ಬೆಂಗಳೂರು –
ಅಂಗನವಾಡಿಯಲ್ಲಿ ಟೀಚರ್ ಆಗಲು ರಾಜ್ಯ ಸರ್ಕಾರ ಕೆಲವೊಂದಿಷ್ಟು ಮಾರ್ಪಾಡನ್ನು ಮಾಡಿದೆ.ಹೌದು ಈವರೆಗೆ ಇದ್ದ ನಿಯಮಾವಳಿ ಯಲ್ಲಿ ಪ್ರಮುಖವಾಗಿ ಡಿಪ್ಲೊಮಾ ಪದವಿಯನ್ನು ಕಡ್ಡಾಯಗೊಳಿಸಿ ಹೊಸ ಆದೇಶವನ್ನು ಮಾಡಿದೆ ಇದರೊಂದಿಗೆ ಅಂಗನವಾಡಿ ಕಾರ್ಯಕರ್ತೆಯ ರಿಗೆ ಸರ್ಕಾರ ಬಿಗ್ ಶಾಕ್ ನ್ನು ನೀಡಿದೆ.
ಇನ್ಮುಂದೆ ಅಂಗನವಾಡಿ ಟೀಚರ್ ಆಗಲು ಡಿಪ್ಲೊಮಾ ಮಾಡಿರಲೇಬೇಕು ಎಂಬ ಹೊಸ ನಿಯಮವನ್ನು ಜಾರಿಗೆ ತರುವ ಮೂಲಕ ಅಂಗನವಾಡಿ ಕಾರ್ಯಕರ್ತೆಯರಿಗೆ ಶಾಕ್ ನೀಡಲಾಗಿದೆ.ಎನ್ಇ್ಪಿ ನಿಯಮದಲ್ಲಿ ಮಾರ್ಪಾಡು ಮಾಡಿರುವ ಸರ್ಕಾರ ಡಿಪ್ಲೊಮಾ ಮಾಡಿರುವ ಮಹಿಳೆಯರನ್ನು ಮಾತ್ರ ಅಂಗನ ವಾಡಿ ಟೀಚರ್ ಗಳನ್ನಾಗಿ ನೇಮಿಸಿಕೊಳ್ಳುವಂತೆ ಆದೇಶದಲ್ಲಿ ಹೊರಡಿಸಿದೆ.
ಇದರ ಜೊತೆಗೆ ಅಂಗನವಾಡಿ ಕಾರ್ಯಕರ್ತೆಯರ ನೇಮಕದಲ್ಲೂ 10ನೇ ತರಗತಿ ಇಲ್ಲವೇ ಪಿಯುಸಿ ಉತ್ತೀರ್ಣರಾಗಿ ರುವವರನ್ನು ಪರಿಗಣಿಸುವಂತೆ ಯೂ ಸೂಚನೆ ನೀಡಲಾಗಿದೆ.ಅಂಗನವಾಡಿ ಕೇಂದ್ರಗಳೂ ಮಕ್ಕಳ ಆರೈಕೆ ಮತ್ತು ಅಭಿವೃದ್ಧಿ ಕೇಂದ್ರವಾಗಿರು ವುದರಿಂದ ಮಕ್ಕಳ ಶೈಕ್ಷಣಿಕ ಗುಣಮಟ್ಟ ದೃಷ್ಟಿಕೋನದಿಂದ ಇಂತಹ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮಹಿಳೆ ಅಭಿವೃದ್ಧಿ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ತಿಳಿಸಿದ್ದು ಇದಕ್ಕೆ ರಾಜ್ಯದಲ್ಲಿ ಯಾವ ರೀತಿಯಲ್ಲಿ ಸ್ಪಂದನೆ ಸಿಗುತ್ತದೆ ಎಂಬೊದನ್ನು ಕಾದು ನೋಡ ಬೇಕಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..