ರಿಜಿಸ್ಟ್ರಾರ್ ಮೇಲೆ ಕುಲಪತಿ ಯಿಂದ ಹಲ್ಲೆ ಆರೋಪ – ಬೀದಿಗೆ ಬಂದ KSOU ಕುಲಪತಿ ರಿಜಿಸ್ಟ್ರಾರ್ ಗುದ್ದಾಟ…..

Suddi Sante Desk

ಮೈಸೂರು –

KSOU ಅಸಿಸ್ಟೆಂಟ್ ರಿಜಿಸ್ಟ್ರಾರ್ ಮೇಲೆ VC ಯಿಂದ ಹಲ್ಲೆ ಆರೋಪ ಕೇಳಿ ಬಂದಿದೆ.ಹೌದು ಕೆ ಎಸ್ ಓ ಯೂ ವಿಸಿ ಯಿಂದ ಅಸಿಸ್ಟೆಂಟ್ ರಿಜಿಸ್ಟ್ರಾರ್ ಮೇಲೆ ಹಲ್ಲೆ ನಡೆಸಿದ ಆರೋಪ ಇಗ ಕೇಳಿಬಂದಿದ್ದು ಈ ಒಂದು ವಿಚಾರ ಕುರಿತು ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಾಗಿದೆ.ವಿಸಿ ವಿದ್ಯಾ ಶಂಕರ್ ಹಾಗೂ ಪಿಎಸ್ ದೇವರಾಜು ಅವರಿಂದ ಈ ಒಂದು ಹಲ್ಲೆಯನ್ನು ನಡೆಸಿರುವ ಆರೋಪ ಕೇಳಿ ಬಂದಿದೆ.

ಅಸಿಸ್ಟೆಂಟ್ ರಿಜಿಸ್ಟ್ರಾರ್ ಪ್ರದೀಪ್ ಗಿರಿ ಮೇಲೆ ಹಲ್ಲೆ ನಡೆದಿದೆ.ಕೆ ಎಸ್ ಓ ಯುವಿನಲ್ಲಿ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ.ತಡವಾಗಿ ಕಚೇರಿಗೆ ಬಂದಿದ್ದಕ್ಕೆ ಜಗಳ ನಡೆದಿದ್ದು ಈ ವೇಳೆ ಮಾತಿನ ಚಕಮಕಿ ನಡೆದು ನಂತರ ಕೊಠಡಿಗೆ ಕರೆದುಕೊಂಡು ಹೋಗಿ ಹಲ್ಲೆ ಮಾಡಿದ್ದಾರೆಂದು ಆರೋಪಿಸಲಾಗಿದೆ.


ಪ್ರದೀಪ್ ಗಿರಿಗೆ ಮುಖ ಮತ್ತೆ ಕಿವಿಗೆ ಗಾಯವಾಗಿದ್ದು ಕೆ‌ ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.ಜಯಲಕ್ಷ್ಮಿ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.