This is the title of the web page
This is the title of the web page

Live Stream

[ytplayer id=’1198′]

November 2025
T F S S M T W
 12345
6789101112
13141516171819
20212223242526
27282930  

| Latest Version 8.0.1 |

ಉತ್ತರಕನ್ನಡ

ರಾಜ್ಯೋತ್ಸವ ಪ್ರಶಸ್ತಿ ಮೊತ್ತದಿಂದ ಆಂಬ್ಯುಲೆನ್ಸ್ ಖರೀದಿ ಮಾಡಿದ ಚಾರ್ಮಾಡಿ ಹಸನಬ್ಬ – ರಾಜ್ಯಕ್ಕೆ ಜನಪ್ರತಿನಿಧಿಗಳಿಗೆ ಮಾದರಿಯಾದ ಸಮಾಜ ಸೇವಕ…..

ರಾಜ್ಯೋತ್ಸವ ಪ್ರಶಸ್ತಿ ಮೊತ್ತದಿಂದ ಆಂಬ್ಯುಲೆನ್ಸ್ ಖರೀದಿ ಮಾಡಿದ ಚಾರ್ಮಾಡಿ ಹಸನಬ್ಬ – ರಾಜ್ಯಕ್ಕೆ ಜನಪ್ರತಿನಿಧಿಗಳಿಗೆ ಮಾದರಿಯಾದ ಸಮಾಜ ಸೇವಕ…..
WhatsApp Group Join Now
Telegram Group Join Now

ಬೆಂಗಳೂರು

ರಾಜ್ಯೋತ್ಸವ ಪ್ರಶಸ್ತಿ ಮೊತ್ತದಿಂದ ಆಂಬ್ಯುಲೆನ್ಸ್ ಖರೀದಿ ಮಾಡಿದ ಚಾರ್ಮಾಡಿ ಹಸನಬ್ಬ ರಾಜ್ಯಕ್ಕೆ ಜನಪ್ರತಿನಿಧಿಗಳಿಗೆ ಮಾದರಿಯಾದ ಸಮಾಜ ಸೇವಕ ಹೌದು ದಶಕಗಳಿಂದ ಸಮಾಜ ಸೇವೆ  ಯಲ್ಲಿ ಗುರುತಿಸಿಕೊಂಡಿರುವ ಚಾರ್ಮಾಡಿ ಹಸನಬ್ಬರಿಗೆ ರಾಜ್ಯ ಸರಕಾರ 2023ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ನೀಡಿತ್ತು.

ಆ ಒಂದು ಪ್ರಶಸ್ತಿ ಯಲ್ಲಿ ಇದೀಗ ಪ್ರಶಸ್ತಿ ಮೊತ್ತ ವಾಗಿ ಸಿಕ್ಕ 5 ಲಕ್ಷ ಹಣದಿಂದ ಆಂಬ್ಯುಲೆನ್ಸ್ ನ್ನು ಜನತೆಯ ಸೇವೆಗಾಗಿ ಖರೀದಿ ಮಾಡಿದ್ದಾರೆ.ಈ ಬಗ್ಗೆ ಫೇಸ್ ಬುಕ್ ನಲ್ಲಿ ಮಾಹಿತಿ ನೀಡಿದ ಅವರು, ಚಾರ್ಮಾಡಿ ಹಸನಬ್ಬ ಚಾರಿಟೇಬಲ್ ಟ್ರಸ್ಟ್” ಅನ್ನು ಸ್ಥಾಪನೆ ಮಾಡಿ ಆ 5 ಲಕ್ಷ ಮೊತ್ತ ಹಾಗು ಉಳಿದ ಹಣವನ್ನು ಸಾಲ ಮಾಡಿ ಒಂದು ಆಂಬುಲೆನ್ಸ್ ಬುಕ್ ಮಾಡಿದ್ದೆವು.

ಇಂದು ಆ ಆಂಬ್ಯುಲೆನ್ಸ್ ನ ಡೆಲಿವರಿ ಪಡಿಯಲಾಯಿತು. ಅದಕ್ಕೆ ಬೇಕಾಗುವ ಸ್ಟ್ರೆಟಿಚೆರ್ ಹಾಗು ಇತ್ಯಾದಿಯನ್ನು ಅಳವಡಿಸಿ ಇನ್ನು ಕೆಲವು ದಿನಗಳಲ್ಲಿ ಚಾರ್ಮಾಡಿಯಲ್ಲಿ ಸೇವೆಯನ್ನು ಪ್ರಾರಂಭ ಮಾಡಲಿದೆ ಎಂದು ತಿಳಿಸಿದ್ದಾರೆ.

ಚಾರ್ಮಾಡಿ ಹಸನಬ್ಬ ಅವರು 1980ರ ದಶಕದಿಂದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಘಾಟ್ ಪ್ರದೇಶದಲ್ಲಿ ಮಾಡಿರುವ ಸೇವೆ ಅಮೋಘ. ನೂರಾರು ಅಪ ಘಾತ ಗಾಯಾಳುಗಳನ್ನು ಅವರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದರು. ಅಲ್ಲದೇ, ತಮ್ಮದೇ ಯುವಕರ ತಂಡ ಕಟ್ಟಿಕೊಂಡು ರಾತ್ರಿ, ಹಗಲೆ ನ್ನದೇ,ಮಳೆ, ಗಾಳಿ ಎನ್ನದೇ ಪಶ್ಚಿಮ ಘಟ್ಟದಲ್ಲಿ ಅಪಘಾತವಾದರೆ ಅವರ ರಕ್ಷಣೆಗೆ ಧಾವಿಸುತ್ತಾರೆ

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..


Google News

 

 

WhatsApp Group Join Now
Telegram Group Join Now
Suddi Sante Desk