ಅಫಘಾತದಲ್ಲಿ ಮೃತಪಟ್ಟ ಶಿಕ್ಷಕಿಗೆ ನಾಡಿನ ಶಿಕ್ಷಕರಿಂದ ಸಂತಾಪ ಚಿಕ್ಕಬಳ್ಳಾಪುರ ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಿಂದ ಕಂಬನಿ ಮೀಡಿದ ಶಿಕ್ಷಕ ಬಂಧುಗಳು…..

Suddi Sante Desk

ಕೊಡಗು –

ಕೊಡಗಿನಲ್ಲಿ ಭೀಕರ ಅಫಘಾತದಲ್ಲಿ ಮೃತರಾದ ಶಿಕ್ಷಕಿ ಅಶ್ವಿನಿ ಚೇತನಾ ಮೃತರಾಗಿದ್ದರು.ಹೌದು ಕೊಡಗು ಜಿಲ್ಲೆಯ ಕುಶಾಲನಗರ ಸಮೀಪದ ಹುಲುಸೆ ಹೆಬ್ಬಾಲೆ ಬಳಿ ಬೈಕ್ ಮತ್ತು ಬುಲೆರೋ ನಡುವೆ ನಡೆದ ರಸ್ತೆ ಅಪಘಾತ ದಲ್ಲಿ ಶಾಲಾ ಶಿಕ್ಷಕಿ ಸಾವನ್ನಪ್ಪಿದ್ದರು.ಜಿಲ್ಲೆಯ ಮರೂರು ಗ್ರಾಮದ ಅಶ್ವಿನಿ ಚೇತನಾ(45)ಮೃತರಾದ ಶಿಕ್ಷಕಿಯಾಗಿ ದ್ದರು.ಕುಶಾಲನಗರ ಸಮೀಪದ ಅಶ್ವಿನಿ ನೇರುಗಳಲೆ ಪ್ರಾಥಮಿಕ ಶಾಲೆಯ ಶಿಕ್ಷಕಿ ಕರ್ತವ್ಯ ನಿರ್ವಹಿಸುತ್ತಿದ್ದು ಶಾಲೆ ಮುಗಿಸಿ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಪಿಕಪ್ ಮತ್ತು ಸ್ಕೂಟರ್ ನಡೆವೆ ಡಿಕ್ಕಿಯಾಗಿ ಸ್ಥಳದಲ್ಲಿ ಶಿಕ್ಷಕಿ ಮೃತಪ ಟ್ಟಿದ್ದು ಇನ್ನೂ ಅಪಘಾತದಲ್ಲಿ ಮೃತರಾದ ಶಿಕ್ಷಕಿಯವರಿಗೆ ನಾಡಿನ ಮೂಲೆ ಮೂಲೆಗಳಿಂದ ಶಿಕ್ಷಕ ಬಂಧುಗಳು ಕಂಬನಿ ಮೀಡಿದಿದ್ದಾರೆ.

ಹೇ…ಭಗವಂತ ನಿನ್ನಲ್ಲಿ ದಾಯವೆಲ್ಲಿದೆ…ಎನ್ನುತ್ತಾ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸುತ್ತ ಹೋರಾಟವೇ ಉಸಿರಾಗಿ ಸಿಕೊಂಡ ಕ.ರಾ.ಪ್ರಾ.ಶಾ.ಶಿ.ಸಂಘ ರಾಜ್ಯ ಘಟಕದ ಸಂಘಟನಾ ಕಾರ್ಯದರ್ಶಿಗಳಾದ ಚೇತನ್ ರವರ ಧರ್ಮ ಪತ್ನಿ ಅಪಘಾತ ದಲ್ಲಿ ಮೃತ ಪಟ್ಟ ವಿಷಯ ತಿಳಿದು ಆಗಾದ ವಾಗಿದೆ ಅವರ ಅಗಲಿಕೆಯ ನೋವು ಸಹಿಸುವ ಶಕ್ತಿ ಮತ್ತು ಅವರ ಆತ್ಮಕ್ಕೆ ಶಾಂತಿ ಕರುಣಿಸಲಿ ಎಂದು ಆ ಭಗವಂತ ನಲ್ಲಿ ಬೇಡಿಕೊಳ್ಳುತ್ತಾ ಶ್ರೀಮತಿಯವರ ದೈವಾಧೀನತೆಗೆ ಚಿಕ್ಕಬಳ್ಳಾಪುರ ಜಿಲ್ಲಾ ಘಟಕದ ಹಾಗೂ ಎಲ್ಲಾ ತಾಲೂಕಿನ ಎಲ್ಲಾ ಪದಾಧಿಕಾರಿಗಳು ಹಾಗೇ ರಾಜ್ಯದ ಮೂಲೆ ಮೂಲೆ ಗಳಿಂದ ಶಿಕ್ಷಕ ಬಂಧುಗಳು ತೀವ್ರ ಸಂತಾಪವನ್ನು ಸೂಚಿಸಿ ಭಾವಪೂರ್ಣ ಶ್ರದ್ಧಾಂಜಲಿಯೊಂದಿಗೆ ನಮನವನ್ನು ಸಲ್ಲಿಸಿ ದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.