ಚುನಾವಣಾ ಕರ್ತವ್ಯದಲ್ಲಿದ್ದ ಸರ್ಕಾರಿ ನೌಕರ ಸಾವು – ಬಿಸಲಿನ ತಾಪಮಾನದಿಂದ ಹೃದಯಾಘಾತದಿಂದ ಸಾವು…..

Suddi Sante Desk
ಚುನಾವಣಾ ಕರ್ತವ್ಯದಲ್ಲಿದ್ದ ಸರ್ಕಾರಿ ನೌಕರ ಸಾವು – ಬಿಸಲಿನ ತಾಪಮಾನದಿಂದ ಹೃದಯಾಘಾತದಿಂದ ಸಾವು…..

ಹುಮನಾಬಾದ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕರ್ತವ್ಯ ದ ಮೇಲಿದ್ದ ಸರ್ಕಾರಿ ನೌಕರರೊಬ್ಬರು ಹೃದಯಾ ಘಾತ ದಿಂದ ಮೃತಪಟ್ಟ ಘಟನೆ ಬೀದರ್ ನಲ್ಲಿ ನಡೆದಿದೆ ಹೌದು ಲೋಕಸಭಾ ಚುನಾವಣೆ ನಿಮಿತ್ಯ ಚಿಟಗುಪ್ಪ ತಾಲೂಕಿನ ಕೂಡಂಬಲ‌ ಗ್ರಾಮದ ಹೊರವಲಯದ ಚೆಕ್ ಪೊಸ್ಟ್ ನಲ್ಲಿ ಎಸ್.ಎಸ್.ಟಿ ತಂಡದಲಿ ಕಾರ್ಯ ನಿರ್ವಹಿ ಸುತ್ತಿದ್ದ ಕೃಷಿ ಇಲಾಖೆ ನೌಕರ ಹೃದಯ ಘಾತ ದಿಂದ ಮೃತ ಪಟ್ಟಿದ್ದಾರೆ.

ಚಿಟಗುಪ್ಪ ಪಟ್ಟಣದ ನಿವಾಸಿ ಆನಂದ್ ಲಕ್ಷ್ಮಣ ಮೃತಪಟ್ಟ ಅಧಿಕಾರಿಯಾಗಿದ್ದು.ನಿರ್ಣಾ ಗ್ರಾಮದ ಆರ್.ಎಸ್.ಕೆ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿ ದ್ದರು.ಚುನಾವಣಾ ನೀತಿ ಸಹಿಂತೆ‌ ಜಾರಿಯಾದ ನಂತರ ಕೊಡಂಬಲ್ ಚೆಕ್‌ಪೋಸ್ಟ್‌ ನಲ್ಲಿ‌ ಬೆಳಿಗ್ಗೆ 8 ರಿಂದ ಮಧ್ಯಾಹ್ನ 3 ಗಂಟೆಯ ವರೆಗೆ ಕರ್ತವ್ಯ ನಿರ್ವಹಿಸುತ್ತಿದ್ದರು

ಬಿಸಿಲಿನ ತಾಪ ಹೆಚ್ಚಾಗಿ ಮಧ್ಯಾಹ್ನ ಆರೋಗ್ಯ ಸಮಸ್ಯೆ ಕಂಡು ಬಂದ‌ ಹಿನ್ನಲ್ಲೆಯಲ್ಲಿ ಚಿಟಗುಪ್ಲ ಆಸ್ಪತ್ರೆಗೆ ತೆರಳುವ ಮಾರ್ಗದಲ್ಲಿಯೇ ಮೃತಪಟ್ಟಿ ದ್ದಾರೆ.ಪ್ರಾಥಮಿಕ ವರದಿಯ ಪ್ರಕಾರ ಹೃದಯ ಘಾತದಿಂದ ಮೃತಪಟ್ಟಿರಬೇಕು ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಹುಮನಾಬಾದ್……

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.