ಮೊಟ್ಟೆಯನ್ನೇ ಹೆಚ್ಚು ಇಷ್ಟ ಪಟ್ಟ ಮಕ್ಕಳು ಸಮೀಕ್ಷೆಯಲ್ಲಿ ವರದಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಂದ ಮಾರ್ಕ್ಸ್…..

Suddi Sante Desk

ಕೊಪ್ಪಳ –

ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಆರೋಗ್ಯ ವೃದ್ಧಿಗಾಗಿ ಸರ್ಕಾರವು ಮಧ್ಯಾಹ್ನದ ಬಿಸಿಯೂಟದೊಂದಿಗೆ ಮೊಟ್ಟೆ ಹಾಗೂ ಬಾಳೆಹಣ್ಣು ವಿತರಿಸುವ ಯೋಜನೆ ಜಾರಿ ಗೊಳಿಸಿದೆ‌.ಇದು ಆರಂಭಗೊಂಡ ಬೆನ್ನಲ್ಲೇ ರಾಜ್ಯದಲ್ಲಿ ಇದಕ್ಕೆ ಪರ ವಿರೋಧದ ಮಾತುಗಳು ಹೋರಾಟಗಳಿ ಕಂಡು ಬರುತ್ತಿ ದ್ದು ಇದೆಲ್ಲದರ ನಡುವೆ ಹಲವರು ತೀವ್ರ ವಿರೋಧ ವ್ಯಕ್ತಪ ಡಿಸಿದ್ದ ಕಾರಣ ಅಕ್ಷರ ದಾಸೋಹ ಅಧಿಕಾರಿಗಳು ಮೊಟ್ಟೆ ತಿನ್ನುವ ಕುರಿತು ಸಮೀಕ್ಷೆ ನಡೆಸಿ ದ್ದರು.ವಿದ್ಯಾರ್ಥಿಗಳು ಮೊಟ್ಟೆ ತಿನ್ನುವ ಕುರಿತು ಈ ಸಮೀಕ್ಷೆ ನಡೆದಿತ್ತು. ಸಮೀಕ್ಷೆ ಯ ವರದಿಯಂತೆ ಬಹುಪಾಲು ವಿದ್ಯಾ ರ್ಥಿಗಳು ಸರ್ಕಾರದ ಯೋಜನೆಯನ್ನು ಇಷ್ಟಪಟ್ಟಿದ್ದಾರೆ ಸರ್ಕಾರ ನೀಡುತ್ತಿರುವ ಮೊಟ್ಟೆಯನ್ನು ತಮ್ಮ ಮಧ್ಯಾಹ್ನದ ಬಿಸಿಯೂಟದೊಂದಿಗೆ ತಿನ್ನುತ್ತಿದ್ದು ಈ ಯೋಜನೆಗೆ ಮಕ್ಕ ಳಿಂದ ಉತ್ತಮ ಸ್ಪಂದನೆ ಸಿಗುತ್ತಿದೆ.

ಹೌದು ಒಂದು ಕಡೆ ವಿರೋಧ ಪರವಾದ ಮಾತುಗಳ ನಡುವೆ ಈ ಒಂದು ಯೋಜನೆ ಕುರಿತು ಜಿಲ್ಲೆಯಲ್ಲಿ ಸಮೀಕ್ಷೆ ಮಾಡಲಾಯಿತು. ಪ್ರತಿ ದಿನ ಸರಾಸರಿ 1,67,111 ವಿದ್ಯಾರ್ಥಿಗಳು ತರಗತಿಗೆ ಹಾಜರಾಗುತ್ತಿದ್ದು ಮಧ್ಯಾಹ್ನದ ಬಿಸಿಯೂಟ ಸೇವಿಸುತ್ತಿದ್ದಾರೆ.ಈ ಪೈಕಿ ಕೇವಲ ಶೇ 7ರಷ್ಟು ವಿದ್ಯಾರ್ಥಿಗಳು ಮೊಟ್ಟೆ ತ್ಯಜಿಸಿ ಬಾಳೆಹಣ್ಣು ತಿನ್ನುತ್ತಿದ್ದರೆ ಬರೋಬ್ಬರಿ ಶೇ.93ರಷ್ಟು ವಿದ್ಯಾರ್ಥಿಗಳು ಮೊಟ್ಟೆ ತಿನ್ನುತ್ತಿ ದ್ದಾರೆ. ಅಲ್ಲದೇ ನಾವು ಮೊಟ್ಟೆ ತಿನ್ನುತ್ತೇವೆ ನಮಗೆ ಮೊಟ್ಟೆ ಯೇ ಬೇಕು ಎಂದು ಹೇಳಿದ್ದಾರೆ.

ಈ ಯೋಜನೆಯನ್ನು ಸರ್ಕಾರ ಪ್ರಾರಂಭಿಸುತ್ತಿದ್ದಂತೆ ಹಲವು ಮಠಾಧೀಶರು ಸೇರಿದಂತೆ ಒಂದಷ್ಟು ಸಾರ್ವಜ ನಿಕರು ಆಕ್ಷೇಪ ವ್ಯಕ್ತಪಡಿಸಿ ಶಾಲೆಗಳಲ್ಲಿ ಮೊಟ್ಟೆಗಳನ್ನು ನೀಡಿದರೆ ಉಗ್ರ ಹೋರಾಟ ಮಾಡುವುದಾಗಿ ತಿಳಿಸಿದ್ದರು. ಹಲವು ವಿದ್ಯಾರ್ಥಿಗಳು ನಮಗೆ ಮೊಟ್ಟೆಯೇ ಬೇಕುಎಂದು ಬಹಿರಂಗವಾಗಿ ಹೇಳಿದ್ದರು ಸದ್ಯ ವಿದ್ಯಾರ್ಥಿಗಳೇ ಮೊಟ್ಟೆ ಯನ್ನು ಆಯ್ಕೆ ಮಾಡಿಕೊಂಡಂತಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.