7ನೇ ವೇತನ ಆಯೋಗದ ಸಮಿತಿಗೆ ಮುಖ್ಯಮಂತ್ರಿ ನೀಡಿದರು ಟಾಸ್ಕ್ – ಒಂದು ಗಂಟೆಯ ಸಭೆಯಲ್ಲಿ ಡಾ ಸುಧಾಕರ್ ರಾವ್ ನೇತ್ರತ್ವದ ಸಮಿತಿಗೆ CM ಹೇಳಿದ್ದೇನು ಗೊತ್ತಾ ಕಂಪ್ಲೀಟ್ ಮಾಹಿತಿ

Suddi Sante Desk
7ನೇ ವೇತನ ಆಯೋಗದ ಸಮಿತಿಗೆ ಮುಖ್ಯಮಂತ್ರಿ ನೀಡಿದರು ಟಾಸ್ಕ್ – ಒಂದು ಗಂಟೆಯ ಸಭೆಯಲ್ಲಿ ಡಾ ಸುಧಾಕರ್ ರಾವ್ ನೇತ್ರತ್ವದ ಸಮಿತಿಗೆ CM ಹೇಳಿದ್ದೇನು ಗೊತ್ತಾ ಕಂಪ್ಲೀಟ್ ಮಾಹಿತಿ

ಬೆಂಗಳೂರು

ರಾಜ್ಯದ ಸರ್ಕಾರಿ ನೌಕರರಿಗೆ ಈಗಾಗಲೇ 6ನೇ ವೇತನ ಆಯೋಗ ಅವಧಿ ಮುಗಿದ ಹಿನ್ನಲೆಯಲ್ಲಿ ಸಧ್ಯ ವೇತನ ಪರಿಷ್ಕ್ರರಣೆಗಾಗಿ 7ನೇ ವೇತನ ಆಯೋಗವನ್ನು ನಿವೃತ್ತ ಐಎಎಸ್ ಅಧಿಕಾರಿ ಸುಧಾಕರ್ ರಾವ್ ನೇತ್ರತ್ವದಲ್ಲಿ ಸಮಿತಿಯನ್ನು ರಚನೆ ಮಾಡಲಾಗಿದ್ದು ಈ ಕುರಿತಂತೆ ರಾಜ್ಯ ಸರ್ಕಾರ ಕೂಡಾ ಅಧಿಕೃತವಾದ ಆದೇಶವನ್ನು ಮಾಡಿದ್ದು ಇದರ ಬೆನ್ನಲ್ಲೇ ಸಮಿತಿಯ ನೂತನ ಅಧ್ಯಕ್ಷರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಬೆಂಗಳೂರಿನಲ್ಲಿ ಭೇಟಿ ಯಾಗಿ ಅಭಿನಂದನೆಗಳನ್ನು ಸಲ್ಲಿಸಿದರು

ನಂತರ ಮುಖ್ಯಮಂತ್ರಿ ಅವರೊಂದಿಗೆ ಸಮಿತಿಯ ಸದಸ್ಯರು ಸಭೆ ಮಾಡಿದರು.ನಗರದ ಸರ್ಕಾರಿ ಕೃಷ್ಣಾ ನಿವಾಸದಲ್ಲಿ ಒಂದು ಗಂಟೆಗಳ ಕಾಲ ನಡೆದ ಸಭೆಯಲ್ಲಿ ಡಾ ಸುಧಾಕರ್ ರಾವ್ ಅವರ ನೇತ್ರತ್ವದಲ್ಲಿನ ಸಮಿತಿಗೆ ಮುಖ್ಯಮಂತ್ರಿ ಕೆಲ ವಿಚಾರಗಳ ಕುರಿತಂತೆ ಇದರೊಂದಿಗೆ ಪ್ರಮುಖ ವಾಗಿ ಸಧ್ಯ ಇನ್ನೇನು ಕೆಲ ದಿನಗಳಲ್ಲಿ BBMP ಜಿಲ್ಲಾ ತಾಲ್ಲೂಕು ಪಂಚಾಯತ ಚುನಾವಣೆಗಳು ಬರಲಿದ್ದು ನಂತರ ರಾಜ್ಯದಲ್ಲಿ ವಿಧಾನ ಸಭೆಗೆ ಚುನಾವಣೆಗಳು ಕೂಡಾ ಬರಲಿದ್ದು ಹೀಗಾಗಿ ಚುನಾವಣೆಯ ಪೂರ್ವದಲ್ಲಿಯೇ ನಿಗದಿತ ಸಮಯದಲ್ಲಿ ಈ ಒಂದು ವರದಿಯನ್ನು ನೀಡು ವಂತೆ ಸಮಿತಿಗೆ ಟಾಸ್ಕ್ ನ್ನು ಮುಖ್ಯಮಂತ್ರಿ ಅವರು ನೀಡಿದರು.

ಜೊತೆಗೆ ಸರಿಯಾಗಿ ಸಮರ್ಪಕವಾಗಿ ಯಾವುದೇ ಕಾರಣಕ್ಕೂ ವಿಳಂಬವನ್ನು ಮಾಡದೇ ಕೂಡಲೇ ವರದಿಯನ್ನು ನೀಡುವಂತೆ ಸಲಹೆ ಸೂಚನೆ ಗಳನ್ನು ನೀಡಲಾಯಿತು ಹಾಗೇ ಸಮಿತಿಗೆ ರಾಜ್ಯ ಸರ್ಕಾರದಿಂದ ಯಾವುದೇ ರೀತಿಯ ಸಹಾಯ ಸಹಕಾರವನ್ನು ನೀಡುವಂತೆ ಸಭೆಯಲ್ಲಿ ಉಪಸ್ಥಿ ತರಿದ್ದ ಅಧಿಕಾರಿಗಳಿಗೆ ಮುಖ್ಯಮಂತ್ರಿ ಅವರು ಹೇಳಿದರು.ಇನ್ನೂ ಇದೇ ವೇಳೆ ಸಮಿತಿಯ ಅಧ್ಯಕ್ಷರು ಮುಖ್ಯಮಂತ್ರಿ ನೀಡಿದ ಟಾಸ್ಕ್ ನ್ನು ಸ್ವೀಕಾರ ಮಾಡಿದ್ದು ಶೀಘ್ರದಲ್ಲೇ ವರದಿ ನೀಡು ವುದಾಗಿ ಹೇಳಿದ್ದು ಚಟುವಟಿಕೆಗಳನ್ನು ಆರಂಭ ಮಾಡೊದಾಗಿ ಹೇಳಿದ್ದಾರೆ.

ಸುದ್ದಿ ಸಂತೆ ನ್ಯೂಸ್

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.