ಕಲಘಟಗಿ ಕ್ಷೇತ್ರದಲ್ಲಿ ಮುಂದುವರೆದ ಛಬ್ಬಿ ಟೀಮ್ ನಿಂದ ಕುಕ್ಕರ್ ವಿತರಣೆ – ಎಮ್ಮೆಟ್ಟಿ ಗ್ರಾಮಸ್ಥರಿಂದ ಛಬ್ಬಿ ಗೆ ಬಹು ಪರಾಕ್ ಗ್ರಾಮದ ತುಂಬೆಲ್ಲಾ ಕುಕ್ಕರ್ ಗಳ ವಿತರಣೆ

Suddi Sante Desk
ಕಲಘಟಗಿ ಕ್ಷೇತ್ರದಲ್ಲಿ ಮುಂದುವರೆದ ಛಬ್ಬಿ ಟೀಮ್ ನಿಂದ ಕುಕ್ಕರ್ ವಿತರಣೆ – ಎಮ್ಮೆಟ್ಟಿ ಗ್ರಾಮಸ್ಥರಿಂದ ಛಬ್ಬಿ ಗೆ ಬಹು ಪರಾಕ್ ಗ್ರಾಮದ ತುಂಬೆಲ್ಲಾ ಕುಕ್ಕರ್ ಗಳ ವಿತರಣೆ

ಕಲಘಟಗಿ

ಧಾರವಾಡದ ಕಲಘಟಗಿಯಲ್ಲಿ ಕಾಂಗ್ರೇಸ್ ಪಕ್ಷದ ನಾಗರಾಜ ಛಬ್ಬಿ ಅವರ ಮಿಂಚಿನ ಸಂಚಾರ ಮುಂದುವರೆದಿದೆ.ಕಳೆದ ಒಂದೂವರೆ ತಿಂಗಳಿನಿಂದ ಕ್ಷೇತ್ರದಲ್ಲಿ ಬಿಡುವಿಲ್ಲದೇ ಸುತ್ತಾ ಡುತ್ತಿರುವ ನಾಗರಾಜ ಛಬ್ಬಿ ಮತ್ತು ಟೀಮ್ ನವರು ಬಿಡುವಿಲ್ಲದೇ ಸುತ್ತಾಡುತ್ತಿದ್ದಾರೆ.

ಈಗಾಗಲೇ ಕ್ಷೇತ್ರದ ಬಹುತೇಕ ಗ್ರಾಮಗಳಲ್ಲಿ ವಿಶೇಷ ಸಭೆಗಳನ್ನು ಮಾಡುತ್ತಾ ಸಮಸ್ಯೆಗಳನ್ನು ಆಲಿಸಿ ಕುಕ್ಕರ್ ಗಳನ್ನು ವಿತರಣೆ ಮಾಡುತ್ತಿರುವ ಇವರು ಇಂದು ಎಮ್ಮೆಟ್ಟಿ ಗ್ರಾಮದಲ್ಲಿ ಸಭೆಯನ್ನು ಮಾಡಿ ಗ್ರಾಮಸ್ಥರ ಮತ್ತು ಗ್ರಾಮದಲ್ಲಿನ ಸಮಸ್ಯೆ ಗಳನ್ನು ಆಲಿಸಿ ನಂತರ ಗ್ರಾಮದ ತುಂಬೆಲ್ಲಾ ಕುಕ್ಕರ್ ಗಳನ್ನು ವಿತರಣೆ ಮಾಡಿದರು.

ಮನೆ ಮನೆಗೂ ತೆರಳಿ ಮಹಿಳೆಯರಿಗೆ ಕುಕ್ಕರ್ ಗಳನ್ನು ನೀಡಿ ಬರುವ ಚುನಾವಣೆಯಲ್ಲಿ ಬೆಂಬಲಿಸಿ ನಿಮ್ಮೊಂದಿಗೆ ನಾವು ನಿಮ್ಮ ಸಮಸ್ಯೆ ಗಳಿಗೆ ನಾವು ಇರುತ್ತೇವೆ ಎಂಬ ಭರವಸೆಯನ್ನು ಪತಿಯ ಪರವಾಗಿ ಶ್ರೀಮತಿ ಜ್ಯೋತಿ ನಾಗರಾಜ ಛಬ್ಬಿ ಅವರು ಭರವಸೆಯನ್ನು ನೀಡಿದರು.

 

 

ಶ್ರೀಮತಿ ಜ್ಯೋತಿ ನಾಗರಾಜ ಛಬ್ಬಿ ಅವರೊಂದಿಗೆ ಬಸವರಾದ ಅಕ್ಕಿ,ಗುರನಾಥ ದಾನನ್ನವರ, ಶಂಕ್ರಯ್ಯ ಚಿಕ್ಕಮಠ,ಬಸಪ್ಪ ವಾಲಿಕಾರ, ಜಂಬಯ್ಯ ಚಿಕ್ಕಮಠ,ಬಸಪ್ಪ ವಾಲಿಕಾರ, ಗಂಗಯ್ಯ ಪೂಜಾರ,ಶ್ರೀಶೈಲ ಅಕ್ಕಿ,ನಿಜಪ್ಪ ಶಿಬಾರಗಟ್ಟಿ,ಶಿವಪುತ್ರ ಗಾಣಿಗೇರ,ಸಂಗಪ್ಪ ಕುರುಬರ,ಪೂಜಾ ಹಿರೇಮಠ,ಭಾರತಿ ಬದ್ದಿ, ಸುನಂದಾ ಬಡಿಗೇರ,ಸಂಗಪ್ಪ ಮಕನಾಪುರ, ಮಾರುತೆಪ್ಪ ತಳವಾರ,ಬಸವರಾದ ಛಬ್ಬಿ, ಮಂಜುನಾಥ ಮೊರಬದ ಸೇರಿದಂತೆ ಪಕ್ಷದ ಕಾರ್ಯಕರ್ತರು ಮುಖಂಡರು ಆಪ್ತರು ಗ್ರಾಮದ ಗುರು ಹಿರಿಯರು ಸೇರಿದಂತೆ ಹಲವರು ಪಾಲ್ಗೊಂಡು ಕಾರ್ಯಕ್ರಮಕ್ಕೆ ಸಾಥ್ ನೀಡಿ ಯಶಶ್ವಿಗೊಳಿಸಿದರು.

ಸುದ್ದಿ ಸಂತೆ ನ್ಯೂಸ್ ಕಲಘಟಗಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.