ಶಾಲೆಯಲ್ಲಿ ಮೊಟ್ಟೆ ನಿಲ್ಲಿಸುವಂತೆ ಸರ್ಕಾರಕ್ಕೆ ಸಮಿತಿ ಶಿಫಾರಸ್ಸು ವರದಿ ಸಲ್ಲಿಕೆ ಬೆನ್ನಲ್ಲೇ ಬುಗಿಲೆದ್ದ ಅಸಮಾಧಾನ…..

Suddi Sante Desk

ಬೆಂಗಳೂರು –

ಶಾಲೆ ಮಕ್ಕಳ ಮಧ್ಯಾಹ್ನದ ಬಿಸಿಯೂಟದಲ್ಲಿ ಮೊಟ್ಟೆ, ಸುವಾಸನೆಯುಕ್ತ (ಫ್ಲೇವರ್ಡ್‌) ಹಾಲು,ಬಿಸ್ಕೆಟ್‌ನಂತಹ ಆಹಾರ ನೀಡದೆ ಸಾತ್ವಿಕ ಆಹಾರಕ್ಕೆ ಒತ್ತು ನೀಡಬೇಕು. ಶಾಲಾ ಅವಧಿಯಲ್ಲಿ 10 ದಿನ ಬ್ಯಾಗ್‌ ರಹಿತ ದಿನ ಆಚರಿಸಿ ಅಂದು ಶೂ ಧರಿಸುವುದನ್ನು ಕೂಡ ನಿಲ್ಲಿಸಬೇಕು.ನೂತನ ರಾಷ್ಟ್ರೀಯ ಶಿಕ್ಷಣ ನೀತಿ 2020ರಲ್ಲಿ (ಎನ್‌ಇಪಿ) ಜಾರಿಗೊ ಳಿಸಬೇಕೆಂದು ರಾಜ್ಯ ಸರ್ಕಾರದ ಕಾರ್ಯಪಡೆಯು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ಇವೆ.

ಶಾಲಾ ಹಂತದಲ್ಲಿ ಎನ್‌ಇಪಿ ಜಾರಿ ಮಾಡಲು ಯಾವ್ಯಾವ ತರಗತಿ ಮಕ್ಕಳಿಗೆ ಪಠ್ಯಕ್ರಮ ಹೇಗಿರಬೇಕು ಏನನ್ನು ಬೋಧಿಸಬೇಕು ಎಂಬ ಬಗ್ಗೆ ರಾಜ್ಯ ಸರ್ಕಾರಗಳಿಂದಲೂ ಕೇಂದ್ರ ಸರ್ಕಾರ ವರದಿ ಕೇಳಿತ್ತು.ಈ ಸಂಬಂಧ ಕರ್ನಾಟಕ ಸರ್ಕಾರ ವರದಿ ನೀಡಲು ನಿವೃತ್ತ ಐಎಎಸ್‌ ಅಧಿಕಾರಿ ಮದನ್‌ಗೋಪಾಲ್‌ ನೇತೃತ್ವದ ಕಾರ್ಯಪಡೆ ರಚಿಸಿ ಒಟ್ಟು 26 ವಿಷಯ ಪತ್ರಿಕೆಗಳಿಗೆ (ಪೊಜಿಷನ್‌ ಪೇಪರ್ಸ್) ಪ್ರತ್ಯೇಕ ಸಮಿತಿ ರಚಿಸಿ ವರದಿ ಪಡೆದಿದೆ.

ಈ ಪೈಕಿ ನಿಮ್ಹಾನ್ಸ್‌ ಮಕ್ಕಳು ಮತ್ತು ಹದಿಹರೆಯದವರ ಮನೋ ವೈದ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಕೆ.ಜಾನ್‌ ವಿಜಯ್‌ ಸಾಗರ್‌ ಅವರ ನೇತೃತ್ವದಲ್ಲಿ ಮಕ್ಕಳ ಆರೋಗ್ಯ ಮತ್ತು ಆಹಾರಕ್ಕೆ ಸಂಬಂಧಿಸಿದಂತೆ ತಯಾರಿಸಿರುವ ಹೊಸ ವಿಷಯ ಪತ್ರಿಕೆಯಲ್ಲಿ ಇಂತಹ ಅಂಶಗಳನ್ನು ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ.ಆದರೆ ಈ ಅಂಶ ಗಳಿಗೆ ವಿವಿಧ ಸಂಘಟನೆಗಳು ಹಾಗೂ ವೈದ್ಯಕೀಯ ಕ್ಷೇತ್ರದ ತಜ್ಞರಿಂದಲೇ ಆಕ್ಷೇಪ ವ್ಯಕ್ತವಾಗಿದೆ.ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚಿರುವುದರಿಂದ ಶಾಲೆಗಳಲ್ಲಿ ಮೊಟ್ಟೆನೀಡಲಾಗುತ್ತಿದೆ.

ಬದಲಾದ ಆಹಾರ ಪದ್ಧತಿಯಿಂದ ಹೆಣ್ಣುಮಕ್ಕಳು ಬಹಳ ಬೇಗ ಪ್ರೌಢಾವಸ್ಥೆಗೆ ತಲುಪುತ್ತಿದ್ದಾರೆ.ಗಂಡು ಮಕ್ಕಳು ಬೇಗ ಯೌವನಾವಸ್ಥೆಗೆ ತಲುಪುವಂತಹ ಬದಲಾವಣೆಗಳಾ ಗುತ್ತಿವೆ.ಸುವಾಸನೆಯುಕ್ತ ಹಾಲು,ಬಿಸ್ಕೆಟ್‌,ಹೆಚ್ಚು ಕೊಬ್ಬಿನ ಅಂಶವಿರುವ ಮೊಟ್ಟೆಮತ್ತಿತರ ಆಹಾರ ಸೇವನೆಯಿಂದ ಮಕ್ಕಳ ಹಾರ್ಮೋನ್ಸ್‌ ವ್ಯತ್ಯಯವಾಗಿ ಇಂತಹ ಅಸಮ ತೋಲನತೆಯುಂಟಾಗುತ್ತದೆ.ಅಲ್ಲದೆ,ಮೊಟ್ಟೆ, ಮಾಂಸದಂ ತಹ ಆಹಾರ ಸೇವನೆಯು ವಿವಿಧ ಕಾಯಿಲೆಗಳಿಗೂ ದಾರಿಯಾಗುತ್ತದೆ.ಹಾಗಾಗಿ ಬಿಸಿಯೂಟದಲ್ಲಿ ಇಂತಹ ಆಹಾರಗಳನ್ನು ಆಯ್ಕೆ ಮಾಡದೆ ಕೊಬ್ಬಿನ ಅಂಶವಾಗಿ ಪರಿವರ್ತನೆಯಾಗದ ಕಡಿಮೆ ಕ್ಯಾಲರಿಯುಕ್ತ ಸಾತ್ವಿಕ ಆಹಾರಗಳನ್ನು ನೀಡುವತ್ತ ಗಮನ ಹರಿಸಬೇಕು ಎಂದು ಸಮಿತಿ ಶಿಫಾರಸು ಮಾಡಲಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.