This is the title of the web page
This is the title of the web page

Live Stream

[ytplayer id=’1198′]

November 2025
T F S S M T W
 12345
6789101112
13141516171819
20212223242526
27282930  

| Latest Version 8.0.1 |

ಧಾರವಾಡ

ಮಾರವಾಡಿಗರ ನಾಡನ್ನು ಗೆಲ್ಲಿಸಿದ ಧಾರವಾಡಿಗನ ಸ್ವಾಗತ ಭರ್ಜರಿ ಸಿದ್ದತೆ – ಡಿಸೆಂಬರ್ 9 ಕ್ಕೆ ಹುಬ್ಬಳ್ಳಿಗೆ ಆಗಮಿಸಲಿದ್ದಾರೆ ಚುನಾವಣೆಯ ಚಾಣಕ್ಯ ಪ್ರಹ್ಲಾದ್ ಜೋಶಿ…..

ಮಾರವಾಡಿಗರ ನಾಡನ್ನು ಗೆಲ್ಲಿಸಿದ ಧಾರವಾಡಿಗನ ಸ್ವಾಗತ ಭರ್ಜರಿ ಸಿದ್ದತೆ – ಡಿಸೆಂಬರ್ 9 ಕ್ಕೆ ಹುಬ್ಬಳ್ಳಿಗೆ ಆಗಮಿಸಲಿದ್ದಾರೆ ಚುನಾವಣೆಯ ಚಾಣಕ್ಯ ಪ್ರಹ್ಲಾದ್ ಜೋಶಿ…..
WhatsApp Group Join Now
Telegram Group Join Now

ಹುಬ್ಬಳ್ಳಿ

ಮಾರವಾಡಿಗರ ನಾಡನ್ನು ಗೆಲ್ಲಿಸಿದ ಧಾರವಾಡಿ  ಗನ ಸ್ವಾಗತ ಭರ್ಜರಿ ಸಿದ್ದತೆ – ಡಿಸೆಂಬರ್ 9 ಕ್ಕೆ ಹುಬ್ಬಳ್ಳಿಗೆ ಆಗಮಿಸಲಿದ್ದಾರೆ ಚುನಾವಣೆಯ ಚಾಣಕ್ಯ ಪ್ರಹ್ಲಾದ್ ಜೋಶಿ ಹೌದು ರಾಜಸ್ಥಾನ ದಲ್ಲಿ ಬಿಜೆಪಿ ಪಕ್ಷ ಮತ್ತೆ ದೊಡ್ಡ ಪ್ರಮಾಣದಲ್ಲಿ ಗೆಲುವನ್ನು ಸಾಧಿಸಿದೆ.ಬಿಜೆಪಿ ಪಕ್ಷದ ಈ ಒಂದು ಅಭೂತಪೂರ್ಣ ಗೆಲುವಿಗೆ ಕಾರಣಿಕರ್ತರಾದ ವರು ಉಸ್ತುವಾರಿಯನ್ನು ವಹಿಸಿಕೊಂಡಿದ್ದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ.

ಚುನಾವಣೆಯ ಆರಂಭ ದಿಂದಲೂ ಕೊನೆಯ ದಿನದ ವರೆಗೆ ಕಾಲಿಗೆ ಚಕ್ರವನ್ನು ಕಟ್ಟಿಕೊಂಡು ಅಧಿಕಾರದಲ್ಲಿದ್ದ ಕಾಂಗ್ರೇಸ್ ಪಕ್ಷದ ಭದ್ರಕೋಟೆ ಯನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಯವರು ತಮ್ಮ ತಂತ್ರಗಾರಿಕೆಯಿಂದ ಛಿದ್ರ ಮಾಡಿದ್ದಾರೆ.ಧಾರವಾಡಿಗನ ರಣತಂತ್ರಕ್ಕೆ ಮಾರವಾಡಿಗರ ನಾಡಿನ ಜನತೆ ಜನಮನ್ನಣೆ ಯನ್ನು ನೀಡಿದ್ದಾರೆ

