This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

ಧಾರವಾಡ

ಆಟೋ ಚಾಲಕರಿಗೆ ನೆರವಾದ ಕಾಂಗ್ರೇಸ್ ಪಕ್ಷದ ಯುವ ಮುಖಂಡ ರಜತ್ ಉಳ್ಳಾಗಡ್ಡಿಮಠ – ಹುಬ್ಬಳ್ಳಿಯಲ್ಲಿ ದಿನಕ್ಕೊಂದು ಹೊಸ ಹೊಸ ಸಂಚಲವನ್ನುಂಟು ಮಾಡುತ್ತಿರುವ ಯುವ ನಾಯಕ ಎದುರಾಳಿಗೆ ಹುಟ್ಟಿಕೊಂಡಿದೆ ನಡುಕ

WhatsApp Group Join Now
Telegram Group Join Now

ಹುಬ್ಬಳ್ಳಿ

ಹುಬ್ಬಳ್ಳಿ ಧಾರವಾಡ ಕೇಂದ್ರ ವಿಧಾನ ಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ವಿರುದ್ದ ಚುನಾವಣೆಯ ಮುನ್ನವೇ ಅಕಾಡಕ್ಕಿಳಿಸಿದ್ದಾರೆ ಕಾಂಗ್ರೇಸ್ ಪಕ್ಷದ ಯುವ ನೇತಾರ ರಜತ್ ಉಳ್ಳಾಗಡ್ಡಿಮಠ. ಕ್ಷೇತ್ರದಲ್ಲಿ 6 ಬಾರಿ ಶಾಸಕರಾಗಿರುವ ಜಗದೀಶ್ ಶೆಟ್ಟರ್ ಗೆ ಈ ಬಾರಿ ಚುನಾವಣೆಯಲ್ಲಿ ಠಕ್ಕರ್ ಕೊಡಬೇಕು ಎಂದುಕೊಂಡು ಅವರ ವಿರುದ್ದ ತೊಡೆ ತಟ್ಟಿದ್ದಾರೆ ರಜತ್ ಉಳ್ಳಾಗಡ್ಡಿಮಠ.

ಈಗಾಗಲೇ ಕಳೆದ ಆರೇಳು ತಿಂಗಳಿನಿಂದ ಬಿಡು ವಿಲ್ಲದೇ ಕ್ಷೇತ್ರದಲ್ಲಿ ಸುತ್ತಾಡುತ್ತಿರುವ ರಜತ್ ಉಳ್ಳಾಗಡ್ಡಿಮಠ ಅವರು ಮನೆ ಮನೆ ಅಭಿ ಯಾನ ಸೇರಿದಂತೆ ಹಲವಾರು ಜನಪ್ರಿಯ ಕಾರ್ಯಕ್ರಮಗಳ ಮೂಲಕ ಮನೆ ಮನೆಗೂ ತೆರಳಿ ಸಮಸ್ಯೆಗಳನ್ನು ಆಲಿಸುತ್ತಾ ಹೊಸ ಸಂಚಲವನ್ನುಂಟು ಮಾಡಿರುವ ಇವರು ಈಗ ಆಟೋ ಚಾಲಕರಿಗೂ ಕೂಡಾ ನೆರವಾಗಿದ್ದಾರೆ.

ಹೌದು ಪ್ರತಿಯೊಬ್ಬ ಆಟೋ ಚಾಲಕರಿಗೂ ಕೂಡಾ ಕುಕ್ಕರ್ ಗಳನ್ನು ನೀಡಿ ವೃತ್ತಿಗೆ ಅವಶ್ಯಕ ವಾಗಿ ಬೇಕಾಗಿರುವ ಸಮವಸ್ತ್ರಗಳನ್ನು ನೀಡಿ ಗೌರವಿಸುತ್ತಿದ್ದಾರೆ.

 

 

ಇದರೊಂದಿಗೆ ಕ್ಷೇತ್ರದಲ್ಲಿನ ಪ್ರತಿಯೊಬ್ಬ ಆಟೋ ಚಾಲಕರಿಗೂ ಕೂಡಾ ರಜತ್ ಅವರು ನೆರವಾಗಿ ಸ್ಪಂದಿಸುತ್ತಿದ್ದಾರೆ.ಪ್ರತಿಯೊಬ್ಬರಿಗೂ ಕೂಡಾ ಕುಕ್ಕರ್ ಗಳನ್ನು ನೀಡುತ್ತಾ ಇದರೊಂದಿಗೆ ಸಮ ವಸ್ತ್ರಗಳನ್ನು ವಿತರಣೆ ಮಾಡಿ ಸಾಲದಂತೆ ಆಟೋ ಗೆ ತಾಡಪಾಲ್ ನ್ನು ನೀಡಿ ನೆರವಾಗುತ್ತಿದ್ದಾರೆ.

ಇದರೊಂದಿಗೆ ಯುವ ನಾಯಕ ರಜತ್ ಕೇಂದ್ರ ವಿಧಾನ ಸಭಾ ಕ್ಷೇತ್ರದಲ್ಲಿ ಹೊಸ ಸಂಚಲವ ನ್ನುಂಟು ಮಾಡಿದ್ದು ಇವರ ಈ ಒಂದು ಕಾರ್ಯಕ್ಕೆ ಉತ್ತಮವಾದ ಸ್ಪಂದನೆ ಬೆಂಬಲ ಸಿಗುತ್ತಿದ್ದು ಇದನ್ನೇಲ್ಲವನ್ನು ನೋಡಿದ ಎದುರಾಳಿಗಳಿಗೆ ನಡುಕ ಹುಟ್ಟಿಕೊಂಡಿದ್ದು ಬೇರೆ ಬೇರೆ ತಂತ್ರಗ ಳನ್ನು ಪ್ಲಾನ್ ಗಳನ್ನು ತೆರೆ ಮರೆಯಲ್ಲಿ ಮಾಡು ತ್ತಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..

 

 


Google News

 

 

WhatsApp Group Join Now
Telegram Group Join Now
Suddi Sante Desk