ಪಾಲಿಕೆಯ ಆಯುಕ್ತರ ವರ್ಗಾವಣೆಗೆ ಬೀದಿಗಿಳಿದ ಗುತ್ತಿಗೆದಾರರು – ಆಯುಕ್ತರ ದಿಢೀರ್ ವರ್ಗಾವಣೆಗೆ ಖಂಡನೆ ಹುಬ್ಬಳ್ಳಿಯಲ್ಲಿ ಪ್ರತಿಭಟನೆ ಕುಳಿತ ಗುತ್ತಿಗೆದಾರರು…..

Suddi Sante Desk
ಪಾಲಿಕೆಯ ಆಯುಕ್ತರ ವರ್ಗಾವಣೆಗೆ ಬೀದಿಗಿಳಿದ ಗುತ್ತಿಗೆದಾರರು – ಆಯುಕ್ತರ ದಿಢೀರ್ ವರ್ಗಾವಣೆಗೆ ಖಂಡನೆ ಹುಬ್ಬಳ್ಳಿಯಲ್ಲಿ ಪ್ರತಿಭಟನೆ ಕುಳಿತ ಗುತ್ತಿಗೆದಾರರು…..

ಹುಬ್ಬಳ್ಳಿ

ಪಾಲಿಕೆಯ ಆಯುಕ್ತರ ವರ್ಗಾವಣೆಗೆ ಬೀದಿಗಿಳಿದ ಗುತ್ತಿಗೆದಾರರು – ಆಯುಕ್ತರ ದಿಢೀರ್ ವರ್ಗಾವಣೆಗೆ ಖಂಡನೆ ಹುಬ್ಬಳ್ಳಿಯಲ್ಲಿ ಪ್ರತಿಭಟನೆ ಕುಳಿತ ಗುತ್ತಿಗೆದಾರರು ಹೌದು

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತ ಡಾ ರುದ್ರೇಶ ಘಾಳಿ ಯವರನ್ನು ರಾಜ್ಯ ಸರ್ಕಾರ ದಿಢೀರ್ ವರ್ಗಾವಣೆ ಮಾಡಲಾಗಿದೆ.ಪಾಲಿಕೆಗೆ ಆಯುಕ್ತರಾಗಿ ಬಂದು ಇನ್ನೂ ಆರು ತಿಂಗಳು ಕಳೆದಿಲ್ಲ ಆಗಲೇ ರಾಜ್ಯ ಸರ್ಕಾರ ಇವರನ್ನು ಎತ್ತಂಗಡಿ ಮಾಡಿದೆ

ಪಾಲಿಕೆಗೆ ಆಯುಕ್ತರಾಗಿ ಡಾ ರುದೇಶ ಘಾಳಿ ಬಂದ ಮೇಲೆ ಸಾಕಷ್ಟು ಪ್ರಮಾಣದಲ್ಲಿ ಬದಲಾವಣೆಯನ್ನು ಮಾಡಿ ಆರ್ಥಿಕ ಪರಸ್ಥಿತಿಯನ್ನು ಸರಿ ಮಾಡುವುದ ರೊಂದಿಗೆ ಅಭಿವೃದ್ದಿಯನ್ನು ಮಾಡಿದ್ದಾರೆ ಸಧ್ಯ ಪಾಲಿಕೆಯ ಆಡಳಿತ ವ್ಯವಸ್ಥೆ ಒಂದು ಹಂತಕ್ಕೆ ಬಂದಿದೆ ಎನ್ನುವಷ್ಟರಲ್ಲಿಯೇ ಏಕಾಎಕಿಯಾಗಿ ಇವರನ್ನು ವರ್ಗಾವಣೆ ಮಾಡಿದ್ದು

ಈ ಒಂದ ವಿಚಾರ ಕುರಿತಂತೆ ಸಧ್ಯ ಆಕ್ರೋಶ ಭುಗಿಲೆದ್ದಿದ್ದು ಇವರ ವರ್ಗಾವಣೆಯನ್ನು ಖಂಡಿಸಿ ಪಾಲಿಕೆಯ ಗುತ್ತಿಗೆದಾರರು ಪ್ರತಿಭಟನೆ ಮಾಡುತ್ತಿ ದ್ದಾರೆ.ದಕ್ಷ ಪ್ರಾಮಾಣಿಕ ಆಯುಕ್ತರನ್ನು ವರ್ಗಾವಣೆ ಯನ್ನು ಮಾಡಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು ಈ ಕೂಡಲೇ ಇವರ ವರ್ಗಾವಣೆಯನ್ನು ಹಿಂದೆ ಪಡೆಯಬೇಕು ರದ್ದು ಮಾಡಿ ಇವರನ್ನು ಇಲ್ಲಿಯೇ ಮುಂದುವರೆಸಬೇಕು ಎಂದು ಗುತ್ತಿಗೆದಾರರು ಪಟ್ಟು ಹಿಡಿದಿದ್ದಾರೆ

ಬೇಕೆ ಬೇಕು ದಕ್ಷ ಪ್ರಾಮಾಣಿಕ ಆಯುಕ್ತರು ಬೇಕು ಎನ್ನತ್ತಾ ಪಾಲಿಕೆಯ ಮುಖ್ಯ ಕಚೇರಿಯ ಆವರಣದಲ್ಲಿ ಪ್ರತಿಭಟನೆ ಮಾಡುತ್ತಿದ್ದು ಈ ಒಂದು ಹೋರಾಟವು ಡಾ ರುದ್ರೇಶ ಘಾಳಿ ಅವರ ದಕ್ಷತೆ ಪ್ರಾಮಾಣಿಕೆಯ ಕಾರ್ಯ ವೈಖರಿಗೆ ಹಿಡಿದ ಕೈಗನ್ನಡಿಯಾಗಿದ್ದು ಗುತ್ತಿಗೆದಾರರ ಪ್ರತಿಭಟನೆಯಿಂದಾದರೂ ರಾಜ್ಯ ಸರ್ಕಾರ ಸ್ಪಂದಿಸಿ ವರ್ಗಾವಣೆಯ ಆದೇಶವನ್ನು ಹಿಂದೆ ಪಡೆಯುತ್ತದೆಯಾ ಎಂಬೊದನ್ನು ಕಾದು ನೋಡಬೇಕಿದೆ.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ……

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.