ಶಿಕ್ಷಕಿ ನಿಧನ – ಮೃತರಾದ ಶಿಕ್ಷಕಿ ಅನಸೂಬಾಯಿ ನಿಧನಕ್ಕೆ ನಾಡಿನ ಶಿಕ್ಷಕ ಬಂಧುಗಳಿಂದ ಸಂತಾಪ…..

Suddi Sante Desk

ಸಿಂದಗಿ –

ರಾಜ್ಯದಲ್ಲಿ ಮತ್ತೊರ್ವ ಹಿರಿಯ ಶಿಕ್ಷಕಿಯೊಬ್ಬರು ನಿಧನ ರಾಗಿದ್ದಾರೆ.ಹೌದು ಕಳೆದ ಕೆಲ ದಿನಗಳಿಂದ ಅನಾರೋಗ್ಯ ದಿಂದ ಬಳಲುತ್ತಿದ್ದ ಶ್ರೀಮತಿ.ಅನಸೂಬಾಯಿ ಸಾರವಾಡ ಮೃತರಾದ ಶಿಕ್ಷಕಿಯಾಗಿದ್ದಾರೆ.ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಮೊರಟಗಿ ಶಾಲೆಯಲ್ಲಿ ಸಹ ಶಿಕ್ಷಕಿ ಯಾಗಿ ಕರ್ತವ್ಯವನ್ನು ಮಾಡುತ್ತಿದ್ದರು.ಸಾಯಂಕಾಲ ಮನೆಯಲ್ಲಿಯೇ ನಿಧನರಾಗಿದ್ದು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ನಿಧನರಾದರು.

ಮೃತರು ಹಿರಿಯ ಶಿಕ್ಷಕಿಯಾಗಿದ್ದು ಮೃತರಿಗೆ ನಾಡಿನ ಮೂಲೆ ಮೂಲೆಗಳಿಂದ ಶಿಕ್ಷಕ ಶಿಕ್ಷಕಿಯರು ಭಾವಪೂರ್ಣ ನಮನ ಸಲ್ಲಿಸಿ ಸಂತಾಪವನ್ನು ಸೂಚಿಸಿದ್ದಾರೆ.ಅಂತ್ಯಕ್ರಿಯೆ ಸೋಮವಾರ ದಿನಾಂಕ 29 ರಂದು ಸ್ವಗ್ರಾಮವಾದ ಇಂಡಿ ತಾಲ್ಲೂಕಿನ ಶಿರಕನಹಳ್ಳಿಯಲ್ಲಿ ನಡೆಯಲಿದ್ದು ಇನ್ನೂ ಇವರ ನಿಧನಕ್ಕೆ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿ, ಪದಾಧಿಕಾರಿಗಳು ಮತ್ತು ನಿರ್ದೇಶಕರು, ಕರಾಪ್ರಾಶಾಶಿಸಂ, ಸಿಂದಗಿ ತಾಲೂಕಿನ ಸಮಸ್ತ ಶಿಕ್ಷಕ ಬಳಗದವರು ಸಂತಾಪವನ್ನು ಸೂಚಿಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.