This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

State News

7ನೇ ವೇತನ ಮಧ್ಯಂತರ ವರದಿ ಪಡೆಯಲು ಮುಂದಾದ ಮುಖ್ಯಮಂತ್ರಿ – ರಾಜ್ಯದ ಸರ್ಕಾರಿ ನೌಕರರ ಪ್ರತಿಭಟನೆಯ ಸಂದೇಶಕ್ಕೆ ಬೆದರಿದ ಮುಖ್ಯಮಂತ್ರಿ ಮಧ್ಯಂತರ ವರದಿ ಪಡೆದು ಸದನದಲ್ಲೇ ಘೋಷಣೆಗೆ ಪ್ಲಾನ್

WhatsApp Group Join Now
Telegram Group Join Now

ಬೆಂಗಳೂರು

7ನೇ ವೇತನ ಆಯೋಗ ಘೋಷಣೆ ಸೇರಿದಂತೆ ಕೆಲ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟದ ಸಂದೇಶವನ್ನು ನೀಡಿರುವ ರಾಜ್ಯದ ಸರ್ಕಾರಿ ನೌಕರರ ಕರೆಗೆ ಮುಖ್ಯಮಂತ್ರಿ ಬಸವ ರಾಜ ಬೊಮ್ಮಾಯಿ ಬೆದರಿದ್ದಾರೆ.ಹೌದು ರಾಜ್ಯದ ಸರ್ಕಾರಿ ನೌಕರರು ಬೀದಿಗಿಳಿಯದಂತೆ ನೋಡಿ ಕೊಳ್ಳಿ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಹೇಳಿದ ಬೆನ್ನಲ್ಲೇ ಹಾಗೇ ರಾಜ್ಯದ ಸರ್ಕಾರಿ ನೌಕರರ ಖಡಕ್ ಹೋರಾಟದ ಸಂದೇಶದಿಂದ ಎಚ್ಚೇತ್ತುಕೊಂಡಿರುವ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ 7ನೇ ವೇತನ ಆಯೋಗದ ಮಧ್ಯಂತರ ವರದಿ ಪಡೆದು ವೇತನ ಮತ್ತು ಭತ್ಯೆಗಳ ಪರಿಷ್ಕರಣೆಯನ್ನು ಘೋಷಣೆ ಮಾಡಲು ಮುಂದಾಗಿದ್ದಾರೆ.

 

 

ಈ ಕುರಿತಂತೆ ಪ್ಲಾನ್ ಮಾಡಿಕೊಂಡಿರುವ ಇವರು 7ನೇ ವೇತನ ಆಯೋಗದಂತೆ ವೇತನ ಮತ್ತು ಭತ್ಯೆಗಳನ್ನು ಪರಿಷ್ಕರಿಸಿ ಜಾರಿಗೊಳಿಸುವಂತೆ ರಾಜ್ಯ ಸರ್ಕಾರಿ ನೌಕರರು ಮುಷ್ಕರಕ್ಕೆ ಕರೆ ನೀಡಿ ದ್ದಾರೆ.ಒಂದು ಕಡೆ ಬೇಡಿಕೆಗಳ ಈಡೇರಿಕೆಗೆ ಮಾರ್ಚ್ 1ರಿಂದ ಅನಿರ್ಧಿಷ್ಟಾವಧಿಗೆ ಮುಷ್ಕರ ಕೈಗೊಳ್ಳೊದಾಗಿ ಎಚ್ಚರಿಸಿದ್ದಾರೆ.ಈ ಬೆನ್ನಲ್ಲೇ ರಾಜ್ಯ ಸರ್ಕಾರದಿಂದ 7ನೇ ವೇತನ ಆಯೋಗದ ಮಧ್ಯಂತರ ವರದಿ ಆದರಿಸಿ ವೇತನ ಮತ್ತು ಭತ್ಯೆ ಗಳನ್ನು ಪರಿಷ್ಕರಣೆಗೆ ಮುಂದಾಗಿದೆ.

ಈ ಕುರಿತಂತೆ ಇಂದು 2023-24ನೇ ಸಾಲಿನ ಬಜೆಟ್ ಮೇಲಿನ ಚರ್ಚೆಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಉತ್ತರ ನೀಡುವ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಮುದಾಯ ವನ್ನು ಸಮಾಧಾನ ಪಡಿಸೋ ಭರವಸೆ ನೀಡುವ

ರಾಜ್ಯದಲ್ಲಿ ಶೈಕ್ಷಣಿಕ ಮಟ್ಟದ ವಾರ್ಷಿಕ ಪರೀಕ್ಷೆ ಗಳು ಚುನಾವಣೆ ಹೊತ್ತಿನಲ್ಲೇ ಸರ್ಕಾರಿ ನೌಕರರು ಮುಷ್ಕರ ನಿರತರಾದರೇ ಆಡಳಿಯ ಯಂತ್ರದ ಮೇಲೆ ಪರಿಣಾಮ ಬೀರೋ ಸೂಚನೆಯಿದೆ. ಈ ಕಾರಣಕ್ಕಾಗಿಯೇ ಸಿಎಂ ಬೊಮ್ಮಾಯಿಯವರು ಈ ತೀರ್ಮಾನಕ್ಕೆ ಬಂದಿದ್ದಾರೆ.

 

 

ಸರ್ಕಾರ ರಚಿಸಿರುವಂತ 7ನೇ ವೇತನ ಆಯೋ ಗದ ವೇತನ ಮತ್ತು ಭತ್ಯೆಗಳ ಪರಿಷ್ಕರಣೆ ಸಮಿತಿ ಯಿಂದ ಮಧ್ಯಂತರ ವರದಿಯನ್ನು ಪಡೆದು ಜಾರಿ ಗೊಳಿಸೋ ನಿರ್ಧಾರವನ್ನು ಸದನದಲ್ಲೇ ಘೋಷಣೆ ಮಾಡೋ ಸಾಧ್ಯತೆ ಇದ್ದು ಏನೇ ನಾಗುತ್ತದೆ ಎಂಬೊದನ್ನು ಕಾದು ನೋಡಬೇಕಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..


Google News

 

 

WhatsApp Group Join Now
Telegram Group Join Now
Suddi Sante Desk