪ್ರಶ್ನೆ ಯನ್ನು ಮಾಡಿ ದ್ದಾರೆ.ಹೌದು ಎತ್ತ ಸಾಗುತ್ತಿದೆ ಸಮೃದ್ಧ ಕರ್ನಾಟಕ ಉತ್ತರಿಸಿ_ಸಿದ್ದರಾಮಯ್ಯನವರೇ ಎಂದಿದ್ದಾರೆ.

ಮಠ ಮಂದಿರಗಳ ಅಭಿವೃದ್ಧಿಗೆ ಅನುದಾನ ಸಿಗುತ್ತಿಲ್ಲ.ರಸ್ತೆ – ಮೂಲಸೌಕರ್ಯ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗುತ್ತಿಲ್ಲ.ರೈತರಿಗೆ ಕೃಷಿಗೆ ಬೇಕಾದ ವಿದ್ಯುತ್ ಸಿಗುತ್ತಿಲ್ಲ.ಸರಕಾರದ ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ನೌಕರರಿಗೆ ತಿಂಗಳ ಸಂಬಳ ಸಿಗುತ್ತಿಲ್ಲ

ಬಿಜೆಪಿ ಸರಕಾರ ಅನುಮೋದನೆ ನೀಡಿದ ಎಲ್ಲಾ ಯೋಜನೆಗಳಿಗೂ ತಡೆಹಿಡಿಯಲಾಗಿದೆ.ಶಾಲಾ ಕಾಲೇಜುಗಳ ಅಭಿವೃದ್ಧಿಗೆ ಅನುದಾನವಿಲ್ಲ
ನೀರಾವರಿ ವ್ಯವಸ್ಥೆಗೆ ಯೋಜನೆಯಿಲ್ಲ ಬಹು ಸಂಖ್ಯಾತ ಹಿಂದೂಗಳ ಅಭಿವೃದ್ಧಿಗೆ ಯಾವುದೇ ಯೋಜನೆಯಿಲ್ಲ.ಸಚಿವರ ಹೊಸ‌ ಕಾರು ಖರೀದಿಗೆ ಇರುವ ಹಣ,ರೈತರ ಬೆಳೆ ನಾಶದ ಪರಿಹಾರಕ್ಕಿಲ್ಲ

ರಾಜ್ಯದುದ್ದಗಲದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ.ಮುಖ್ಯಮಂತ್ರಿಗಳೇ, ಕರುನಾಡನ್ನು ನಾಶ ಮಾಡುವ ಪ್ರಯತ್ನ ಬಿಟ್ಟು, ಕೇಂದ್ರ ಸರಕಾರದ ಕಡೆ ಬೊಟ್ಟು ಮಾಡುವುದನ್ನು ಬಿಟ್ಟು,ನಿಮ್ಮ ನಿಮ್ಮಲ್ಲೇ ರಾಜಕೀಯ ಕಿತ್ತಾಟ ನಾಟಕವನ್ನು ಬಿಟ್ಟು, ರಾಜ್ಯದ ಪ್ರಗತಿಗಾಗಿ ರಾಜ್ಯದ ಜನರ ಏಳಿಗೆಗಾಗಿ ಯೋಚಿಸಿ ಶ್ರಮಿಸಿ ಇದು ಕೇವಲ ನಮ್ಮ ಆಗ್ರಹವಲ್ಲ, ಸ್ವಾಭಿಮಾನಿ ಕನ್ನಡಿಗರ ಆಗ್ರಹ.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.