ಧಾರವಾಡದಲ್ಲಿ ಸೋಮವಾರ ಸರ್ಕಾರಿ ನೌಕರರ ಬೃಹತ್ ಪ್ರತಿಭಟನಾ ಮೆರವಣಿಗೆ – PDO ಪರವಾಗಿ ಬೀದಿಗಿಳಿಯಲಿದ್ದಾರೆ ಧಾರವಾಡ ಜಿಲ್ಲಾ ಸರ್ಕಾರಿ ನೌಕರರ ಸಂಘ ಬನ್ನಿ ನ್ಯಾಯದ ಹೋರಾಟಕ್ಕೆ ಸಾಥ್ ನೀಡಿ ಗೌಡ್ರ ಕರೆ…..

Suddi Sante Desk
ಧಾರವಾಡದಲ್ಲಿ ಸೋಮವಾರ ಸರ್ಕಾರಿ ನೌಕರರ ಬೃಹತ್ ಪ್ರತಿಭಟನಾ ಮೆರವಣಿಗೆ – PDO ಪರವಾಗಿ ಬೀದಿಗಿಳಿಯಲಿದ್ದಾರೆ ಧಾರವಾಡ ಜಿಲ್ಲಾ ಸರ್ಕಾರಿ ನೌಕರರ ಸಂಘ ಬನ್ನಿ ನ್ಯಾಯದ ಹೋರಾಟಕ್ಕೆ ಸಾಥ್ ನೀಡಿ ಗೌಡ್ರ ಕರೆ…..

ಧಾರವಾಡ

ಧಾರವಾಡದಲ್ಲಿ ಸೋಮವಾರ ಸರ್ಕಾರಿ ನೌಕರರ ಬೃಹತ್ ಪ್ರತಿಭಟನಾ ಮೆರವಣಿಗೆ – PDO ಪರವಾಗಿ ಬೀದಿಗಿಳಿಯಲಿದ್ದಾರೆ ಧಾರವಾಡ ಜಿಲ್ಲಾ ಸರ್ಕಾರಿ ನೌಕರರ ಸಂಘ ಬನ್ನಿ ನ್ಯಾಯದ ಹೋರಾಟಕ್ಕೆ ಸಾಥ್ ನೀಡಿ

ಆರ್ ಟಿಐ ಕಾರ್ಯಕರ್ತನ ಕಿರುಕುಳದಿಂದ ಧಾರವಾಡದಲ್ಲಿ ಪಿಡಿಓ ರೊಬ್ಬರು ಆತ್ಮಹತ್ಯೆಗೆ ಯತ್ನಸಿದ್ದಾರೆ.ಸಧ್ಯ ಆಸ್ಪತ್ರೆಯಲ್ಲಿ ಪಿಡಿಓ ನಾಗರಾಜ ಗಿನಿವಾಲದ ಅವರೇ ಆತ್ಮಹತ್ಯೆಗೆ ಯತ್ನಿಸಿದ್ದು ಗುಣಮುಖರಾಗುತ್ತಿದ್ದಾರೆ.ಇನ್ನೂ ಈ ಒಂದು ಸರ್ಕಾರಿ ನೌಕರರ ಆತ್ಮಹತ್ಯೆಗೆ ಕಾರಣ ವಾಗಿ ಸಾಕಷ್ಟು ಕಿರುಕುಳವನ್ನು ನೀಡಿದ ಆರೋಪಿ ಯನ್ನು ಬಂಧಿಸುವಂತೆ ಒತ್ತಾಯಿಸಿ ಮತ್ತು ಸೂಕ್ತ ವಾದ ಕಾನೂನು ಕ್ರಮವನ್ನು ಕೈಗೊಳ್ಳಬೇಕು.

ಸರ್ಕಾರಿ ನೌಕರರಿಗೆ ಸೂಕ್ತವಾದ ರಕ್ಷಣೆಯನ್ನು ನೀಡಬೇಕು ಹೀಗೆ ಕೆಲವೊಂದಿಷ್ಟು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಧಾರವಾಡ ಜಿಲ್ಲಾ ಸರ್ಕಾರಿ ನೌಕರರ ಸಂಘವು ಪ್ರತಿಭಟನೆಗೆ ಕರೆ ನೀಡಿದೆ. ಹೌದು ಜಿಲ್ಲಾಧ್ಯಕ್ಷ ಎಸ್ ಎಫ್ ಸಿದ್ದನಗೌಡರ ನೇತ್ರತ್ವದಲ್ಲಿ ಸೋಮವಾರ ಬೃಹತ್ ಪ್ರತಿಭಟನೆಗೆ ಕರೆಯನ್ನು ನೀಡಲಾಗಿದೆ.

ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಯೊಂದಿಗೆ ಜಿಲ್ಲಾಧಿಕಾರಿ ಕಚೇರಿ ವರೆಗೆ ಈ ಒಂದು ಹೋರಾಟ ನಡೆಯಲಿದ್ದು ಪ್ರಮುಖವಾಗಿ ಪಿಡಿಓ ಗೆ ಕಿರುಕುಳವನ್ನು ನೀಡಿದ ಆರ್ ಟಿಐ ಕಾರ್ಯಕರ್ತನನ್ನು ಕೂಡಲೇ ಬಂಧಿಸಬೇಕು ಸರ್ಕಾರಿ ನೌಕರರಿಗೆ ಸೂಕ್ತವಾದ ರಕ್ಷಣೆಯನ್ನು ನೀಡಬೇಕು ಇದರೊಂದಿಗೆ ಇನ್ನೂ ಕೆಲ ಬೇಡಿಕೆ ಗಳನ್ನ ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾ ರಿಗಳಿಗೆ ಮನವಿಯನ್ನು ಜಿಲ್ಲಾ ಸರ್ಕಾರಿ ನೌಕರರು ಮನವಿಯನ್ನು ನೀಡಲಿದ್ದಾರೆ.

ಬನ್ನಿ ನ್ಯಾಯದ ಈ ಒಂದು ಹೋರಾಟಕ್ಕಾಗಿ ಎಲ್ಲರೂ ಪಾಲ್ಗೊಳ್ಳಿ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಸಮಸ್ತ ಸರ್ಕಾರಿ ನೌಕರರ ಪರವಾಗಿ ಜಿಲ್ಲಾಧ್ಯಕ್ಷ ಎಸ್ ಎಫ್ ಸಿದ್ದನಗೌಡ್ರು ಕರೆ ನೀಡಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಧಾರವಾಡ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.