ಶಿಕ್ಷಕರ ಸಂಘಗಳ ಪರಿಷತ್ ನಿಂದ ಪುನೀತ್ ರಾಜ್‍ಕುಮಾರ್ ಗೆ ಸಂತಾಪ – ಭಾವಪೂರ್ಣ ನಮನ ಸಂತಾಪ…..

Suddi Sante Desk

ಧಾರವಾಡ –

ಕನ್ನಡ ಚಿತ್ರರಂಗದ ಯುವ ನಾಯಕ ನಟ ಪುನೀತ್ ರಾಜ್‍ಕುಮಾರ್ ಅವರಿಗೆ ಧಾರವಾಡದಲ್ಲಿ ಭಾವಪೂರ್ಣ ನಮನ ಸಂತಾಪವನ್ನು ಸೂಚಿಸಲಾಯಿತು. ಹೌದು ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಅಕ್ಷರ ತಾಯಿ ಲೂಸಿ ಸಾಲ್ಡಾನ ಸೇವಾ ಸಂಸ್ಥೆಯ ಮತ್ತು ಕರ್ನಾಟಕ ಶಿಕ್ಷಕರ ಪರಿಷತ್ತು ಧಾರವಾಡ ಈ ಒಂದು ಸಂಸ್ಥೆಗಳ ವತಿಯಿಂದ ಹಮ್ಮಿಕೊಂಡಿದ್ದ ಈ ಒಂದು ಕಾರ್ಯಕ್ರಮ ದಲ್ಲಿ ಪೂರ್ವಭಾವಿಯಾಗಿ ಅಗಲಿದ ನಾಯಕ ನಟನಿಗೆ ಸಂತಾಪವನ್ನು ಸೂಚಿಸಲಾಯಿತು

ವೇದಿಕೆಯ ಮೇಲೆ ಕನ್ನಡ ಚಿತ್ರರಂಗದ ಹೆಸರಾಂತ ನಾಯಕ ನಟನ ನಿಧನಕ್ಕೆ ಕಾರ್ಯಕ್ರಮದ ಪೂರ್ವ ದಲ್ಲಿ ಸಂತಾಪವನ್ನು ಸೂಚಿಸಲಾಯಿತು.ಉಪ್ಪಿನ ಬೆಟಗೇರಿ ಯ ಮೂರು ಸಾವಿರ ಮಠದ ಮ ನಿ ಪ್ರ ಕುಮಾರ ವಿರುಪಾಕ್ಷ ಮಹಾಸ್ವಾಮಿಗಳು ಇವರ ದಿವ್ಯ ಸಾನಿಧ್ಯದಲ್ಲಿ ಸಂತಾಪವನ್ನು ಸೂಚಿಸಲಾಯಿತು

ಇದೇ ವೇಳೆ ಒಂದು ನಿಮಿಷಗಳ ಕಾಲ ಅಗಲಿದ ನಾಯಕ ನಟನಿಗೆ ಮೌನಾಚರಣೆ ಸಲ್ಲಿಸಲಾಯಿತು ಹಾಗೇ ಭಾವಪೂರ್ಣ ನಮನದೊಂದಿಗೆ ನೆನೆಯಲಾಯಿತು

ಇನ್ನೂ ಈ ಒಂದು ಕಾರ್ಯಕ್ರಮ ದಲ್ಲಿ ಶ್ರೀಮತಿ ವಿದ್ಯಾ ನಾಡಿಗೇರ, ಶಂಕರ ಹಲಗತ್ತಿ,ಶ್ರೀಮತಿ ಲೂಸಿ ಕೆ ಸಾಲ್ಡಾನ,ಗುರುಮೂರ್ತಿ ಯರಗಂಬಳಿಮಠ,ವಾಯ್ ಬಿ ಕಡಕೋಳ,ಬಾಬಾಜಾನ ಮುಲ್ಲಾ,ಎಸ್ ವೈ ಸೊರಟಿ, ಸಂಗಮೇಶ ಖನ್ನಿನಾಯ್ಕರ,ಆರ್ ನಾರಾಯಣಸ್ವಾಮಿ ಚಿಂತಾಮಣಿ, ಎಲ್ ಐ ಲಕ್ಕಮ್ಮನವರ, ಅಶೋಕ ಸಜ್ಜನ, ಚಂದ್ರಶೇಖರ್ ತಿಗಡಿ,ಗುರು ತಿಗಡಿ,ಶಂಕರ ಗಟ್ಟಿ,ಸುರೇಶ ಗೋವಿಂದರಡ್ಡಿ,ಭೀಮಪ್ಪ ಕಸಾಯಿ,ಎಸ್ ಎಫ್ ಪಾಟೀಲ್ ಮಲ್ಲಿಕಾರ್ಜುನ ಉಪ್ಪಿನ, ಗುರು ಪೋಳ ಸೇರಿದಂತೆ ಹಲವರು ನಟನಿಗೆ ಪುಷ್ಪಾರ್ಚಣೆ ಮಾಡಿ ನಮನ ಸಲ್ಲಿಸಿ ನೆನೆಯಲಾಯಿತು

ವರದಿ ಸುದ್ದಿ ಸಂತೆ ಟೀಮ್

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.