ಕಲಘಟಗಿ ಯಲ್ಲಿ ಮುಂದುವರೆದ ಛಬ್ಬಿ ಟೀಮ್ ನಿಂದ ಕುಕ್ಕರ್ ವಿತರಣೆ…..

Suddi Sante Desk
ಕಲಘಟಗಿ ಯಲ್ಲಿ ಮುಂದುವರೆದ ಛಬ್ಬಿ ಟೀಮ್ ನಿಂದ ಕುಕ್ಕರ್ ವಿತರಣೆ…..

ಕಲಘಟಗಿ

ಕಾಂಗ್ರೆಸ್ ಪಕ್ಷದ ಮಾಜಿ ವಿಧಾನ ಪರಿಷತ್ ಸದಸ್ಯ ನಾಗರಾಜ ಛಬ್ಬಿ  ಮತ್ತು ಅವರ ಪತ್ನಿ ಶ್ರೀಮತಿ ಜ್ಯೋತಿ ನಾಗರಾಜ ಛಬ್ಬಿ ಅವರ ಟೀಮ್ ನ ಸಂಚಾರ ಕಾರ್ಯಕ್ರಮ ಧಾರವಾಡ ದ ಕಲಘಟಗಿ ಯಲ್ಲಿ ಮುಂದುವರೆದಿದೆ.ಹೌದು ಕಲಘಟಗಿ ವಿಧಾನ ಸಭಾ ಕ್ಷೇತ್ರದ  ಅಳ್ನಾವರ ತಾಲೂಕಿನ ಕನ್ನಿಕೊಪ್ಪ ಗ್ರಾಮದಲ್ಲಿ ಶ್ರೀಮತಿ ಜ್ಯೋತಿ ನಾಗರಾಜ್ ರವರ ನೇತೃತ್ವದಲ್ಲಿ ಕುಕ್ಕರ್ ವಿತರಣಾ ಕಾರ್ಯಕ್ರಮವನ್ನು ಮಾಡಲಾಯಿತು.

ಗ್ರಾಮದಲ್ಲಿ ಮೊದಲು ಮಹಿಳೆಯರೊಂದಿಗೆ ಸಭೆ ಮಾಡಿ ಸಮಸ್ಯೆ ಗಳನ್ನು ಆಲಿಸಿದರು ಇದೇ ವೇಳೆ ಬರುವ ದಿನಗಳಲ್ಲಿ ನಿಮ್ಮೊಂದಿಗೆ ಸದಾಕಾಲವೂ ಇದ್ದುಕೊಂಡು ಕಷ್ಟ ಗಳಿಗೆ ಸ್ಪಂದಿಸಿ ಅಭಿವೃದ್ಧಿ ಗೆ ಸ್ಪಂದಿಸುವುದಾಗಿ ಹೇಳಿದರು

ಈ ವೇಳೆ ಗುರುನಾಥ್ ದಾನವೇನವರ್, ಬಸವ ರಾಜ್ ಹಡಪದ್,ಮಲ್ಲಿಕಾರ್ಜುನ್ ಬಡಿಗೇರ್, ಗುರುಸಿದ್ದಯ್ಯ ಹಿರೇಮಠ್, ಕರಿಯಪ್ಪ ಬಮ್ಮಿಗಟ್ಟಿ, ಚನ್ನಬಸಪ್ಪ ಗೋವಿಂದನವರ್, ಸಂಗನಗೌಡ ಪಾಟೀಲ್, ಶೇಕನಗೌಡ ಪಾಟೀಲ್, ಸೋಮನಗೌಡ ಪಾಟೀಲ್, ಶೇಕಪ್ಪ ಕುರುಬರ್, ಶಿವನಗೌಡ ಪಾಟೀಲ್, ನಿಂಗಪ್ಪ ಗೋವಿಂದನ ವರ್, ಯಲ್ಲಪ್ಪ ಗೋವಿಂದನವರ್, ಶಂಕರ್ ಗೌಡ ಪಾಟೀಲ್,ಉಮೇಶ್ ದಂಡಿ,ಮಹದೇವಪ್ಪ ಬಣಗಾರ್, ಬಸವರಾಜ್ ಶಿವನೂರ್    ಉಪಸ್ಥಿ ತರಿದ್ದರು.

ಸುದ್ದಿ ಸಂತೆ ನ್ಯೂಸ್ ಕಲಘಟಗಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.