JSS ಕಾಲೇಜ್ ನಲ್ಲಿ ದೀಪಕ ಚಿಂಚೋರೆ ಪ್ರಚಾರ – ವಿದ್ಯಾರ್ಥಿಗಳೊಂದಿಗೆ ಸಂವಾದ ಮತಯಾಚನೆ…..

Suddi Sante Desk
JSS ಕಾಲೇಜ್ ನಲ್ಲಿ ದೀಪಕ ಚಿಂಚೋರೆ ಪ್ರಚಾರ – ವಿದ್ಯಾರ್ಥಿಗಳೊಂದಿಗೆ ಸಂವಾದ ಮತಯಾಚನೆ…..

ಧಾರವಾಡ

ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ದೀಪಕ ಚಿಂಚೋರೆ ಯವರ ಪ್ರಚಾರ ಜೋರಾಗಿದೆ ಹೌದು ದೀಪಕ್ ಚಿಂಚೋರೆ ಅವರು ಜೆ.ಎಸ್.ಎಸ್ ಕಾಲೇಜಿನ ಕಾರ್ಯದರ್ಶಿಗಳಾದ ಡಾ. ಅಜಿತ್ ಪ್ರಸಾದ್ ಅವರನ್ನು ಭೇಟಿಯಾದರು

ನಂತರ ವಿದ್ಯಾರ್ಥಿಗಳ ಬಳಿ ತೆರಳಿ ನಡೆಯಲಿರು ವಂತಹ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಕುರಿತು ಚರ್ಚಿಸಿ ಕಾಂಗ್ರೆಸ್ ಪಕ್ಷದ ಪ್ರಾಣಾಳಿಕೆ ಅಂಶವನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು

ತಾವುಗಳು ಕೋವಿಡ್ ಸಂದರ್ಭದಲ್ಲಿ ಮಾಡಿ ದಂತಹ ಕೆಲಸಗಳ ಬಗ್ಗೆ ಮಾಹಿತಿ ನೀಡಿದರು ವಿದ್ಯಾರ್ಥಿಗಳಿಗೆ ಬೇಕಾದ ಶೈಕ್ಷಣಿಕ ನೆರವು ಹಾಗೂ ಕ್ರೀಡಾ ನೆರವಿಗೆ ತಾವು ಬೆಂಬಲವಾಗಿ ಸದಾ ಇರುತ್ತೇನೆ ಎಂಬ ಭರವಸೆಯನ್ನು ನೀಡಿದರು.

ಈ ವೇಳೆಯಲ್ಲಿ ಅಲಿ ಗೊರವನಕೊಳ್ಳ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸದಸ್ಯ ರಾದ ಮಯೂರ ಮೋರೆ,ಯಾಸಿನ್ ಹಾವೇರ ಪೇಟ್, ರವಿ ಮಾಳಗೇಳ ಹಾಗೂ ಇತರ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.
.
ಸುದ್ದಿ ಸಂತೆ ನ್ಯೂಸ್ ಧಾರವಾಡ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.