This is the title of the web page
This is the title of the web page

Live Stream

[ytplayer id=’1198′]

November 2025
T F S S M T W
 12345
6789101112
13141516171819
20212223242526
27282930  

| Latest Version 8.0.1 |

State News

ಬೇರೆ ವಿಚಾರಗಳ ಬಗ್ಗೆ ಮಾತನಾಡೊದಿಲ್ಲ – ಕೋವಿಡ್ ನಿರ್ವಹಣೆ ನಮ್ಮ ಒನ್ ಪಾಯಿಂಟ್ ಪ್ರೋಗ್ರಾಂ – ಮತ್ತೆ ವರ್ಗವಾಣೆ ವಿಚಾರ ಏನಾಯಿತು ಸಾರ್…..

WhatsApp Group Join Now
Telegram Group Join Now

ಚಾಮರಾಜನಗರ –

ಬೇರೆ ವಿಚಾರಗಳ ಬಗ್ಗೆ ಏನು ಮಾತನಾಡಲ್ಲ ಕೋವಿಡ್ ನಿರ್ವಹಣೆ ನಮ್ಮ ಒನ್ ಪಾಯಿಂಟ್ ಪ್ರೋಗ್ರಾಂ ಹೀಗೆಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.ಚಾಮರಾಜನಗರದಲ್ಲಿ ಮಾತನಾಡಿದ ಅವರು ನಾಯಕತ್ವ ಬದಲಾವಣೆ ಕೂಗಿನ ಬಗ್ಗೆ ಎರಡು ಬಾರಿ ಪ್ರಶ್ನೆ ಕೇಳಿದರೂ ಕೋವಿಡ್ ನಿರ್ವಹಣೆಯೊಂದೆ ನಮಗಿರುವ ಗುರಿ ಅದೇ ಒನ್ ಪಾಯಿಂಟ್ ಪ್ರೋಗ್ರಾಂ ಎಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದರು.

ಚಾಮರಾಜನಗರ ಜಿಲ್ಲಾಡಳಿತ ಭವನದಲ್ಲಿ ಆ್ಯಕ್ಸಿಜ ನ್ ಸೌಲಭ್ಯದ ಬಸ್ ಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾಯ ಕತ್ವ ಬದಲಾವಣೆ ಕುರಿತ ಪ್ರಶ್ನೆಗೆ ಅವರು ಪ್ರತಿಕ್ರಿಯಿ ಸಿ, ಕೋವಿಡ್ ನಿರ್ವಹಣೆ ಬಗ್ಗೆ ಅಷ್ಟೇ ನಾವು ಈಗ ಯೋಚಿಸಬೇಕು. ಬೇರೆ ಯಾವ ವಿಚಾರದ ಬಗ್ಗೆ ಯಾರೂ ಕೂಡ ಮಾತನಾಡಬಾರದು, ಕೋವಿಡ್ ತಡೆಗಟ್ಟುವುದೇ ನಮ್ಮ ಮುಂದಿರುವ ಒಂದಂಶದ ಕಾರ್ಯಕ್ರಮ ಎನ್ನುವ ಮೂಲಕ ಯಡಿಯೂರಪ್ಪ ಬದಲಾವಣೆ ಬಗ್ಗೆ ಎದ್ದಿರುವ ಕೂಗಿಗೆ ಪ್ರತಿಕ್ರಿಯೆ ಕೊಡಲು ನಿರಾಕರಿಸಿದರು.

ಇನ್ನೂ ಆ್ಯಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಹೆಸರು ಪರಿಹಾರ ಪಟ್ಟಿಯಲ್ಲಿ ನಾಪತ್ತೆಯಾಗಿರುವ ಕುರಿತು ಮಾತನಾಡಿ, ಸಂತ್ರಸ್ತ ಕುಟುಂಬದವರು ಅರ್ಜಿ ಕೊಟ್ಟಿದ್ದಾರೆ. ಪರಿಶೀಲಿಸಿ ಕ್ರಮ ಕೈಗೊಳ್ಳಲಾ ಗುವುದು ಪಿಯುಸಿ ವಿದ್ಯಾರ್ಥಿಗಳಿಗೆ ವ್ಯಾಕ್ಸಿನ್ ಕೊಡುವ ಸಂಬಂಧ ಕೇಂದ್ರ ಸರ್ಕಾರದ ಜೊತೆ ಮಾತನಾಡುತ್ತಿದ್ದೇವೆ ಎಂದು ತಿಳಿಸಿದರು.

ಇನ್ನು, ಇಂದು ಚಾಲನೆ ಕೊಟ್ಟಿರುವ ಆ್ಯಕ್ಸಿಜನ್ ಕಾನ್ಸಂಟ್ರೇಟ್ ಇರುವ ಬಸ್ ನ್ನು ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಇರಿಸಲಾಗುವು ದು. 8 ಕಾನ್ಸಂಟ್ರೇಟ್ ಗಳಿದ್ದು ಉಸಿರಾಟ ಸಮಸ್ಯೆ ಇರುವವರು ಆಸ್ಪತ್ರೆಗೆ ದಾಖಲಾಗುವ ಮುನ್ನ ಅವರನ್ನು ಸುಧಾರಿಸಲು ಈ ಆಕ್ಸಿಜನ್ ಬಸ್ ಸಹಾಯಕವಾಗಿದೆ ಎಂದು ತಿಳಿಸಿದರು.


Google News

 

 

WhatsApp Group Join Now
Telegram Group Join Now
Suddi Sante Desk