ಕಾಲೇಜು ಉಪನ್ಯಾಸಕಿ‌ ಆತ್ಮಹತ್ಯೆ ಮನೆಯಲ್ಲೇ ನೇಣು ಹಾಕಿಕೊಂಡು ಸಾವು…..

Suddi Sante Desk

ಕಾರ್ಕಳ

ಕಾಲೇಜು ಉಪನ್ಯಾಸಕಿಯೊಬ್ಬರು ಮನೆಯಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ಯ ಕಾರ್ಕಳದ ಪೆರ್ವಾಜೆಯಲ್ಲಿ ನಡೆದಿದೆ.ಆರ್.ಮಮತಾ ಶೆಟ್ಟಿ(42) ಮೃತರಾಗಿದ್ದು ತೆಳ್ಳಾರಿ ಮೂಲದ ಇವರು ಶ್ರೀ ವೆಂಕಟರಮಣ ಮಹಿಳಾ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಕಾಲೇಜಿನ ನಾಯಕಿಯಾಗಿ ಎಸ್‌ಎಫ್‌ಐ ಸಂಘಟ ನೆಯಲ್ಲಿ ಗುರುತಿಸಿಕೊಂಡಿದ್ದರು.

ವಿದ್ಯಾರ್ಥಿ ಚಳವಳಿಗಳಲ್ಲೂ ಸಕ್ರಿಯರಾಗಿದ್ದರು. ನಂತರ ಇದೇ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ್ದರು.ಮದುವೆಯಾದ ಬಳಿಕ ಪೆರ್ವಾ ಜೆಯಲ್ಲಿ ವಾಸವಿದ್ದರು.ಸೋಮವಾರ ಬೆಳಗ್ಗೆ ಮನೆಯ ಫ್ಯಾನ್‌ಗೆ ನೇಣು ಬಿಗಿದುಕೊಂಡು ಬದುಕಿ ಗೆ ಅಂತ್ಯ ಹೇಳಿದ್ದಾರೆ.ಮಧುಮೇಹ ಹಾಗೂ ಮಾನ ಸಿಕ ಖಿನ್ನತೆಯೇ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾ ಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.