ಗಲಭೆಕೋರರಿಂದಲೇ ಹಾನಿ ನಷ್ಟ ವಸೂಲಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಗಲಾಟೆ ಮಾಡಿದವರಲ್ಲಿ ಶುರುವಾಯಿತು ಢವ ಢವ…..

Suddi Sante Desk

ಶಿವಮೊಗ್ಗ –

ಹುಬ್ಬಳ್ಳಿಯಲ್ಲಿ ನಡೆದ ಗಲಭೆ ಪ್ರರಕಣದಲ್ಲಿ ಸಾರ್ವಜನಿಕರ ಮತ್ತು ಪೊಲೀಸ್ ಇಲಾಖೆಯ ಅಪಾರ ಆಸ್ತಿ ಪಾಸ್ತಿ ಹಾನಿ ಯಾಗಿದೆ.ಅದರ ನಷ್ಟವನ್ನು ಗಲಭೆಕೋರರಿಂದಲೇ ವಸೂಲಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಮಾಜದ ಶಾಂತಿ,ಸೌಹಾರ್ದಕ್ಕೆ ಧಕ್ಕೆ ತರುವವರ ವಿರುದ್ಧ ಮುಲಾಜಿ ಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು

ಈಗಾಗಲೇ ಹುಬ್ಬಳ್ಳಿ ಗಲಭೆಯಲ್ಲಿ ಆಗಿರುವ ಆಸ್ತಿ ಹಾನಿಯ ಬಗ್ಗೆ ಪರಿಶೀಲಿಸಲಾಗಿದೆ.ಈ ಎಲ್ಲಾ ಹಾನಿಯ ಮೊತ್ತವನ್ನು ಗಲಭೆಕೋರರಿಂದಲೇ ಭರಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದರು.ಇನ್ನೂ ಗಲಭೆಗಳ ನಿಯಂತ್ರ ಣಕ್ಕೆ ಸರ್ಕಾರ ಸಶಕ್ತವಾಗಿದೆ.ಪರಿಸ್ಥಿತಿಗೆ ಅನುಗುಣವಾಗಿ ಕ್ರಮ ವಹಿಸುವುದು ಅವಶ್ಯ ಉತ್ತರ ಪ್ರದೇಶದ ಬುಲ್ಡೋ ಜರ್ ಮಾದರಿ ಇಲ್ಲಿ ಅನಗತ್ಯ.ನಮ್ಮ ನೆಲದ ಕಾನೂನು ಹೇಗಿದೆ ಅದರ ಮುಖಾಂತರವೇ ಕ್ರಮ ವಹಿಸಲಾಗುವುದು ಎಂದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.