CM ಭೇಟಿಯಾಗಿ ಸರ್ಕಾರಿ ನೌಕರರ ಬೇಡಿಕೆಗಳ ಪೈಲ್ ಹಸ್ತಾಂತರ ಮಾಡಿ ಷಡಕ್ಷಾರಿ ಅವರು – ಸಭೆಯ ನಂತರ ಷಡಕ್ಷಾರಿ ಅವರೇ ಮಾತನಾಡಿ ದ್ದಾರೆ…..

Suddi Sante Desk

ಬೆಂಗಳೂರು –

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷಾರಿ ಅವರು ಕೇಂದ್ರ ಸಂಘದ ಪದಾಧಿಕಾರಿಗಳು ಜೊತೆ ಸೇರಿಕೊಂಡು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯವರ ಜೊತೆ ಸಭೆ ಮಾಡಿದರು ಬಜೆಟ್ ಹಿನ್ನೆಲೆಯಲ್ಲಿ ಪೂರ್ವ ಭಾವಿಯಾದ ಈ ಒಂದು ಸಭೆಯಲ್ಲಿ ಕೇಂದ್ರ ಮಾದರಿ ವೇತನ ಹಾಗೂ OPS ಜಾರಿ ಮಾಡುವ ವಿಷಯಗಳ ಕುರಿತು ಮನವಿ ಸಲ್ಲಿಸಿದರು

ಹೌದು ರಾಜ್ಯ ಸರ್ಕಾರಿ ನೌಕರರ ಧ್ವನಿಯಾಗಿ ರಾಜ್ಯಾಧ್ಯಕ್ಷ ಷಡಾಕ್ಷರಿ ಮತ್ತು ಅವರ ತಂಡವು ಇಂದು ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ OPS ಮತ್ತು ಕೇಂದ್ರ ಸರ್ಕಾರದ ಮಾದರಿಯಲ್ಲಿ ರಾಜ್ಯದ ಸರ್ಕಾರಿ ನೌಕರರಿಗೆ ವೇತನ ನೀಡುವ ಕುರಿತು ಹಾಗೆ ಇನ್ನೂ ಕೆಲವೊಂದಿಷ್ಟು ವಿಚಾರ ಗಳು ಹಾಗೆ ಬೇಡಿಕೆಗಳ ಕುರಿತು ತಾವೇ ಸಿದ್ದಪಡಿಸಿದ ಪೈಲ್ ನ್ನು ಹಸ್ತಾಂತರ ಮಾಡಿದರು

ಹಾಗೇ ಬರುವ ಬಜೆಟ್ ನಲ್ಲಿ ಈ ಎಲ್ಲಾ ಬೇಕು ಬೇಡಿಕೆ ಗಳ ಕುರಿತು ಈಡೇರಿಕೆಗೆ ಆಗ್ರಹ ವನ್ನು ಮಾಡಿದರು

ಒಟ್ಟಾರೆ ರಾಜ್ಯದ ಬಜೆಟ್ ನ ಪೂರ್ವಭಾವಿ ಯಾದ ಈ ಒಂದು ಸಭೆಯಲ್ಲಿ ರಾಜ್ಯದ ಸಧ್ಯದ ಸರ್ಕಾರಿ ನೌಕರರಿಗೆ ಅತಿ ಅವಶ್ಯಕವಾಗಿರುವ ಬೇಡಿಕೆ ಗಳ ಪಟ್ಟಿಯನ್ನು ಷಡಕ್ಷಾರಿ ಮತ್ತು ಅವರ ಟೀಮ್ ನವರು ನೀಡಿದ್ದು ಮುಖ್ಯಮಂತ್ರಿ ಏನೇನು ಈಡೇರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.