ಕಡ್ಡಾಯವಾಗಿ ವರ್ಗಾವಣೆಗೊಂಡ ಶಿಕ್ಷಕರು ಅತಂತ್ರದಲ್ಲಿ ಆತಂಕದಲ್ಲಿರುವ ಶಿಕ್ಷಕರ ಗೋಳನ್ನು ಕೇಳದ ಸಂಘಟನೆಯವರು ಇಲಾಖೆ

Suddi Sante Desk
ಕಡ್ಡಾಯವಾಗಿ ವರ್ಗಾವಣೆಗೊಂಡ ಶಿಕ್ಷಕರು ಅತಂತ್ರದಲ್ಲಿ ಆತಂಕದಲ್ಲಿರುವ ಶಿಕ್ಷಕರ ಗೋಳನ್ನು ಕೇಳದ ಸಂಘಟನೆಯವರು ಇಲಾಖೆ

ಬೆಂಗಳೂರು

ಶಿಕ್ಷಣ ಸಚಿವ ಸುರೇಶ್ ಕುಮಾರ ಅವಧಯಲ್ಲಿ ಕಡ್ಡಾಯ ವರ್ಗಾವಣೆಯಾಗಿ ನಗರ ಪ್ರದೇಶ ದಿಂದ ಹಳ್ಳಿಯ ಶಾಲೆಗಳಿಗೆ ಹೋಗಿದ್ದ ಬಹುತೇಕ ಶಿಕ್ಷಕರು ಮರಳಿ ನಗರ ಪ್ರದೇಶದ ಶಾಲೆಗಳಿಗೆ ಹಾಜರಾಗಿದ್ದು ಅದರಲ್ಲಿ ನೃತದೃಷ್ಟ ಈ ಯಾದಿ ಯಲ್ಲಿ ಇರುವ ಶಿಕ್ಷಕರಿಗೆ ಇನ್ನೂ ಹಳ್ಳಿಯಲ್ಲಿ ಕಾರ್ಯ ಮಾಡುತ್ತಿದ್ದಾರೆ ಇದು ತುಂಬಾ ಅನ್ಯಾಯ,ಮಾಡುವುದಾದರೆ ಗ್ರಾಮೀಣ ಪ್ರದೇಶಕ್ಕೆ ವರ್ಗವಾಗಿ ಹೋದ ಎಲ್ಲಾ ಶಿಕ್ಷಕರಿಗೆ ಮರಳಿ ನಗರ ಪ್ರದೇಶಕ್ಕೆ ವರ್ಗ ಮಾಡಬೇಕಾ ಗಿತ್ತು ಆದರೆ ಒಂದು ಕಣ್ಣಿಗೆ ಸುಣ್ಣ ಒಂದು ಕಣ್ಣಿಗೆ ಬೆಣ್ಣೆ ಅನ್ನುವ ಗಾದೆಯಂತೆ ಇನ್ನೂ ಹಳ್ಳಿಗಾಡಿ ನಲ್ಲಿ ಈ ಶಿಕ್ಷಕರು ಉಳಿದಿದ್ದಾರೆ

ಇದಕ್ಕೆ ಯಾರು ಹೊಣೆ ತಪ್ಪು ಯಾರದು, ದಯ ಮಾಡಿ ಮಾಡುವುದಿದ್ದರೆ ಕಡ್ಡಾಯ ವರ್ಗಾವಣೆ ಆದ ಎಲ್ಲರನ್ನು ಮರಳಿ ನಗರ ಪ್ರದೇಶಕ್ಕೆ ಕಳಿಸಿ ಇಲ್ಲದಿದ್ದರೆ ಒಂದು ವರ್ಷ ಕಡ್ಡಾಯ ವರ್ಗಾವಣೆ ಯಲ್ಲಿ ಸೇವೆ ಮಾಡಿ ಮರಳಿ ನಗರದ ಶಾಲೆಗಳಿಗೆ ವರ್ಗಾವಣೆ ಮಾಡಿದ ಉಳಿದ ಎಲ್ಲಾ ಶಿಕ್ಷಕರನ್ನು ಮರಳಿ ಗ್ರಾಮೀಣ ಪ್ರದೇಶಕ್ಕೆ ವರ್ಗ ಮಾಡಿ ಅಂತ ಜನಸಾಮಾನ್ಯರು ಆಗ್ರಹಿಸಿದ್ದಾರೆ.

ಹೀಗೆ ಆದ ಶಿಕ್ಷಕರ ಕೇವಲ 240 ಜನ ಶಿಕ್ಷಕರ ಗೋಳನ್ನು ಶಿಕ್ಷಕರ ಯಾವ ಸಂಘಟನೆಗಳು ಕೇಳುತ್ತಿಲ್ಲ ಇಲಾಖೆ ಸಹ ತಾರತಮ್ಯ ಮಾಡಿದೆ, ಯಾಕೆ ಈ ಅನ್ಯಾಯ ಸರಕಾರ ಇಲಾಖೆ ಇನ್ನಾದರೂ ಗಮನಹರಿಸಲಿ ಸಮಸ್ಯೆ ಗೆ ಸ್ಪಂದಿಸಲಿ ಎಂಬೊದು ನಮ್ಮ ಆಶಯವಾಗಿದೆ.

 

 

ಸುದ್ದಿ ಸಂತೆ ನ್ಯೂಸ್……

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.