ಕೋವಿಡ್ ಕುರಿತಂತೆ CM ತುರ್ತು ಸಭೆ – ಸುವರ್ಣ ಸೌಧ ದಲ್ಲಿ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆಯಿತು ಸಭೆ ತಗೆದುಕೊಂಡರು ಹಲವು ಮಹತ್ವದ ನಿರ್ಣಯಗಳನ್ನು

Suddi Sante Desk
ಕೋವಿಡ್ ಕುರಿತಂತೆ CM ತುರ್ತು ಸಭೆ – ಸುವರ್ಣ ಸೌಧ ದಲ್ಲಿ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆಯಿತು ಸಭೆ ತಗೆದುಕೊಂಡರು ಹಲವು ಮಹತ್ವದ ನಿರ್ಣಯಗಳನ್ನು

ಬೆಳಗಾವಿ –

ಅತ್ತ ಚೀನಾ ಸೇರಿದಂತೆ ಹಲವು ದೇಶಗಳಲ್ಲಿ ಕೋವಿಡ್ ಹೆಚ್ಚಾಗುತ್ತಿದ್ದು ಹೀಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿ ಬಸವರಾಜೊ ಬೊಮ್ಮಾಯಿ ತುರ್ತು ಸಭೆಯನ್ನು ನಡೆಸಿದರು.ಬೆಳಗಾವಿಯಲ್ಲಿ ಸಧ್ಯ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು ಇದರ ನಡುವೆಯೂ ಕೂಡಾ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಸುವರ್ಣ ಸೌಧದಲ್ಲಿ ತುರ್ತು ಸಭೆಯನ್ನು ಮಾಡಿದರು.

ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಸಚಿವ ಸುಧಾಕರ್ ಅವರೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯ ವರು ಕೊವಿಡ್ ಮುಂಜಾಗ್ರತೆ ಕುರಿತು ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿದರು.

ಸಚಿವರಾದ ಆರ್‌ ಅಶೋಕ್,ಡಾ‌. ಕೆ. ಸುಧಾಕರ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ,ಮುಖ್ಯಮಂತ್ರಿ ಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ ಹಾಗೂ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.ಸಭೆಯಲ್ಲಿ ರಾಜ್ಯದಲ್ಲಿ ಮಾಸ್ಕ್ ಧರಿಸುವ ಕುರಿತಂತೆ ಹಾಗೇ ಇನ್ನೂ ಕೆಲವೊಂ ದಿಷ್ಟು ಮಹತ್ವದ ನಿರ್ಣಯಗಳನ್ನು ತಗೆದು ಕೊಂಡರು.

ಸುದ್ದಿ ಸಂತೆ ನ್ಯೂಸ್ ಬೆಳಗಾವಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.