ರಾಜ್ಯದ ಸರ್ಕಾರಿ ನೌಕರರ ಬೇಡಿಕೆಗಳನ್ನು ಈಡೇರಿಸಿದ CM,ರಾಜ್ಯಾಧ್ಯಕ್ಷರಿಗೆ ಶಿಗ್ಗಾವಿ ನೌಕರರ ಸಂಘದಿಂದ ಅಭಿನಂದನೆಗಳು – ಅರುಣ ಹುಡೇದಗೌಡ್ರು ಮತ್ತು ಟೀಮ್ ಪರವಾಗಿ ಅಭಿನಂದನೆಗಳು

Suddi Sante Desk
ರಾಜ್ಯದ ಸರ್ಕಾರಿ ನೌಕರರ ಬೇಡಿಕೆಗಳನ್ನು ಈಡೇರಿಸಿದ CM,ರಾಜ್ಯಾಧ್ಯಕ್ಷರಿಗೆ ಶಿಗ್ಗಾವಿ ನೌಕರರ ಸಂಘದಿಂದ ಅಭಿನಂದನೆಗಳು – ಅರುಣ ಹುಡೇದಗೌಡ್ರು ಮತ್ತು ಟೀಮ್ ಪರವಾಗಿ ಅಭಿನಂದನೆಗಳು

ಶಿಗ್ಗಾವಿ

ರಾಜ್ಯದ ಸರ್ಕಾರಿ ನೌಕರರ ಬೇಡಿಕೆಗಳನ್ನು ಈಡೇರಿಸಿದ CM,ರಾಜ್ಯಾಧ್ಯಕ್ಷರಿಗೆ ಶಿಗ್ಗಾವಿ ನೌಕರರ ಸಂಘದಿಂದ ಅಭಿನಂದನೆಗಳು – ಅರುಣ ಹುಡೇದಗೌಡ್ರು ಮತ್ತು ಟೀಮ್ ಪರವಾಗಿ ಅಭಿನಂದನೆಗಳು.

ಹೌದು ರಾಜ್ಯದ ಸರ್ಕಾರಿ ನೌಕರರ ಬೇಡಿಕೆ ಗಳನ್ನು ರಾಜ್ಯ ಸರ್ಕಾರ ಈಡೇರಿಸಿದೆ.ರಾಜ್ಯದ ನೌಕರರ ಮನವಿಗೆ ಸ್ಪಂದಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಚಿವ ಸಂಪುಟದ ಸದಸ್ಯರು ಕೂಡಲೇ ಮದ್ಯಂತರ ರೂಪದಲ್ಲಿ ಪ್ರತಿಶತ 17 ರಂದು ಪರಿಹಾರವನ್ನು ಹಾಗೇ ಹಳೆ ಪಿಂಚಣಿ ಯೋಜನೆ ಮರು ಜಾರಿಗೆ ತರುವ ಕುರಿತಂತೆ ಸಮಿತಿಯನ್ನು ರಚನೆ ಮಾಡುವ ಆದೇಶವನ್ನು ಹೊರಡಿಸಲಾಗಿದೆ.

ಈ ಎರಡು ಪ್ರಮುಖ ಬೇಡಿಕೆಗಳನ್ನು ಈಡೇರಿಸಿದ ರಾಜ್ಯ ಸರ್ಕಾರಕ್ಕೆ ಅದರಲ್ಲೂ ವಿಶೇಷವಾಗಿ ಮುಖ್ಯಮಂತ್ರಿಯವರಿಗೆ ತವರು ಜಿಲ್ಲೆಯ ಶಿಗ್ಗಾವಿ ಮತಕ್ಷೇತ್ರದ ತಾಲ್ಲೂಕಿನ ಸರ್ಕಾರಿ ನೌಕರರ ಬಂಧುಗಳು ಅಭಿಮಾನದ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.ತಾಲ್ಲೂಕಿನ ಸಂಘಟನೆಯ ಅಧ್ಯಕ್ಷ ಅರುಣ ಹುಡೇದಗೌಡ್ರ ನೇತ್ರತ್ವದಲ್ಲಿನ ಟೀಮ್ ನವರು ನಾಡ ದೊರೆಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.ಇನ್ನೂ ಈ ಒಂದು ವಿಚಾರದಲ್ಲಿ ಹಗಲಿರುಳು ಶ್ರಮಿಸಿದ ರಾಜ್ಯ ಸರ್ಕಾರಿ ನೌಕರರ ಸಂಘಟನೆಯ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರಿಗೂ ಕೂಡಾ ಹೃದಯಪೂರ್ವಕವಾದ ಧನ್ಯವಾದಗ ಳನ್ನು ಸಲ್ಲಿಸಿದ್ದಾರೆ.

ಅರುಣ ಹುಡೇದಗೌಡ್ರು ಅವರೊಂದಿಗೆ ತಾಲ್ಲೂಕಿನ ಸಂಘಟನೆಯ ಮುಖಂಡರುಗಳಾದ ಶಿವಯೋಗಿ ದೋಟಾಲಿ,ಸಿ ಡಿ ಯತ್ನಳ್ಳಿ,ರಮೇಶ ಹರಿಜನ,ಬಿ ಶ್ರೀನಿವಾಸ,ಗುರುರಾಜ ಹುಚ್ಚನ್ನವರ, ಎ ಎಫ್ ಹೊಸಮನಿ,ಎಸ್ ಎನ್ ಮುಗಳಿ, ಭೀಮಪ್ಪ ಉಪ್ಪಾರ,ಸೇರಿದಂತೆ ಸರ್ವ ಸದಸ್ಯರು ಮುಖ್ಯಮಂತ್ರಿ ಯವರಿಗೆ ಮತ್ತು ರಾಜ್ಯಾಧ್ಯಕ್ಷರಿಗೆ ಅಭಿಮಾನದ ಅಭಿನಂದನೆಗಳನ್ನು ಸಲ್ಲಿಸಿ ಶುಭಹಾರೈಸಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಶಿಗ್ಗಾವಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.