This is the title of the web page
This is the title of the web page

Live Stream

[ytplayer id=’1198′]

June 2025
T F S S M T W
 1234
567891011
12131415161718
19202122232425
2627282930  

| Latest Version 8.0.1 |

State News

ಪಾಲಿಕೆ ಚುನಾವಣೆ – ಮತ್ತೆ ನಾಳಿಗೆ ಮುಂದೂಡಿಕೆ

WhatsApp Group Join Now
Telegram Group Join Now

ಬೆಂಗಳೂರು –

ಮಹಾನಗರ ಪಾಲಿಕೆಗೆ ಚುನಾವಣೆ ನಡೆಸುವ ಸಂಬಂಧ ಬುಧವಾರ ಹೈಕೋರ್ಟ್‌ ಆದೇಶ ಪ್ರಕಟಿಸಲಿದೆ ಎಂದುಕೊಳ್ಳಲಾಗಿತ್ತು‌ .ಆದರೆ ಮತ್ತೆ ಅರ್ಜಿಯನ್ನು ನಾಳೆಗೆ ಮುಂದೂಡಲಾಯಿತು. ಈಗಾಗಲೇ ವಿಚಾರಣೆಯನ್ನು ಬಹುತೇಕವಾಗಿ ಅಂತಿಮಗೊಳಿಸಿರುವ ನ್ಯಾಯವಾದಿಗಳು ಬುಧವಾರ ಆದೇಶವನ್ನು ಪ್ರಕಟ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ ಮತ್ತೆ ಅರ್ಜಿಯನ್ನು ನಾಳಿಗೆ ಕಾಯ್ದಿರಿಸಲಾಗಿದೆ.ಬೆಂಗಳೂರಿನ ಹೈಕೊರ್ಟ್ ನಲ್ಲಿ ಈಗಾಗಲೇ ನಡೆದ ವಿಚಾರಣೆಯಲ್ಲಿ ರಾಜ್ಯ ಸರ್ಕಾರ ,ಚುನಾವಣಾ ಆಯೋಗ,ಅರ್ಜಿದಾರರು ಹೀಗೆ ಮೂವರ ಪರವಾಗಿ ನ್ಯಾಯವಾದಿಗಳಿಂದ ನ್ಯಾಯಾಧೀಶರು ವಾದ ಪ್ರತಿವಾದವನ್ನು ಆಲಿಸಿದ್ರು. ಈ ಹಿಂದೆ ಅಂದರೆ ಶುಕ್ರವಾರ ವಿಚಾರಣೆ ಮಾಡಿದ ವಿಭಾಗೀಯ ಪೀಠದ ನ್ಯಾಯಾಧೀಶರು ಇಂದಿಗೆ ಅರ್ಜಿಯನ್ನು ಮುಂದೂಡಿದ್ದರು.

ಹೀಗಾಗಿ ಬಹುತೇಕವಾಗಿ ಇಂದೇ ಆದೇಶವನ್ನು ಪ್ರಕಟಿಸಲಿದ್ದಾರೆ ಎನ್ನಲಾಗಿತ್ತು. ಈಗಾಗಲೇ ವಿಭಾಗೀಯ ಪೀಠದಲ್ಲಿ ವಿಚಾರಣೆ ಮಾಡಿದ ನ್ಯಾಯಮೂರ್ತಿಗಳು ಮತ್ತೆ ಚುನಾವಣಾ ಆಯೋಗ ಮತ್ತು ರಾಜ್ಯ ಸರ್ಕಾರದ ಪರ ವಕೀಲರಿಂದ ವಾದವನ್ನು ಆಲಿಸಿದ್ರು. ಅರ್ಜಿಯನ್ನು ವಿಚಾರಣೆಗೆ ಮುಂದೂಡಿದ್ದರು. ಮತ್ತೆ ಅರ್ಜಿಯನ್ನು ವಿಚಾರಣೆ ಮಾಡಿ ವಿಭಾಗೀಯ ಪೀಠದ ನ್ಯಾಯಮೂರ್ತಿಗಳು ವಾದ ಪ್ರತಿವಾದವನ್ನು ಆಲಿಸಿ ಇವತ್ತು ಆದೇಶವನ್ನು ಕಾಯ್ದಿರಿಸಿದ್ರು. ಈಗಾಗಲೇ ವಾದ ಪ್ರತಿವಾದವನ್ನು ಆಲಿಸಿರುವ ನ್ಯಾಯಮೂರ್ತಿಗಳು ಬಹುತೇಕವಾಗಿ ಬುಧವಾರ ಅಂತಿಮ ತೀರ್ಪನ್ನು ಪ್ರಕಟಿಸಲಿದ್ದಾರೆ ಎನ್ನಲಾಗಿತ್ತು ಅಲ್ಲದೇ ಈಗಾಗಲೇ ತಡವಾಗಿದ್ದು ಮತ್ತೆ ವಿಳಂಬವಾಗುತ್ತದೆ ಎಂಬ ಅಭಿಪ್ರಾಯ ಕೇಳಿ ಬಂದಿತು. ಇನ್ನೂ ರಾಜ್ಯ ಸರ್ಕಾರದ ಪರವಾಗಿ ಎಜಿ ಫಣೀಂದ್ರ ಅವರು ಹಾಜರಾಗಿದ್ದರು.ಇನ್ನೂ ಇತ್ತ ಚುನಾವಣೆ ವಿಳಂಬ ಕುರಿತಂತೆ ಹುಬ್ಬಳ್ಳಿಯ ಕಾಂಗ್ರೇಸ್ ಪಕ್ಷದ ಮುಖಂಡ ನಾಗರಾಜ ಗೌರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಇವರ ಪರವಾಗಿ ಎಸ್ ಪಿ ಶಂಕರ್ ನ್ಯಾಯವಾದಿಗಳು ಹಾಜರಾಗಿ ವಾದವನ್ನು ಮಂಡಿಸಿದ್ರು.ಒಟ್ಟಾರೆ ಈಗಾಗಲೇ ಮೂವರು ನ್ಯಾಯವಾದಿಗಳಿಂದ ವಾದ ಪ್ರತಿವಾದವನ್ನು ಆಲಿಸಿರುವ ವಿಭಾಗೀಯ ಪೀಠದ ನ್ಯಾಯಮೂರ್ತಿಗಳು ನಾಳೆಯಾದ್ರೂ ಚುನಾವಣೆ ಮಾಡುವ ಕುರಿತಂತೆ ಗ್ರೀನ್ ಸಿಗ್ನಲ್ ಅಂತಿಮ ತೀರ್ಪನ್ನು ನೀಡಲಿದ್ದಾರೆ. ನಾಳೆ ಆದರೂ ನ್ಯಾಯಾಲಯದ ಆದೇಶ ಬರುತ್ತದೆಯಾ ಎನ್ನುತ್ತಾ ಹುಬ್ಬಳ್ಳಿ ಧಾರವಾಡ ಜನತೆ ಕುತೂಹಲದಿಂದ ಕಾಯತಾ ಇದ್ದಾರೆ.


Google News

 

 

WhatsApp Group Join Now
Telegram Group Join Now
Suddi Sante Desk