ಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ರಾಜು ನಾಯಕವಾಡಿ – JDS ಪಕ್ಷಕ್ಕಾಗಿ ಎಷ್ಟೇಲ್ಲಾ ದುಡಿದರು ಸ್ಪಂದಿಸದ ವರಿಷ್ಠರ ಮೇಲೆ ಅಸಮಾಧಾನ ವ್ಯಕ್ತಪಡಿಸಿದ ರಾಜು ನಾಯಕವಾಡಿ…..

Suddi Sante Desk
ಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ರಾಜು ನಾಯಕವಾಡಿ – JDS ಪಕ್ಷಕ್ಕಾಗಿ ಎಷ್ಟೇಲ್ಲಾ ದುಡಿದರು ಸ್ಪಂದಿಸದ ವರಿಷ್ಠರ ಮೇಲೆ ಅಸಮಾಧಾನ ವ್ಯಕ್ತಪಡಿಸಿದ ರಾಜು ನಾಯಕವಾಡಿ…..

ಹುಬ್ಬಳ್ಳಿ

JDS ಪಕ್ಷಕ್ಕಾಗಿ ಹಗಲಿರುಳು ಕಷ್ಟ ಪಟ್ಟು ದುಡಿದರು ವರಿಷ್ಠರು ಸರಿಯಾಗಿ ಸ್ಪಂದಿಸಲಿಲ್ಲ ಹೀಗಾಗಿ ಜೆಡಿಎಸ್ ಪಕ್ಷದ ಪ್ರಾಥಮಿಕ ಸದಸ್ಯ ತ್ವಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಹುಬ್ಬಳ್ಳಿ ಧಾರವಾಡ ಕೇಂದ್ರ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಮುಖಂಡ ರಾಜು ನಾಯಕವಾಡಿ ಹೇಳಿದರು

ಹುಬ್ಬಳ್ಳಿಯಲ್ಲಿ ಸುದ್ದಿ ಗೋಷ್ಟಿ ಯಲ್ಲಿ ಮಾತನಾಡಿದ ಅವರು ಸಧ್ಯ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಧಾರವಾಡ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವೆ ಎಂದರು

ಜೆಡಿಎಸ್ ಹು-ಧಾ ಸೆಂಟ್ರಲ್ ಕ್ಷೇತ್ರದ ಮಾಜಿ ಅಧ್ಯಕ್ಷ ರಾಜು ನಾಯಕವಾಡಿ ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಬಹಳಷ್ಟು ವರ್ಷದಿಂದ ಜೆಡಿಎಸ್​ನಲ್ಲಿ ಸೇವೆ ಸಲ್ಲಿಸಿದ್ದೆ.ಕಳೆದ ವಿಧಾನಸಭಾ ಚುನಾವಣೆ ಯಲ್ಲಿ ನನಗೆ ಬಿ-ಫಾಮ್ರ್ ಕೊಡಲಿಲ್ಲ ಇದರಿಂದ ನನ್ನ ಬೆಂಬಲಿಗರು, ಎಸ್​ಎಸ್​ಕೆ ಸಮಾಜದವರು ಬೇಸರಗೊಂಡಿದ್ದಾರೆ.

ಇದೇಲ್ಲ ಕಾರಣದಿಂದಾಗಿ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವೆ ಎಂದರು.ಇನ್ನೂ ಪಕ್ಷದ ವರಿಷ್ಠರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.ಇನ್ನೂ ಈ ಒಂದು ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಗುರು ಅಂಗಡಿ, ಪರಶು ಬಾಕಳೆ, ರಾಜೇಂದ್ರ ಮಾಲಗತ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.