7ನೇ ವೇತನ ಆಯೋಗದ ಈ ಕ್ಷಣದ ಅಪ್ಡೇಟ್ – 7ನೇ ವೇತನ ಆಯೋಗದ ಬಗ್ಗೆ ಒಂದಿಷ್ಟು ಮಾಹಿತಿ…..

Suddi Sante Desk
7ನೇ ವೇತನ ಆಯೋಗದ ಈ ಕ್ಷಣದ ಅಪ್ಡೇಟ್ – 7ನೇ ವೇತನ ಆಯೋಗದ ಬಗ್ಗೆ ಒಂದಿಷ್ಟು ಮಾಹಿತಿ…..

ಬೆಂಗಳೂರು

7ನೇ ವೇತನ ಆಯೋಗದ ಬಗ್ಗೆ ಒಂದಿಷ್ಟು ಮಾಹಿತಿ ಹೌದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಇಂದು ರಾಜ್ಯಾ ಧ್ಯಕ್ಷರಾದ  ಸಿ.ಎಸ್. ಷಡಾಕ್ಷರಿ ರವರ ನೇತೃತ್ವದಲ್ಲಿ ಏಳನೇ ವೇತನ ಆಯೋಗಕ್ಕೆ ಸಂಘದ ಅಭಿಪ್ರಾಯ,ಬೇಡಿಕೆ,ಮನವಿಯನ್ನು ಅತ್ಯಂತ ಸಮರ್ಥವಾಗಿ ಮಂಡಿಸಲಾಯಿತು.

7ನೇ ವೇತನ ಆಯೋಗದ ಸಮಿತಿಯ ಅಧ್ಯಕ್ಷ ಮತ್ತು ಸರ್ವ ಸದಸ್ಯರೊಂದಿಗೆ ಈ ಒಂದು ತುರ್ತು ಸಭೆಯನ್ನು ಮಾಡಲಾಯಿತು ರಾಜ್ಯದ ಸಮಸ್ತ ಸರ್ಕಾರಿ ನೌಕರರ ಬೇಡಿಕೆ ಯಾಗಿ ಷಡಾಕ್ಷರಿ ಅವರ ನೇತೃತ್ವದಲ್ಲಿ ಈ ಒಂದು ಸಭೆಯನ್ನು ಆಯೋಗದ ಕಚೇರಿ ಯಲ್ಲಿ ನಡೆಸಲಾಯಿತು

ಈ ಸಂದರ್ಭದಲ್ಲಿ ಕೇಂದ್ರ ಸಂಘದ ಪ್ರಮುಖ ಪದಾಧಿಕಾರಿಗಳು ಉಪಸ್ಥಿತರಿದ್ದು ವೇತನ ಆಯೋಗದ ಕುರಿತು ಅಭಿಪ್ರಾಯ ಹಂಚಿ ಕೊಂಡು ಕೂಡಲೇ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಕೆ ಮಾಡಿ ಜಾರಿಗೆ ತರುವ ಕುರಿತಂತೆ ಒತ್ತಾಯ ವನ್ನು ಮಾಡಲಾಯಿತು.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.