ಪ್ರಹ್ಲಾದ್ ಜೋಶಿಯವರ ನೇತ್ರತ್ವದಲ್ಲಿ ರಾಜಸ್ಥಾನ ರಾಜ್ಯದಲ್ಲಿ ಕೇಸರಿ ಪಡೆ ಭರ್ಜರಿ ಯಾದ ಯಶಸ್ಸನ್ನು ಕಂಡಿದೆ.ಈ ಬಾರಿ ರಾಜಸ್ಥಾನ ದಲ್ಲಿ ಕನ್ನಡಿಗರ ಕಮ್ಮಾಲ್ ಕಂಡು ಬಂದಿದೆ.ಇನ್ನೂ ಈ ಒಂದು ಸಾಧನೆಯ ನಂತರ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ನಗರಕ್ಕೆ ಆಗಮಿಸು ತ್ತಿದ್ದಾರೆ.

ರಾಜಸ್ಥಾನ ರಾಜ್ಯವನ್ನು ಗೆದ್ದುಕೊಂಡು ನಗರಕ್ಕೆ ಬರುತ್ತಿರುವ ಇವರನ್ನು ಸ್ವಾಗತಿಸಲು ಭರ್ಜರಿ ಯಾದ ಸಿದ್ದತೆಯನ್ನು ಮಾಡಲಾಗಿದೆ.ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನ ಸಭಾ ಕ್ಷೇತ್ರ -73 ವತಿಯಿಂದ ಈ ಒಂದು ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ.ರಾಜಸ್ಥಾನ ವಿಧಾನ ಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಅತಿಹೆಚ್ಚು ಸ್ಥಾನಗಳನ್ನು ಗೆದ್ದು ದೊಡ್ಡ ಪಕ್ಷವಾಗಿ ಅಧಿಕಾರಕ್ಕೆ ಬರಲು ಮುಖ್ಯ ರೂವಾರಿ ಗಳಾದ ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ

ಡಿಸೆಂಬರ್ 9 ರಂದು ಬೆಳಿಗ್ಗೆ 8 30 ಗಂಟೆಗೆ ಆಗಮಿಸಲಿದ್ದಾರೆ.ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದು ಅದ್ದೂರಿಯಾಗಿ ಸ್ವಾಗತ ಕೋರಲು ಬೃಹತ್ ಬೈಕ್ ರ‍್ಯಾಲಿ ಏರ್ಪಡಿಸಲಾ ಗಿದ್ದು ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನ ಸಭಾ ಕ್ಷೇತ್ರದ ಪ್ರತಿ ವಾರ್ಡ್ ನಿಂದ ಪಕ್ಷದ ಎಲ್ಲ ಪಾಲಿಕೆ ಸದಸ್ಯರು,ಪ್ರಮುಖರು,

ಯುವಕರು, ಮಹಿಳೆಯರು ,ಹಿರಿಯರು, ಪದಾಧಿಕಾರಿಗಳು, ಕಾರ್ಯಕರ್ತರು , ಅಭಿಮಾನಿ ಗಳು ಬೈಕ್ ರ‍್ಯಾಲಿಯಲ್ಲಿ ಭಾಗವಹಿಸಿ ವಿಜೃಂಭ ಜನೆಯಿಂದ ಸ್ವಾಗತಿಸಿ ಗೆಲುವಿಗೆ ಕಾರಣರಾದ ನಾಯಕರನ್ನು ಬರಮಾಡಿಕೊಳ್ಳಲಿದ್ದಾರೆ.ಈ ಒಂದು ಕಾರ್ಯಕ್ರಮದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪಕ್ಷದ ಕಾರ್ಯಕರ್ತರು ಮುಖಂಡರು ಆಗಮಿಸು ವಂತೆ ಕ್ಷೇತ್ರದ ಅಧ್ಯಕ್ಷರು ಮಹಾನಗರ ಪಾಲಿಕೆಯ ಸದಸ್ಯರಾದ ಸಂತೋಷ ಚವ್ಹಾಣ ಪ್ರಧಾನ ಕಾರ್ಯದರ್ಶಿಗಳಾದ ಅಶೋಕ ವಾಲ್ಮೀಕಿ,ಗೋಪಾಲ ಬದ್ದಿ ಸೇರಿದಂತೆ ಸರ್ವರೂ ಕೋರಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ……


Google News

 

 

WhatsApp Group Join Now
Telegram Group Join Now
Suddi Sante Desk