ಕಲಘಟಗಿ –
ಕಲಘಟಗಿ ವಿಧಾನಸಭಾ ಕ್ಷೇತ್ರದಲ್ಲಿ ಬಿಡುವಿ ಲ್ಲದೇ ಸುತ್ತಾಡುತ್ತಿರುವ ಕಾಂಗ್ರೇಸ್ ಪಕ್ಷದ ನಾಗರಾಜ ಛಬ್ಬಿ ಮತ್ತು ಟೀಮ್ ನ ಪ್ರವಾಸ ಮುಂದುವರೆದಿದ್ದು ಕ್ಷೇತ್ರದ ಪರಸಾಪೂರ ಗ್ರಾಮದಲ್ಲಿ ಕುಕ್ಕರ್ ವಿತರಣೆಯನ್ನು ಪೂರ್ಣ ಗೊಳಿಸಲಾಗಿದೆ.ಹೌದು ಕಳೆದ ಒಂದೂವರೆ ತಿಂಗಳಿನಿಂದ ಬಿಡುವಿಲ್ಲದೇ ಸುತ್ತಾಡುತ್ತಿರುವ ನಾಗರಾಜ ಛಬ್ಬಿ ಮತ್ತು ಅವರ ಪತ್ನಿ ಶ್ರೀಮತಿ ಜ್ಯೋತಿ ಛಬ್ಬಿ ಟೀಮ್ ನವರ ಸಂಚಾರ ಕಲಘ ಟಗಿ ಕ್ಷೇತ್ರದಲ್ಲಿ ಮುಂದುವರೆದಿದ್ದು ಕ್ಷೇತ್ರದಲ್ಲಿ ಛಬ್ಬಿ ಟೀಮ್ ನ ಮಿಂಚಿನ ಸಂಚಾರ ವೇಗವಾಗಿ ನಡೆಯುತ್ತಿದ್ದು ಈ ನಡುವೆ ಕ್ಷೇತ್ರದ ಪರಸಾಪೂರ ಗ್ರಾಮದಲ್ಲಿ ಈಗಾಗಲೇ ಒಂದೇರೆಡು ಬಾರಿ ಸಭೆ ಯನ್ನು ಮಾಡಿ ಗ್ರಾಮಸ್ಥರ ಸಮಸ್ಯೆಯನ್ನು ಆಲಿಸಿ ಗ್ರಾಮದ ತುಂಬೆಲ್ಲಾ ಕುಕ್ಕರ್ ಗಳನ್ನು ವಿತರಣೆ ಮಾಡಲಾಯಿತು.
ಗ್ರಾಮದ ಮನೆ ಮನೆಗೂ ತೆರಳಿ ಪ್ರತಿಯೊಂದು ಮನೆಗೂ ಒಂದೊಂದು ಕುಕ್ಕರ್ ಗಳನ್ನು ನೀಡಿ ಕುಶಲೋಪರಿಯನ್ನು ವಿಚಾರಣೆಯನ್ನು ಮಾಡಿ ದರು.ನಾಗರಾಜ ಛಬ್ಬಿ ಅವರ ಪರವಾಗಿ ಅವರ ಪತ್ನಿ ಶ್ರೀಮತಿ ಜ್ಯೋತಿ ನಾಗರಾಜ ಛಬ್ಬಿ ಅವರು ತಮ್ಮ ಬೆಂಬಲಿಗರೊಂದಿಗೆ ಅಖಾಡಕ್ಕೆ ಇಳಿದಿದ್ದು ಬಿಡುವಿಲ್ಲದೇ ಊರುರೂ ಸುತ್ತಾಡುತ್ತಿದ್ದಾರೆ
ಕ್ಷೇತ್ರದಲ್ಲಿ ಬಿಡುವಿಲ್ಲದೇ ಕುಕ್ಕರ್ ವಿತರಣೆ ನಡೆಯುತ್ತಿದ್ದು ಪರಸಾಪೂರ ಗ್ರಾಮವನ್ನು ಸಂಪೂರ್ಣವಾಗಿ ಪೂರ್ಣಗೊಳಿಸಲಾಯಿತು ಇನ್ನೂ ಈ ಒಂದು ಸಮಯದಲ್ಲಿ ಶ್ರೀಮತಿ ಜ್ಯೋತಿ ನಾಗರಾಜ ಛಬ್ಬಿ ಅವರಿಗೆ ಗ್ರಾಮಸ್ಥರ ಪರವಾಗಿ ಗ್ರಾಮದ ಕುಬೇರಪ್ಪ ಸುಬ್ಬಣ್ಣನವರ ಮನೆಯಲ್ಲಿ ಸನ್ಮಾನವನ್ನು ಮಾಡಿ ಗೌರವಿಸಲಾ ಯಿತು.ಈ ಒಂದು ಸಮಯದಲ್ಲಿ ದಾವಲ್ ನಧಾಪ್,ಬಸು ಹುನಗುಂದ.ಮಂಜುನಾಥ ಮೊರಬದ,ಜಾಫರ್ ಶರೀಫ್ ಮುಲ್ಲಾನವರ. ಮಂಜು ಮೂಕಿ,ಸುರೇಶ ಮೂಕಿ,ಮಂಜು ಸೊರಟೂರ,ಸೇರಿದಂತೆ ಗ್ರಾಮದ ಗುರು ಹಿರಿಯರು ಪಕ್ಷದ ಕಾರ್ಯಕರ್ತರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಕಲಘಟಗಿ…..